ಬಿಸಿ ಬಿಸಿ ಸುದ್ದಿ

ಸೋಂಕಿತರ ಸೇವೆ ಮಾಡಿದ್ದಕ್ಕೆ ನಮಗೆ ಈ ಶಿಕ್ಷೆನಾ..?:ಗೋಳು ಹೇಳುತ್ತಲೇ ಕಣ್ಣೀರಾದ ಆಶಾ ಕಾರ್ಯಕರ್ತೆ

ವಾಡಿ: ಹಾಲು ಕುಡಿಯುವ ಮಕ್ಕಳನ್ನ ಮನ್ಯಾಗ ಬಿಟ್ಟು, ಮಹಾಮಾರಿ ಸೋಂಕಿತರ ಮನೆಗೆ ಭೇಟಿ ಕೊಟ್ಟು, ಅಸುರಕ್ಷತೆಯ ನಡುವೆ ನಿರ್ಭಯವಾಗಿ ಶಂಕಿತ ರೋಗಿಗಳ ಕೈಗಳಿಗೆ ಸೀಲ್ ಹಾಕಿದ್ದು ತಪ್ಪಾಯ್ತೋ? ಜನರ ಆರೋಗ್ಯ ಸೇವೆಯೇ ದೇವರ ಸೇವೆ ಎಂದು ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದೇ ತಪ್ಪಾಯ್ತೋ? ಯಾಕ್ ಸರ್ಕಾರ ನಮ್ಮ ಕಷ್ಟ ಕೇಳುತ್ತಿಲ್ಲ? ಹೊಟ್ಟೆ ತುಂಬುವಷ್ಟು ಊಟ ಕೊಡ್ರೀ ಅಂತ ಕೇಳೋದೇ ತಪ್ಪಾ? ಪಗಾರ್ ಇಲ್ದೆ ಕಣ್ಣೀರಾಗ ಕೈತೊಳಿಲಾಕತ್ತೀವ್ರಿ. ನಮ್ಮ ಬ್ಯಾನಿ ನಮ್ಗೇ ಗೊತ್ರಿ. ಮನ್ಯಾಗ ಒಪ್ಪತ್ತಿನ ಕೂಳಿಲ್ದೆ ಸಾಯಾಕತ್ತೀವ್ರಿ. ಕೆಲ್ಸಾ ಬಿಟ್ಟು ಹೋರಾಟಕ್ಕೆ ನಿಂತು ೧೧ ದಿನ ಆಯಿತ್ರಿ. ಇಷ್ಟಾದ್ರೂ ಯಾರೂ ನಮ್ಮ ಕಷ್ಟ ಕೇಳಾವಲ್ರಿ. ನಾವೇನು ಪಾಪಿಗಳಾ..? ಹೀಗೆ ತನ್ನ ಬದುಕಿನ ಗೋಳು ಹೇಳಿಕೊಳ್ಳುತ್ತಲೇ ಆಶಾ ಕಾರ್ಯಕರ್ತೆಯೊಬ್ಬರು ಕಣ್ಣೀರಾದ ಪ್ರಸಂಗ ನಡೆಯಿತು.

ಗೌರವಧನ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳಿಗಾಗಿ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಮುಷ್ಕರಕ್ಕೆ ಕರೆ ನೀಡಿ ಹೋರಾಟದಲ್ಲಿರುವ ಆಶಾ ಕಾರ್ಯಕರ್ತೆಯರು, ಮಂಗಳವಾರ ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್‌ಐ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತ ವಿಜುಬಾಯಿ ರಾಠೋಡ ಎಂಬ ಆಶಾ ಕಾರ್ಯಕರ್ತೆ ಕೊರೊನಾ ವಾರಿಯರ್ಸ್ ಆಶಾಗಳ ಜೀವನದ ಹಿಂದಿನ ಕರಾಳ ಕಥೆ ಬಿಚ್ಚಿಡುವ ಮೂಲಕ ಭಾವುಕರಾದರು. ಇಷ್ಟು ದಿನ ನಮ್ಮ ಸೇವೆಯನ್ನು ಬಳಸಿಕೊಂಡ ಸರಕಾರಕ್ಕೆ ಇಂದು ನಾವು ಬೇಡವಾಗಿದ್ದೇವೆ. ಹೋರಾಟದ ಹಕ್ಕಿನಡಿ ನ್ಯಾಯ ಪಡೆಯುತ್ತೇವೆ. ಎಲ್ಲಾ ಸಂಘ ಸಂಸ್ಥೆಗಳು ನಮಗೆ ದನಿಯಾಗಬೇಕು ಎಂದು ಮನವಿ ಮಾಡಿದರು.

ಆಶಾ ಹೋರಾಟ ಬೆಂಬಲಿಸಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರಾದ ಸಿದ್ದಯ್ಯಶಾಸ್ತ್ರೀ ನಂದೂರಮಠ, ಭಾಗಣ್ಣ ಬಿ.ದೊರೆ ಹಾಗೂ ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಮಾಸಿಕ ರೂ.೧೨೦೦೦ ಗೌರವಧನ ಹೆಚ್ಚಳದ ಬೇಡಿಕೆ ಸಮಂಜಸವಾಗಿದೆ. ಮಹಾಮಾರಿ ಕೊರೊನಾ ಯುದ್ಧದಲ್ಲಿ ಪ್ರಾಮಾಣಿಕ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕನಿಷ್ಟ ಗೌರವಧನ ಹೆಚ್ಚಿಸಿಲು ಹಿಂದೇಟು ಹಾಕುತ್ತಿರುವುದು ಅಮಾನವೀಯವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಆಶಾಗಳ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ, ಎಐಡಿವೈಒ ಮುಖಂಡ ರಾಜು ಒಡೆಯರಾಜ, ಬಸವರಾಜ ನಾಟೀಕಾರ, ಆಶಾಗಳಾದ ವಿಜುಬಾಯಿ ರಾಠೋಡ, ರತ್ನಮ್ಮ ಕಟ್ಟಿಮನಿ, ಶಿವುಲೀಲಾ ಹಡಪದ, ಸುನೀತಾ ಸಿಂಧೆ, ಅನಿತಾ ಬೂತಪೂರ, ಅರುಣಾ ಫಸ್ಫುಲ್, ಶಾಂತಾಬಾಯಿ ವಾಡೇಕರ ಸೇರಿದಂತೆ ಮತ್ತಿತರರು ಪಿಎಸ್‌ಐ ವಿಜಯಕುಮಾರ ಭಾವಗಿ ಅವರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

emedialine

Recent Posts

ಶಹಾಪುರ: ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ

ಶಹಾಪುರ ತಾಲೂಕಿನ ಸಗರ ಗ್ರಾಮ ಆಡಳಿತ ಅಧಿಕಾರಿ ರಮೇಶ್ ರಾಠೋಡ್ ಶಹಾಪುರ : ರೈತರು ಬೆಳೆವಿಮೆ, ಪರಿಹಾರ,ಸಾಲ ಮನ್ನಾ,ಇತರೆ ಸೇರಿದಂತೆ…

33 mins ago

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

6 hours ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

19 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

20 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

21 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

21 hours ago