ಕಲಬುರಗಿ: ನಾಗರ ಪಂಚಮಿ ಹಬ್ಬದಂದು ಲಕ್ಷಾನುಗಟ್ಟಲೆ ಹಾಲು ಕಲ್ಲು ನಾಗರಕ್ಕೆ ಹಾಗೂ ಹುತ್ತಕ್ಕೆ ಹಾಕುವುದರ ಮೂಲಕ ಪೋಲು ಮಾಡುವುದರ ಜೊತೆಗೆ ಕಂದಾಚಾರ ಮತ್ತು ಮೌಢ್ಯಕ್ಕೆ ಪುಷ್ಟಿ ನೀಡಿದಂತಾಗುತದೆ ಆದ್ದರಿಂದ ಇಂತಹ ಆಚರಣೆಗಳು ನಿಲ್ಲಬೇಕು, ಪ್ರತಿವರ್ಷ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲಿ ಸಾವನ್ನಪ್ಪುತಿದ್ದು ಹಬ್ಬದ ಆಚರಣೆಗಳು ದೇವರ ಉತ್ಸವಗಳಲ್ಲಿ ಹಾಲಿನಿ ಅಭಿಷೇಕ ಮಾಡಿ ಹಾಲನ್ನು ಪೋಲು ಮಾಡುವ ಬದಲು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಹಾಲನು ವಿತರಣೆ ಮಾಡಬೇಕೆಂದು ದಲಿತ ಯುವ ಮುಖಂಡ ಸಂತೋಷ ಮೇಲ್ಮನಿ ಕರೆ ನೀಡಿದರು.
ಶುಕ್ರವಾರ ರಿಪಬ್ಲಿಕನ್ ಯುತ್ ಫೇಡರೇಶನ ಕಲಬುರಗಿ, ಜಿಲ್ಲಾ ದಲಿತ ಯುವ ಸಮನ್ವಯ ಸಮಿತಿ ಕಲಬುರಗಿ, ವಿದ್ಯಾರ್ಥಿ ಬಂಧುತ್ವ ವೇದಿಕೆ ಕಲಬುರಗಿ ಮತ್ತು ಮಾನವ ಬಂಧುತ್ವ ವೇದಿಕೆ ಕಲಬುರಗಿ ವತಿಯಿಂದ ನಾಗರಪಂಚಮಿ ಹಬ್ಬದ ನಿಮಿತ್ಯ ಕಲಬುರಗಿ ನಗರದ ಕೇಂದ್ರ ಬಸ ನಿಲ್ದಾಣದ ಕಣ್ಣಿ ಮಾರ್ಕೇಟ ಹತ್ತಿರ ಇರುವ ಗುಡಿಸಲಲ್ಲಿ ವಾಸಿಸುವ ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ನಾಗರ ಪಂಚಮಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಕಟ್ಟಿಮನಿ, ಹಣಮಂತ ಇಟಗಿ, ದಿನೇಶ ದೊಡಮನಿ, ನಾಗೇಂದ್ರ ಜವಳಿ, ಧರ್ಮಣ್ಣಾ ಕೋಣೆಕರ್, ಶಿವು ಜಾಲವಾದ, ಶಿವಕುಮಾರ ನಂದಿ, ರಾಣು ಮುದ್ದನಕರ್, ಮಹೇಶ ಬೆಡಜುರ್ಗಿ, ಸಿದ್ಧಾರ್ಥ ಚಿಂಚನಸೂರ, ರತನ ಕನ್ನಡಗಿ, ಪ್ರವೀಣ ಸಿಂಘೆ, ಸಂತೋಷ ಅಷ್ಟಗಿ ಮತ್ತು ಸಂಜೀವಕುಮಾರ ಸಿಂಗೆ ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…