ಸೇಡಂ: ಪಟ್ಟಣದ ವಾರ್ಡ ನಂ.1 ರಲ್ಲಿ ಸಣ್ಣ ಅಗಸಿ ಹೋಗುವ ಚೌಕಿನಲ್ಲಿ ಕಳೆದ 23 ವರ್ಷಗಳಿಂದ ಮಧ್ಯರಾತ್ರಿಗೆ ಧ್ವಜಾರೋಹಣ ನೆರವೇರಿಸುತ್ತ ಬಂದಿರುವುದು ಈ ಬಾರಿಯೂ ಮಧ್ಯ ರಾತ್ರಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಸೇಡಂ ಠಾಣೆಯ ಪಿಎಸ್ ಐ ಸುಶೀಲಕುಮಾರ ಅವರಿಂದ ಧ್ವಜಾರೋಹಣ ನೆರವೇರಿಸಿದರು. ಜನಾರ್ಧನರೆಡ್ಡಿ ತುಳೇರ, ಬಸವಣ್ಣ ಬೋಳದ, ನಾಗೇಶರೆಡ್ಡಿ, ನಾಗೇಂದ್ರಪ್ಪ ರಾಜಾಪುರ, ಡಾ.ಮುರುಗೇಂದ್ರರೆಡ್ಡಿ, ಬಸವರಾಜ ಸಕ್ರಿ, ಶಂಕರ ಬೋಳದ, ವಿರೇಶ ಬೋಳದ, ಬಸವರಾಜ ಬಾಳಿ ಸೇರಿದಂತೆ ಅನೇಕರಿದ್ದರು. ಭಾರತ ಸ್ವಾತಂತ್ರ್ಯದ 50 ರ ಸಂಭ್ರಮದಿಂದ ಇದೂವರೆಗೂ ಮಧ್ಯರಾತ್ರಿಗೆ ಧ್ವಜಾರೋಹಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 24 ವರ್ಷದಿಂದ ನಿರಂತರವಾಗಿ, ಮಳೆ ಎನ್ನದೇ ಮಧ್ಯರಾತ್ರಿಗೆ ಧ್ವಜಾರೋಹಣವನ್ನು ನನ್ನ ನೇತೃತ್ವದಲ್ಲಿ ಶುರುವಾಯಿತು. ಆರಂಭದಲ್ಲಿ ಕೆಲವರು ಬೈಯ್ದರು. ಸುಮ್ಮನೆ ಮನೇಲಿ ಕೂಡೋದು ಬಿಟ್ಟು ಇವೆಲ್ಲ ನಿನಗ್ಯಾಕೆ ಎಂದರು. ಆದರೂ ಬಿಡಲಿಲ್ಲ. ಈ ಕಾರ್ಯಕ್ರಮ ಇದೂವರೆಗು ಅಂದರೆ 24 ವರ್ಷ ಈ ವರ್ಷ ನಡೆದುಕೊಂಡು ಬಂದಿದೆ. ನಮ್ಮ ಈ ಪ್ರದೇಶದ ಎಲ್ಲ ಯುವಕರು ಇದಕ್ಕೆ ಕೈಜೋಡಿಸಿದ್ದಾರೆ ಎಂದರು.
ಹಿರಿಯರಾಗಿರುವ ದಿ.ಅಂಜನರೆಡ್ಡಿ ಗರ್ಕಾ, ಚಂದ್ರಶೇಖರ ಊಡಗಿ, ಸಿದ್ದಪ್ಪ ನೂಲಾ, ಭೀಮಶೆಟ್ಟಿ ಬೋಳದ, ಶಿವಪುತ್ರಪ್ಪ ಸಕ್ರಿ, ನಾಗೇಂದ್ರಪ್ಪ ರುದ್ನೂರ, ಸರ್ವಜ್ಞಮೂರ್ತಿ ಬೋಳದ, ಹೀಗೆ ಅನೇಕರು ಇವತ್ತು ನಮ್ಮ ಮಧ್ಯೆ ಇಲ್ಲದಿದ್ದರೂ ಅವರೆಲ್ಲರೂ ಮಧ್ಯರಾತ್ರಿಗೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದ್ದಾರೆ.
ತಹಸೀಲ್ದಾರ ಆಗಿದ್ದ ಸುಬ್ಬಣ್ಣ ಜಮಖಂಡಿ, ಪೊಲೀಸ್ ಅಧಿಕಾರಿಗಳಾಗಿದ್ದ ವಿ.ಎನ್.ಪಾಟೀಲ, ಭೀಮಣ್ಣ, ಶಂಕರಗೌಡ ಪಾಟೀಲ, ರಾಜಶೇಖರ ಹಳಿಗೋಧಿ, ಪಿ.ಎಸ್.ಸಾಲಿಮಠ ಸೇರಿದಂತೆ ಅನೇಕರು ಆಗಮಿಸಿದ್ದರು. ಭಾಗದ ಹಿರಿಯರಾದ ನಾಗೇಶ್ವರರಾವ ಮಾಲಿಪಾಟೀಲ, ಪ್ರಭಾಕರ ಜೋಶಿ , ಭೀಮರೆಡ್ಡಿ ಅಗನೂರ, ಮಾರುತಿರಾವ ಕುಲಕರ್ಣಿ, ಧನಶೆಟ್ಟಿ ಸಕ್ರಿ, ಶರಣರೆಡ್ಡಿ ಪಾಟೀಲ, ಚಿನ್ನಪ್ಪ ತುಳೇರ, ಶರಣಪ್ಪ ತುಳೇರ, ಶರಣಪ್ಪ ತಳವಾರ ಸೇರಿದಂತೆ ಅನೇಕ ರೈತರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟ ಕಾರ್ಯ ನಡೆಯಿತು.
ಅಷ್ಟೇ ಪ್ರಾಥಮಿಕ ಶಾಲೆಯ ಗುರುಗಳಾಗಿರುವ ಬಸವಲಿಂಗಮ್ಮ, ಬಸವರಾಜ ಪಾಟೀಲ ಸೇಡಂ ಅವರು ಆಗಮಿಸಿ, ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮೆರುಗು ತಂದರು. ಕಳೆದ ವರ್ಷ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯರಾದ ಶ್ರೀ ಸದಾಶಿವ ಸ್ವಾಮೀಜಿ ಆಗಮಿಸಿದ್ದರು. ಊರಿನ ಗಣ್ಯರು, ಅಧಿಕಾರಿಗಳು, ಗಲ್ಲಿಯ ಹಿರಿಯರು, ಯುವಕರು ಭಾಗವಹಿಸುವ, ಅಂತಹದ್ದೇ ಸಂಭ್ರಮ ಮತ್ತೆ ಬಂದಿದೆ ಎಂದು ಪತ್ರಕರ್ತ- ಲೇಖಕ ಮಹಿಪಾಲರೆಡ್ಡಿ ಮುನ್ನೂರ ತಿಳಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…