ವಾಡಿ: ಸತ್ಯಾಗ್ರಹ ಚಳುವಳಿಗೆ ಶಿಸ್ತುಬದ್ಧ ರಕ್ಷಣೆ ನೀಡುತ್ತಿದ್ದ ಸೇವಾದಳ ಸೇವಕರಿಂದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಬಲಶಾಲಿಯಾಗಿ ಬಳೆಯಲು ಸಾಧ್ಯವಾಯಿತು. ಕುಗ್ಗಿದ ಪಕ್ಷ ಸಂಘಟನೆ ಪುನಶ್ಚೇತನಗೊಳಿಸಲು ಮತ್ತೆ ಸೇವಾದಳ ಸೈನ್ಯ ಕಟ್ಟಬೇಕಿದೆ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಹಣಮಂತರಾವ ಜವಳೆ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕ ಅಧ್ಯಕ್ಷ ಡಾ.ನಾರಾಯಣ ಸುಬ್ಬರಾವ ಹರ್ಡೇಕರ್ ಅವರ ೪೬ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಹಿಂದುಸ್ತಾನಿ ಸೇವಾದಳವಾಗಿ ಉದಯವಾದ ಈ ಶಿಸ್ತಿನ ಸಂಘಟನೆ ೧೯೩೧ರಲ್ಲಿ ಕಾಂಗ್ರೆಸ್ನಲ್ಲಿ ವಿಲೀನವಾಯಿತು. ಸೇವಾದಳ ಸಂಸ್ಥಾಪಕ ಡಾ.ನಾರಾಯಣ ಸುಬ್ಬರಾವ ಹರ್ಡೇಕರ್ ಅವರು ಗಾಂಧೀಜಿಯೊಡನೆ ಸೇರಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂದೀಜಿ ಅವರ ರಾಷ್ಟ್ರೀಯತೆ, ನೆಹರು ಅವರ ಆದರ್ಶ, ಜಾತ್ಯಾತೀತತೆ, ಧರ್ಮಸಹಿಷ್ಣುತೆ ಕುರಿತು ದೇಶದ ಜನರಲ್ಲಿ ಮತ್ತು ಯುವಜನರಲ್ಲಿ ಹೋರಾಟದ ಹುಮ್ಮಸ್ಸು ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಸೇವಾದಳ ಸಂಘಟನೆ ಈಗ ಮರುಹುಟ್ಟು ಪಡೆಯಬೇಕಿದೆ ಎಂದರು.
ಸೇವಾದಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ರಾಜಶೇಖರ ಪಾಟೀಲ ಹೆಬಳಿ ಮಾತನಾಡಿ, ಬ್ರಿಟೀಷರು ದೇಶಬಿಟ್ಟು ಹೋದ ಗಳಿಗೆಯಲ್ಲಿ ಹಲವು ಆಂತರಿಕ ಬಿಕ್ಕಟ್ಟುಗಳು ಸೃಷ್ಠಿಯಾದವು. ತತ್ವ ಸಿದ್ಧಾಂತದ ಮೇಲೆ ನಡೆಯುತ್ತಿದ್ದ ಸೇವಾದಳ ನಾಯಕರಲ್ಲಿ ಹೊಸ ಚಿಂತನೆ ಮೂಡಿಸಲು ಕಾರಣವಾಯಿತು. ದೇಶವನ್ನು ಕಟ್ಟಲು ಮುಂದಾದ ನಾಯಕರಿಗೆ ಸೇವಾದಳ ಸೇವಕರು ಪೊಲೀಸರಂತೆ ಶಿಸ್ತುಬದ್ಧ ಸುರಕ್ಷತೆ ನೀಡಿ ತ್ಯಾಗ ಮರೆದಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಹಿರಿಯ ಮುಖಂಡ ಟೋಪಣ್ಣ ಕೋಮಟೆ ಅಧ್ಯಕ್ಷತೆ ವಹಿಸಿದ್ದರು. ಸೇವಾದಳ ನಗರ ಘಟಕದ ಅಧ್ಯಕ್ಷ ವಿಠ್ಠಲ ಚವ್ಹಾಣ, ಉಪಾಧ್ಯಕ್ಷ ಶಾಂತಕುಮಾರ ಜಗದಾಳೆ, ಮುಖಂಡರಾದ ಚಂದ್ರಸೇನ ಮೇನಗಾರ, ದೇವಿಂದ್ರ ಕರದಳ್ಳಿ, ಮಹ್ಮದ್ ಇಸೂಫ್ ಕಮರವಾಡಿ, ದಾವೂದ್ ಪಟೇಲ, ರಮೇಶ ಬಡಿಗೇರ, ಮಹ್ಮದ್ ಗೌಸ್, ಚಾಂದಮಿಯ್ಯಾ, ವಿಜಯಕುಮಾರ ಸಿಂಗೆ, ಶೇಖ ಮಹೆಬೂಬ, ಕಿಶನ ನಾಯಕ, ಲಕ್ಷ್ಮಣ ಅಮಕಾರ, ನರಸಪ್ಪ ಹೊಸಮನಿ, ಮಲ್ಲಿಕಾರ್ಜುನ ಕಟ್ಟಿ, ಮಹೇಶ ಸುತಾರ ಪಾಲ್ಗೊಂಡಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…