ಸಾರಸ್ವತ ಲೋಕದ ಬಹುದೊಡ್ಡ ವಿದ್ವಾಂಸ ಡಾ:ಈಶ್ವರಯ್ಯ ಮಠ: ಜೆ.ಅಗಸ್ಟಿನ್

ಸುರಪುರ: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿಗಳಾದ ಡಾ:ಈಶ್ವರಯ್ಯ ಮಠ,ಕೆ.ವಿರಪ್ಪ ಹಾಗು ಏಕದಂಡಗಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿಗಳ ಕುರಿತು ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಸಂಘ ಸುರಪುರ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನುಡಿನಮನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಜೆ.ಅಗಸ್ಟಿನ್ ಮಾತನಾಡಿ, ಈ ನಾಡು ಅನೇಕ ಶ್ರೇಷ್ಠರ ಕೊಡುಗೆಯಿಂದ ಅತ್ಯಂತ ಚಲನಶೀಲತೆ ಪಡೆದಿದೆ. ಸಾಹಿತಿ ಈಶ್ವರಯ್ಯ ಮಠ ಕನ್ನಡದ ಬಹುದೊಡ್ಡ ವಿದ್ವಾಂಸರಾಗಿದ್ದರು, ಕೆ.ವೀರಪ್ಪ ಪುರಾಣಗಳನ್ನು, ನವ್ಯ ನವೋದಯ ಕಾವ್ಯಗಳನ್ನು ಬರೆದವರು, ಯಾದಗಿರಿಯ ಏಕದಂಡಗಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಗುರುನಾಥೇಂದ್ರ ಸರಸ್ವತಿ ಸ್ವಾಮಿಜಿಗಳು ಅವಿರತವಾಗಿ ಸಮಾಜದ ಏಳ್ಗೆಗಾಗಿ ಪ್ರಯತ್ನಿಸಿದ್ದರು, ಇವರೆಲ್ಲರ ಅಗಲಿಕೆ ನಮಗೆಲ್ಲಾ ತುಂಬಾ ನೋವುಂಟು ಮಾಡಿದೆ, ಈ ಸಮಾಜವು ಇವರ ಋಣವನ್ನು ಸದಾ ಸ್ಮರಿಸುತ್ತದೆ. ಅಲ್ಲದೇ ಸುರಪುರದ ಕನ್ನಡ ಸಾಹಿತ್ಯ ಸಂಘವನ್ನು ಪುನರುಜ್ಜೀವನಗೊಳಿಸೋಣ ಎಂದರು.

ಸಭೆಯಲ್ಲಿದ್ದ ಸುರಪುರ ತಾಲೂಕಾ ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ‘ಈ ನಾಡು ಕಳೆದ ಎರಡು ತಿಂಗಳ ಅವಧಿಯಲ್ಲಿ ಅನೇಕ ಹಿರಿಯ ಸಾಹಿತಿಗಳನ್ನು, ಪ್ರತಿಭಾವಂತರನ್ನು ಕಳೆದುಕೊಂಡು ಸಾಹಿತ್ಯಲೋಕ ಬಡವಾಗುತ್ತಿದೆ, ‘ಕತ್ತಲಲ್ಲಿ ಅರಳಿದ ದಿಗ್ಗಜರ ಸಾಲು ಸಾಲೇ, ಸಾಲು ದೀಪಗಳ ಹಚ್ಚಿ ಕತ್ತಲಲ್ಲಿ ನಿಂತ ಸಂತರೆಲ್ಲಾ’ ಮರೆಯಾಗುತ್ತಿದ್ದಾರೆ. ಅದಕ್ಕೇ ನಿಶ್ಯಬ್ಧ ಹೇಳುತ್ತಿದೆ’, ‘ಸಾವಿಗೇ ಸಾವು ಬರಲಿ ಎಂದು ನಿಶ್ಯಬ್ಧ ನುಡಿಯಿತು’, ಈ ಸಾವಿನ ಸರಪಳಿ ಕೊನೆಗೊಂಡು, ನಾಡು ಮತ್ತೆ ನವಚೈತನ್ಯ ಪಡೆಯಲಿ’ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ, ನ್ಯಾಯವಾದಿ ನಿಂಗಣ್ಣ ಚಿಂಚೋಡಿ, ಬೀರಣ್ಣ ಬಿ.ಕೆ. ಆಲ್ದಾಳ, ಮಹಾಂತೇಶ ಗೋನಾಲ ಮಾತನಾಡಿ ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು.ಇದೇ ಸಂದರ್ಭದಲ್ಲಿ ಅಗಲಿದ ಸಾಹಿತಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ಸಭೆಯಲ್ಲಿ ನ್ಯಾಯವಾದಿ ಯಲ್ಲಪ್ಪ ಹುಲಕಲ್ಲ, ಕಾಂಗ್ರೆಸ್ ಸಮಿತಿ ಪ.ಪಂ.ಪ್ರ.ಕಾರ್ಯದರ್ಶಿ ರಮೇಶ ದೊರೆ, ನಬೀಲಾಲ ಮಕಾನದಾರ, ಶರಣಬಸಪ್ಪ ಯಾಳವಾರ, ದೊಡ್ಡಮಲ್ಲಿಕಾರ್ಜುನ ಉದ್ಧಾರ, ರಾಘವೇಂದ್ರ ಭಕ್ರಿ, ಕೃಷ್ಣ ದರಬಾರಿ, ಮೋನಪ್ಪ ಕಳಸರ, ರಾಘವೇಂದ್ರ ಬಾಡಿಯಾಳ, ಲಕ್ಷ್ಮಣ ಗುತ್ತೇದಾರ, ರಾಮಪ್ರಸಾದ ತೋಟದ, ಚೆನ್ನಪ್ಪ ಹೂಗಾರ, ನಿಂಗಣ್ಣ ಬುಡ್ಡಾ, ವೆಂಕಟೇಶ ಬೇಟೆಗಾರ, ಮೂರ್ತಿ ಬೊಮ್ಮನಳ್ಳಿ ಅವರು ಭಾಗವಹಿಸಿದ್ದರು.

ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ದೇವು ಹೆಬ್ಬಾಳ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

4 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

4 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

4 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

4 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

4 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420