ಕಲಬುರಗಿ: ‘ನೈಜ ಬದುಕಿನ ಅನಾವರಣಗೊಂಡಿರುವ ಕಾದಂಬರಿ ಎಚ್.ಟಿ. ಪೋತೆಯವರ ‘ಬಯಲೆಂಬ ಬಯಲು’. ಈ ಕಾದಂಬರಿಯನ್ನು ತಳಸಮುದಾಯಗಳ ಬವಣೆಗಳ ನುಡಿಯ ಆವಿಷ್ಕಾರ ಎಂತಲೇ ಹೇಳಬಹುದು. ಬುದ್ಧ, ಬಸವ, ಅಂಬೇಡ್ಕರ್, ಫುಲೆ ಅವರ ಪರೋಕ್ಷ ಪ್ರಭಾವ ಈ ಕಾದಂಬರಿಯಲ್ಲಿ ಕಾಣುತ್ತದೆ. ರೂಕ್ಷ ಬದುಕಿನ ರೂಕ್ಷ ಅನಾವರಣ. ಇದು ಕಟ್ಟುಕತೆಯಲ್ಲ. ನೈಜ ಬದುಕಿನ ಅನಾವರಣ ಕಾದಂಬರಿಯಲ್ಲಿದೆ. ಬರವಣಿಗೆಯಲ್ಲಿ ವ್ಯಕ್ತಿತ್ವವೂ ಕಾಣುತ್ತದೆ.’ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಕವಿ ದೊಡ್ಡರಂಗೇಗೌಡರು ಅಭಿಪ್ರಾಯಪಟ್ಟರು.
ಕುಟುಂಬ ಪ್ರಕಾಶನ ಹಾಗೂ ಬುಕ್ ಬ್ರಹ್ಮ ವೆಬ್ ಜಂಟಿಯಾಗಿ ಆಯೋಜಿಸಿದ್ದ ಪ್ರೊ.ಎಚ್.ಟಿ. ಪೋತೆ ಅವರ ‘ಬಯಲೆಂಬ ಬಯಲು ಬಯೋಪಿಕ್ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದ ಅವರು,‘ದೇಸಿ ನೆಲೆಯಿಂದ ಬರುವ ಲೇಖಕರ ಸವಾಲು ಅನುಭವವನ್ನು ಬರೆಯುವಾಗ ಭಾಷೆ ಶಿಷ್ಟಭಾಷೆಗೆ ಹೊರಳುತ್ತೇವೆ. ಆದರೆ ಈ ಕೃತಿಯಲ್ಲಿ ಅಪ್ಪಟ ದೇಶಿಭಾಷೆಯನ್ನೇ ಬಳಸಿದ್ದಾರೆ. ಏಕಕಾಲಕ್ಕೆ ಮೂರು ತಲೆಮಾರಿನ ಕುರಿತು ಈ ಬರವಣಿಗೆಯಲ್ಲಿ ವಾಸ್ತವತೆ ಇದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತಕುಲಪತಿಗಳಾದ ಮಲ್ಲೇಪುಂ ಜಿ. ವೆಂಕಟೇಶ ಅವರು ಮಾತನಾಡಿ ‘ಕನ್ನಡದ ಮೊಟ್ಟಮೊದಲ ದಲಿತ ಬಯೋಪಿಕ್ ಕಾದಂಬರಿ ಇದು. ಮೂರು ತಲೆಮಾರುಗಳ ಅನನ್ಯ ಸಂಬಂಧವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.
ಹಿರಿಯ ಲೇಖಕರಾದ ಕೆ.ಇ. ರಾಧಾಕೃಷ್ಣ ಹಾಗೂ ಪ್ರೊ.ಎಚ್.ಟಿ. ಪೋತೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…