ಕಲಬುರಗಿಯಲ್ಲಿ ಸಡಗರದಿಂದ ಈದ್ ಉಲ್ ಫಿತರ್ ಆಚರಣೆ

ಕಲಬುರಗಿ: ಇಂದು ದೇಶದ್ಯಾಂತ ಈದ್ ಉಲ್ ಫಿತರ್ ಸರಡಗರ ಸಂಭ್ರಮದಿಂದ ಆಚರಿಸಲಾಯಿತು.

ಮುಸ್ಲಿಂ ಬಾಂಧವರು ನಗರದ ವಿವಿಧ ಮಸೀದಿ ಹಾಗೂ ಈದ್ಗಾ ಮೈದಾನಗಳಿಗೆ ತೆರಳಿ ರಂಜಾನ್ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿ ನಮಾಜ್ ನಿರ್ವಹಿಸಿದರು.

ಇದಕ್ಕೂ ಮುನ್ನ ತಿಂಗಳು ಪೂರ್ತಿ ಉಪವಾಸ ವ್ರತ ಆಚರಿಸದ ಮುಸ್ಲಿಂ ಬಾಂಧವರು, ಸ್ವಚ್ಛತೆಯೊಂದ ಹೊಸ ಬಟ್ಟೆಗಳನ್ನು ಧರಿಸಿ, ಪ್ರವಾದಿ ಮಹ್ಮದ್ ಪೈಗಂಬರ್ ಅವರು ತಿಳಿಸಿರುವ ಪ್ರಕಾರ ಬಟ್ಟೆಗೆ ಸುಗಂಧಿತ ಇತರ್ ಹಾಕಿಕೊಂಡು ಮನೆಯಿಂದ ಈದ್ಗಾ ಹಾಗೂ ಮಸೀದಿಯ ಕಡೆಗೆ ಅಲ್ಲಾಹನ ಹೆಸರನ್ನು ಕೂಗುತ್ತ ತೆರಳಿದರು.

ನಂತರ ರಂಜಾನ್ ವಿಶೇಷ ಪ್ರಾರ್ಥನೆ ಹಾಗೂ ನಮಾಜ್ ನಿರ್ವಹಿಸಿ ಈದ್ಗಾದಲ್ಲಿ ಸ್ನೇಹಿತ, ಸಂಬಂಧಿಗಳಿಗೆ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಈದ್ ಶುಭಾಷಯ ವಿನಿಮಯ ಮಾಡಿಕೊಂಡು ಶಾಂತಿಯ ಸಂಕೇತವನ್ನು ರವಾನಿಸಿದರು.

ಅಲ್ಲದೇ ಬಡವರಿಗೆ ಝಕಾತ್ ಮತ್ತು ಫಿತ್ರಾ ವಿತರಿಸುವ ಮೂಲಕ ಬಡವರಿಗೆ ನೆರವಾಗುವ ಕುರಿತು ಇಸ್ಲಾಂ ನೀಡಿರುವ ನಿಯಮವನ್ನು ಮುಸ್ಲಿಂ ಬಾಂಧವರು ಕಡ್ಡಾಯವಾಗಿ ಪಾಲಿಸಿದರು.

ಮುಸ್ಲಿಂ ಸಮುದಾಯದಲ್ಲಿ ಕೆಲವರು ಈದ್ ಆಚರಿಸಲು ಆರ್ಥಿಕವಾಗಿ ಅಸಮರ್ಥವಿರುವ ಕುಟುಂಬ ಹಾಗೂ ಬಡಾವಣೆಯಲ್ಲಿರುವ ಬಡವರಿಗೆ ಈದ್ ಪ್ರಯುಕ್ತ ಫಿತ್ರಾ ಝಕಾತ್ ನೀಡುವ ಮೂಲಕ ಅವರು ಕೂಡ ಹಬ್ಬವನ್ನು ಆಚರಿಸಲು ಅನುಕೂಲವಾಗುವಂತೆ ಸಹಾಯ ಮಾಡುವ ಮೂಲಕ ಇಸ್ಲಾಂ ತಿಳಿಸಿರುವ ನಿಯಮವನ್ನು ಮುಸ್ಲಿಂ ಬಾಂಧವರು ಪಾಲಿಸಿ ಪ್ರವಾದಿ ಮಹ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು.

ಈದ್ ಉಲ್ ಫಿತರ್ ನಮಾಜ್ ನಂತರ ಮುಸ್ಲಿಂ ಬಾಂಧವರು ತಮಗೆ, ಆತ್ಮೀಯವಾಗಿರುವ ಇತರೆ ಧರ್ಮ ಹಾಗೂ ಸಮುದಾಯದ ಸ್ನೇಹಿತರಿಗೆ ಈದ್ ಶುಭಾಷಯ ಕೋರಿದರು. ನಂತರ ಮನೆಗೆ ಆಹ್ವಾನಿಸಿ ರಂಜಾನ್ ವಿಶೇಷವಾದ ಶಿರ್ ಖುರ್ಮಾ ಹಾಗೂ ಹಬ್ಬದ ಇತರೆ ಆಹಾರ ತಿನಿಸುಗಳನ್ನು ಅವರೊಂದಿಗೆ ಸೇವಿಸಿ ಇತರೆ ಸಮುದಾಯದ ಜನರೊಂದಿಗೆ ರಂಜಾನ್ ಹಬ್ಬವನ್ನು ಆಚರಿಸಿದರು. ಈ ಮೂಲಕ ರಂಜಾನ್ ಪ್ರಯುಕ್ತ ಭಾವೈಕ್ಯ ಸಾರಿದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

5 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

8 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

13 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

15 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420