ಕಲಬುರಗಿ: ಕೃಷಿ ಮಹಾವಿದ್ಯಾಲಯ, ಧಾರವಾಡ ಅಂತಿಮ ವರ್ಷ ಬಿ.ಎಸ್ಸಿ. ಕೃಷಿ ವಿದ್ಯಾರ್ಥಿಗಳು, ರೈತ ಸಂಪರ್ಕ ಕೇಂದ್ರ, ಫರತಾಬಾದ, ಕೆ.ವಿ.ಕೆ., ಕೃಷಿ ಮಹಾವಿದ್ಯಾಲಯ, ಸಂಯುಕ್ತಾಶ್ರಯದಲ್ಲಿ ತಾಲೂಕಿನ ಫರತಾಬಾದ ಗ್ರಾಮದಲ್ಲಿರೈತರಿಗೆ ಸಮಗ್ರ ಕೃಷಿ, ಸಮೃದ್ಧ ಕೃಷಿ ಶೀರ್ಷಿಕೆಯಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಕೃಷಿ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದ ಕೃಷಿ ಮಹಾವಿದ್ಯಾಲಯ, ಡೀನ್ರಾದ ಡಾ.ಸುರೇಶ ಪಾಟೀಲ್, ಪ್ರಸ್ತುತ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಿರುವ ಕೃಷಿ ಭೂಮಿಗಳ ಫಲವತ್ತತೆ ಕಾಪಾಡಿ, ಸೂಕ್ತ ಬೆಳೆಗೆ ಸಮಗ್ರ ಪೋಷಕಾಂಶ ನೀಡಿ, ಏಕಬೆಳೆ ಬದಲು ಸಮಗ್ರ ಬೆಳೆ ಕೃಷಿ ಪದ್ಧತಿ ಅಳವಡಿಸಲು ರೈತರಿಗೆ ಸಲಹೆ ನೀಡಿದರು.ಕೃಷಿ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು ರೈತರು ಆಧುನಿಕ ತಂತ್ರಜ್ಞಾನವನ್ನುಕೃಷಿ ವಿಜ್ಞಾನಿಗಳಿಂದ ಪಡೆಯಬಹುದಾಗಿದೆ. ಧಾರವಾಡ ಕೃಷಿ ಕಾಲೇಜು ವಿಸ್ತರಣಾ ವಿಭಾಗ ಪ್ರಾಧ್ಯಾಪಕರಾದಡಾ. ಎಸ್.ಎಸ್.ಡೊಳ್ಳಿ, ಕೃಷಿ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಗಳ ಮೂಲಕ ತೋರಿಸಿದ್ದಲ್ಲಿ ಹಾಗೂ ಯಶಸ್ವಿ ತಂತ್ರಜ್ಞಾನ ಹೊಲದಲ್ಲಿ ಅಳವಡಿಸಿದಲ್ಲಿ ಸಾರ್ಥಕ ಕೃಷಿ ಲಾಭದಾಯವಾಗಲಿದೆ ಎಂದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯಹಾಗೂಕೃಷಿ ಮಹಾವಿದ್ಯಾಲಯ, ಕಲಬುರಗಿಯ ವಿಸ್ತರಣಾ ವಿಭಾಗ ಮುಖ್ಯಸ್ಥರಾದಡಾ. ಶಿವಶರಣಪ್ಪ ಗೌಡಪ್ಪ ಮಾತನಾಡಿ ಈ ವರ್ಷಉತ್ತಮ ಮಳೆಯಾಗಿದ್ದು ಬೇಸಿಗೆಯಲ್ಲಿ ಕೃಷಿ ತೋಟಗಾರಿಕೆ ಬೆಳೆ ಬೆಳೆಯಬಹುದು. ಹಳ್ಳಿಗಳಲ್ಲಿ ಬೆಳೆದ ತರಕಾರಿ ಹಣ್ಣುಗಳಿಗೆ ಕೋವಿಡ್ ಸನ್ನಿವೇಶದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮನುಷ್ಯನದೈನಂದಿನ ಆರೋಗ್ಯಕ್ಕೆ ಸಮತೋಲನ ಆಹಾರ ಮುಖ್ಯವಾದುದ್ದುಎಂದರು.
ಪ್ರಗತಿಪರರೈತರಾದ ಶ್ರೀ.ಚಿತ್ರಶೇಖರ ಉಪಸ್ಥಿತರಿದ್ದರು. ಕೆ.ವಿ.ಕೆ ಮುಖ್ಯಸ್ಥರಾದಡಾ.ರಾಜು ತೆಗ್ಗಳ್ಳಿ ಸಮಗ್ರಕೀಟ ಹತೋಟಿ, ಪರಿಸರ ಸ್ನೇಹಿ ಕೃಷಿ ಉದಾಹರಣೆಯೊಂದಿಗೆ ವಿರಿಸದರು. ಸಸ್ಯರೋಗತಜ್ಞರಾದಜಹೀರ್ಅಹಮದ್, ಮಾತನಾಡಿ ಕೃಷಿ ವಿದ್ಯಾರ್ಥಿಗಳು ಹಾಗೂ ರೈತರ ನಡುವೆ ವಿಚಾರ ವಿನಿಮಯಗಳು, ಕೃಷಿ ಕಲಿಕೆ ನಿರಂತ್ರರವಾಗಿ ನಡೆಯಬೇಕು.ತೊಗರಿ, ಕಡಲೆ ಹಾಗೂ ಇತರ ಮುಖ್ಯ ಬೆಳೆಗಳ ಸಸ್ಯರೋಗ ಹತೋಟಿ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಶ್ರೀಮತಿ ಸುಜಾತಾ, ಪ್ರಿಯಂಕಾಕುಲಕರ್ಣಿ ಹಾಗೂ ಶೃತಿ ಹೊಸಮನಿ ಉಪಸ್ಥಿತರಿದ್ದರು. ಫರತಾಬಾದಗ್ರಾಮಸ್ಥರು ಕೃಷಿ ವಿದ್ಯಾರ್ಥಿಗಳು ಏರ್ಪಡಿಸಿದ ವಿವಿಧ ವಸ್ತು ಪ್ರದರ್ಶನ ವೀಕ್ಷಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…