ಅರವತ್ತು ದಿನಗಳ ನಿರಂತರ ಧರಣಿಗೆ ಮೂರೆ ದಿನದಲ್ಲಿ ಅಂತ್ಯ ಕಾಣಿಸಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ

ಸುರಪುರ: ಕಳೆದ ಅಕ್ಟೋಬರ್ ೫ನೇ ತಾರೀಖು ಬೆಳಿಗ್ಗೆ ನಗರದ ತಹಸೀಲ್ದಾರ್ ಕಚೇರಿ ಮುಂದೆ ತಮ್ಮ ಆಸ್ತಿಯ ದಾಖಲೆಗಳನ್ನು ಕೊಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದ ರಂಗಂಪೇಟೆಯ ನಿವಾಸಿ ಅಮರಣ್ಣ ಚಂದ್ರಶೇಖರ ಸಜ್ಜನ್ ಅವರ ಧರಣಿಯನ್ನು ಮುಗಿಸಲು ಕ್ರಮ ಕೈಗೊಂಡ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಕರ್ತವ್ಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ತಮ್ಮ ಆಸ್ತಿಯ ದಾಖಲೆಗಳ ನಕಲು ಪ್ರತಿಯನ್ನು ನೀಡುವಂತೆ ವರ್ಷದಿಂದ ತಹಸೀಲ್ ಕಚೇರಿಗೆ ಅಲೆಯುತ್ತಿದ್ದ ಅಮರಣ್ಣ ಸಜ್ಜನ್ ಅವರು ಬೇಸತ್ತು ಅಕ್ಟೋಬರ್ ೫ನೇ ತಾರೀಖು ತಹಸೀಲ್ ಕಚೇರಿ ಮುಂದೆ ಅಮರಣಾಂತ ಧರಣಿಯನ್ನು ಆರಂಭಿಸಿದ್ದರು.ಅಂದು ತಹಸೀಲ್ದಾರರಾಗಿದ್ದ ನಿಂಗಣ್ಣ ಬಿರಾದಾರ್ ಅವರು ನಮ್ಮಲ್ಲಿ ಲಭ್ಯವಿರುವ ದಾಖಲೆಗಳನ್ನು ನೀಡುತ್ತೇವೆ,ಇನ್ನುಳಿದವುಗಳು ನಮ್ಮಲ್ಲಿ ಭ್ಯವಿಲ್ಲದವುಗಳು ಲಭ್ಯವಿಲ್ಲ ಎಂದು ನೀಡುತ್ತೇವೆ ಎಂದು ಅನೇಕ ಬಾರಿ ಹೇಳಿದ್ದರು,ಆದರೆ ಇದಕ್ಕೆ ಒಪ್ಪದ ಅಮರಣ್ಣ ಸಜ್ಜನ್ ಅವರು ನಾವು ಕೇಳಿದ ಎಲ್ಲಾ ದಾಖಲೆಗಳನ್ನು ನೀಡುವವರೆಗೆ ಧರಣಿ ನಿಲ್ಲಿಸುವುದಿಲ್ಲವೆಂದು ಸುಮಾರು ಅರವತ್ತು ದಿನಗಳಿಂದ ಧರಣಿ ನಡೆಸಿದ್ದರು.

ಧರಣಿ ಆರಂಭದಲ್ಲಿದ್ದ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರು ಇಲಕಲ್‌ಗೆ ವರ್ಗಾವಣೆಗೊಂಡ ನಂತರ ಆಗಮಿಸಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಅಮರಣ್ಣ ಅವರ ಬೇಡಿಕೆಗಳನ್ನು ಆಲಿಸಿ ನಂತರ ಕಾಳಜಿ ತೋರಿ ಎಲ್ಲಾ ದಾಖಲೆಗಳನ್ನು ಹುಡುಕಿಸುವ ಕೆಲಸಕ್ಕೆ ಮುಂದಾದ ನಂತರ ಅಮರಣ್ಣ ಸಜ್ಜನ್ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಹುಡುಕಿಸುವ ಕೆಲಸ ಮಾಡಿದ್ದು,ಸದ್ಯ ಧರಣಿ ನಿರತರು ಕೇಳಿದ ದಾಖಲೆಗಳಲ್ಲಿ ಅರ್ಧದಷ್ಟನ್ನು ಒದಗಿಸುವ ಮೂಲಕ ಡಿಸೆಂಬರ್ ೫ ರಂದು ಸಂಜೆ ಅಮರಣ್ಣ ಅವರ ದಾಖಲೆಗಳನ್ನು ಕೈಗಿಡುವ ಮೂಲಕ ಧರಣಿಯನ್ನು ಕೈಬಿಡುವಂತೆ ಕೊರಿದ್ದರಿಂದಾಗಿ ಧರಣಿಯನ್ನು ಎಳೆನೀರು ಸೇವಿಸುವ ಮೂಲಕ ನಿಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ವಕೀಲ ಶಿವಾನಂದ ಆವಂಟಿ ತಹಸೀಲ್ ಕಚೇರಿಯ ಕೊಂಡಲ ನಾಯಕ ಸೋಮನಾಥ ನಾಯಕ ಹಾಗು ಅಮರಣ್ಣ ಸಜ್ಜನ್ ಅವರ ಕುಟುಂಬಸ್ಥರಿದ್ದರು.

ಅಮರಣ್ಣ ಚಂದ್ರಶೇಖರ ಸಜ್ಜನ್ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ನೀಡುತ್ತೇವೆ,ಸದ್ಯ ಲಭ್ಯವಾದ ದಾಖಲೆಗಳನ್ನು ನೀಡಿದ್ದು ಇನ್ನುಳಿದ ಎಲ್ಲಾ ದಾಖಲೆಗಳನ್ನು ಮೂರು ನಾಲ್ಕು ದಿನದಲ್ಲಿ ನೀಡುವುದಾಗಿ ಭರವಸೆ ನೀಡಿ ಧರಣಿಗೆ ಅಂತ್ಯಗೊಳಿಸಲು ತಿಳಿಸಿದೆನು. -ಸುಬ್ಬಣ್ಣ ಜಮಖಂಡಿ ತಹಸೀಲ್ದಾರ ಸುರಪುರ.

ತಹಸೀಲ್ದಾರರು ನಮ್ಮ ಮನವಿಯನ್ನು ಆಲಿಸಿ ಸದ್ಯ ಅಗತ್ಯವಿರುವ ಕೆಲವೊಂದು ದಾಖಲೆಗಳನ್ನು ನೀಡಿದ್ದಾರೆ.ಇನ್ನುಳಿದ ದಾಖಲೆಗಳನ್ನು ಮೂರು ನಾಲ್ಕು ದಿನದಲ್ಲಿ ನೀಡುವುದಾಗಿ ಭರವಸೆ ನೀಡಿದ್ದರಿಂದ ಧರಣಿ ನಿಲ್ಲಿಸುವೆವು. -ಅಮರಣ್ಣ ಚಂದ್ರಶೇಖರ ಸಜ್ಜನ್

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

6 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

6 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

6 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

6 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420