ಬಿಸಿ ಬಿಸಿ ಸುದ್ದಿ

ರೈತರ ಹಕ್ಕೋತ್ತಾಯಗಳಿಗಾಗಿ ನಿರಂತರ ಧರಣಿಗೆ ಗ್ರಾ. ಪಂ. ನೌಕರರ ಸಂಘಟನೆದಿಂದ ಬೆಂಬಲ

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕೃಷಿ ವಿರೋಧಿ ೩ಕಾಯ್ದೆಗಳನ್ನು ಮತ್ತು ಕರ್ನಾಟಕ ಜಾನುವಾರುಗಳ ವಧೆ ಪ್ರತಿಬಂಧಕ ಕಾಯ್ದೆಯನ್ನು ಕೈಬಿಡುವುದು ಸೇರಿದಂತೆ ರೈತಪರ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಹಲವು ಸಂಘಟನೆಗಳು ಕೈಗೊಂಡಿರುವ ರೈತರ ಹಕ್ಕೋತ್ತಾಯಗಳಿಗಾಗಿ ನಿರಂತರ ಧರಣಿಯಲ್ಲಿ ಗ್ರಾಮ ಪಂಚಾಯತ್ ನೌಕರರ ಸಂಘಟನೆಯಿಂದ ೧೦ನೇ ದಿನವಾದ ಧರಣಿಯಲ್ಲಿ ಸತ್ಯಾಗ್ರಹ ಕೈಗೊಂಡರು.

ಈ ಧರಣಿಯಲ್ಲಿ ಜೈಭೀಮ ನಂದಕೂರ ಇವರು ಮಾತನಾಡುತ್ತಾ ಮೋದಿ ಸರಕಾರವು ರೈತ ವಿರೋಧಿ ಕಾಯ್ದೆ ತರುತ್ತಿರುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ವಿರೋಧಿಸುತ್ತೇವೆ. ಈ ಕಾಯ್ದೆಗಳು ರೈತ ವಿರೋಧಿ ಮಾತ್ರವಲ್ಲ ದೇಶದ ಸಮಸ್ತ ವಿರೋಧದ ಕಾಯ್ದೆಗಳಾಗಿವೆ. ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲ್ ಡಿಜೆಲ್ ಬೆಲೆಗಳನ್ನು ಮುಗಿಲಿಗೇರಿಸಲಾಗಿದೆ. ಹಾಗೆಯೇ ದೇಶದ ಸಂಪತ್ತನ್ನು ಅದಾನಿ ಅಂಬಾನಿಗಳಿಗೆ ಕೊಟ್ಟಿದ್ದಾರೆ. ಗ್ರಾಮ ಪಂಚಾಯತ್ ನೌಕರರನ್ನು ಖಾಯಂ ಮಾಡುತ್ತಿಲ್ಲ. ಆದರೆ ಇದೇ ಸಂದರ್ಭದಲ್ಲಿ ಅದಾನಿ ಅಂಬಾನಿಗಳ ಆದಾಯವು ಗಂಟೆಗೆ ೩೯ ಕೋಟಿ ಹೆಚ್ಚುವಂತೆ ಮಾಡಿದ್ದಾರೆ. ಇದು ಶ್ರಮಿಕರ ವಿರೋಧಿ ಸರಕಾರ ಆಗಿದೆ. ” ಎಂದು ಹೇಳಿದರು.

ಧರಣಿಯಲ್ಲಿ ರಾಜು ಫಿರೋಜಾಬಾದ, ಭೀಮಾಶಂಕರ್ ಹೊನ್ನಕಿರಣಗಿ, ಶರಣಬಸಪ್ಪ ಮಮಶೆಟ್ಟಿ, ಅಲತ್ತಾಫ ಇನಾಮದಾರ, ನಾಗರಾಜ ಕೋಟನೂರು, ಜೀವನ ಬಾಬು, ಶಿವಕುಮಾರ, ಅನಸುಬಾಯಿ, ಮೈನಾಬಾಯಿ ನಾಗನಳ್ಳಿ, ಸಾವಿತ್ರಿ ನಂದಿಕೂರು, ಕಸ್ತೂರಬಾಯಿ ನಂದಿಕೂರು ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ಕಾಯ್ದೆಗಳನ್ನು ಧಿಕ್ಕರಿಸಿದರು.

ಧರಣಿಯನ್ನುದ್ದೇಶಿಸಿ ಎಂ.ಬಿ.ಸಜ್ಜನ್, ಅಶ್ವಿನಿ ಮದನಕರ್ ಮಾತನಾಡಿದರು. ಪೂಜಾ ಸಿಂಘೆ ಕ್ರಾಂತಿಗೀತೆ ಹಾಡಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

13 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

13 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

15 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

15 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

15 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

16 hours ago