ಬಿಸಿ ಬಿಸಿ ಸುದ್ದಿ

ವಿಜಯಕುಮಾರ ತೇಗಲತಿಪಿ ಅವರ ‘ಭವದ ಬೆಳಕು’ ಕೃತಿ ಜನಾರ್ಪಣೆ

ಕಲಬುರಗಿ: ಇಡೀ ಸಮಾಜ ಮೌಢ್ಯತೆ, ಕಂದಾಚಾರದಲ್ಲಿ ಮುಳುಗಿದ್ದ ಕಾಲಘಟ್ಟದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಕತ್ತಲೆಯಿಂದ ಬೆಳಕು ತೋರಿದರು. ಕಾಯಕವೇ ಕೈಲಾಸ ಎಂಬ ವಚನಗಳನ್ನು ಸಾರುತ್ತಲೇ ಕಾಯಕ ಮತ್ತು ದಾಸೋಹದ ಕಾರ್ಯ ಮಾಡಿ, ಜಗತ್ತಿಗೆ ಮಾದರಿಯಾಗಿದ್ದಾರೆ. ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ವಚನಕಾರರು ತಿದ್ದಿದ್ದು, ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜ ಮತ್ತು ಜೀವನ ಸುಧಾರಣೆಯಾಗಲಿದೆ ಎಂದು ಕಲಬುರಗಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್ ಹೇಳಿದರು.

ಪರೋಪಕಾರಿ ಲಿಂ.ಪ್ರಭಾಕರ ಛಪ್ಪರಬಂದಿ ಸ್ಮರಣಾರ್ಥ ಇಲ್ಲಿನ ಛಪ್ಪರಬಂದಿ ಪ್ರಭಾಕರ ಫೌಂಡೇಷನ್ ವತಿಯಿಂದ ನಗರದ ಕಲಾ ಮಂಡಳದಲ್ಲಿ ರವಿವಾರ ಏರ್ಪಡಿಸಿದ ಸಮಾರಂಭದಲ್ಲಿ ಸಾಂಸ್ಕೃತಿಕ ಸಂಘಟಕದ ವಿಜಯಕುಮಾರ ತೇಗಲತಿಪ್ಪಿ ಸಂಪಾದಕತ್ವದ ‘ಭವದ ಬೆಳಕು’ ವೈಚಾರಿಕ ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.

ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ವಚನಗಳು ನಮ್ಮ ಅಹಂಕಾರವನ್ನು ನಿವಾರಿಸಿ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತವೆ. ಬದುಕಿನ ಬಗ್ಗೆ ಸಕರಾತ್ಮಕ ಒಲವು ಜೀವಪರ ನಿಲುವನ್ನು ಬೆಳೆಸುತ್ತವೆ ಎಂದರು.

ಕೃತಿ ಪರಿಚಯ ಮಾಡಿದ ಸಾಹಿತಿ ಜಗನ್ನಾಥ ತರನಳ್ಳಿ, ಪ್ರಾಪಂಚಿಕ ಭೌತಿಕ ಕತ್ತಲು ಬೆಳಕಿನ ತುಲನೆ ಮಾಡಿದಾಗ ಕತ್ತಲಿನ ಪ್ರಮಾಣವೇ ಹೆಚ್ಚಾಗಿದೆ. ಹಾಗೆಯೇ ಮತೀಯ ಚಿಂತನೆಗಳ ವಿಚಾರಗಳಲ್ಲಿಯೂ ಮನದ ಕತ್ತಲೆ ಹೆಚ್ಚಾಗಿದೆ. ಇಂಥ ತಮಂಧವಾದ ಕತ್ತಲೆಯನ್ನು ಕಳೆದು ಭವಕ್ಕೆ ಬೆಳಕು ತೋರಿದವರು ಕಲ್ಯಾಣದ ಶರಣರು. ಈ ನಿಟ್ಟಿನಲ್ಲಿ ಲೇಖಕ ವಿಜಯಕುಮಾರ ತೇಗಲತಿಪ್ಪಿ ಅವರು ಭವದ ಬೆಳಕನ್ನು ತೋರುವ ಅರಿವಿನ ದಾರಿಯಲ್ಲಿ ಅನೇಕ ಚಿಂತನೆಗಳನ್ನು ತಮ್ಮ ಪುಸ್ತಕದಲ್ಲಿ ಮೇಳೈಸಿರುವುದು ಸಮಂಜಸವಾಗಿದೆ. ಈ ಕೃತಿ ಸಹಜೀವನ ಬೆಸೆಯುವ ಸೌಜನ್ಯದ ಸಂಜೀವಿನಿ ಎನಿಸುತ್ತವೆ ಎಂದರು.

ಹಿರಿಯ ಮುಖಂಡ ರಾಜುಗೌಡ ನಾಗನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಉದ್ಯಮಿ ಡಾ.ಸುಭಾಷ ಕಮಲಾಪುರೆ, ಮುಖಂಡರಾದ ಅರವಿಂದ ಛಪ್ಪರಬಂದಿ, ವಿ.ಸಿ.ಪಾಟೀಲ, ರಾಜಶೇಖರ ಅಪ್ಪಾಜೀ, ಫೌಂಡೇಷನ್ ಸಂಚಾಲಕರಾದ ಡಾ.ಗುರುರಾಜ ಛಪ್ಪರಬಂದಿ, ಶರಣರಾಜ್ ಛಪ್ಪರಬಂದಿ, ಡಾ.ಬಾಬುರಾವ ಶೇರಿಕಾರ ಮಾತನಾಡಿದರು.

ಪ್ರೊ.ಯಶವಂತರಾಯ ಅಷ್ಠಗಿ, ಮಾಲಾ ಕಣ್ಣಿ, ಮಾಲಾ ದಣ್ಣೂರ, ಹಣಮಂತರಾಯ ಅಟ್ಟೂರ, ವಿದ್ಯಾಸಾಗರ ದೇಶಮುಖ, ಶರಣಮ್ಮ ಪಿ.ಸಜ್ಜನ್, ಸಂತೋಷ ಕುಂಬಾರ, ಶಿಲ್ಪಾ ಜೋಷಿ, ಗುಂಡಣ್ಣ ಡಿಗ್ಗಿ, ದರ್ಮಣ್ಣ ಧನ್ನಿ, ಶರಣಬಸವ ಜಂಗಿನಮಠ, ಜ್ಯೋತಿ ಕೋಟನೂರ, ಮಂಜುಳಾ ಪಾಟೀಲ, ಮೀನಾಕ್ಷಿ ಕುಂಬಾರ, ವಿಶ್ವನಾಥ ತೊಟ್ನಳ್ಳಿ, ಪ್ರಸನ್ನ ವಾಂಜರಖೇಡೆ, ಶಿವಶರಣ ದೇಗಾಂವ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನೀನಾಸಂ ತರಬೇತಿದಾರ ವಿಶ್ವರಾಜ್ ಪಾಟೀಲ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟ ಅಪ್ಪನ ಮಹತ್ವದ ನಾಟಕದ ಪ್ರಯೋಗವು ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು.

emedialine

Recent Posts

ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಜಯನಗರ…

2 hours ago

ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಸಮೀಕ್ಷೆ : ಡಾ. ಶಾಲಿನಿ ರಜನೀಶ್

ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು…

4 hours ago

ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ: ಸಿಎಂ ಸಿದ್ದು

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ…

4 hours ago

ಕನ್ನಡದ ನೆಲದಲ್ಲಿ ಕನ್ನಡಿಗರ ಮಕ್ಕಳೇ ಉದ್ಯೋಗ ಮಿಸಲಾತಿ ಕೇಳುವಂತಹ ಪರಸ್ಥಿತಿ ಆಘಾತಕಾರಿ

ಕಲಬುರಗಿ: ಡಾ.ಸರೋಜನಿ ಮಹಿಷಿ ವರದಿ ಅನುಷ್ಠಾನಕ್ಕೆ ನಡೆದ, ನಡೆಯುತ್ತಿರುವ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮಹಿಷಿ ವರದಿಯ ಹೆಸರು ಹೇಳಿ ಆಳಿದ…

5 hours ago

ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹೇಶ್ ರೆಡ್ಡಿ ನಾಮಪತ್ರ ಸಲ್ಲಿಕೆ

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ ಹಾಗೂ ಸಮಾಜದ…

5 hours ago

ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲ: ರಾಜ್ಯ ಸರಕಾರದ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗೃಹ

ಕಲಬುರಗಿ: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನೀತರಾಜ…

5 hours ago