ಬಿಸಿ ಬಿಸಿ ಸುದ್ದಿ

ನೃಪತುಂಗ ಕಾಲನಿಯಲ್ಲಿ ಜನಮನ ಸವಿದ “ಆಹಾರ ಮೇಳ”

ಕಲಬುರಗಿ: ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಇಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರಲ್ಲಿರುವ ಸೃಜನಶೀಲತೆಗೆ ಈ ಆಹಾರ ಮೇಳ ಸಾಕ್ಷಿ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ಹೇಳಿದರು.

ಭಾರತದ ೭೨ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಶಹಾಬಾದ್ ರಸ್ತೆಯಲ್ಲಿರುವ ನೃಪತುಂಗ ಕಾಲನಿಯ ರಾಮಕೃಷ್ಣ ಹೆಗಡೆ ಉದ್ಯಾನದಲ್ಲಿ ಲೇಡಿಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಆಹಾರ ಮೇಳ” ಉದ್ಘಾಟಿಸಿ ಮಾತನಾಡಿದ ಅವರು, ಗಿಡ, ಮರ, ಹಸಿರು ಹೊದಿಕೆ, ಸ್ವಚ್ಛತೆಯಿಂದ ಕೂಡಿದ ಈ ನಗರ ಸ್ವಚ್ಛಂದ ಪರಿಸರ ಹೊಂದಿದೆ. ಇಲ್ಲಿನ ನಿವಾಸಿಗಳು ಇದನ್ನು ಕಾಪಾಡಿಕೊಂಡು ಬರಬೇಕು ಎಂದು ತಿಳಿಸಿದರು.

ಜಮಲಾ ಕೆ.ಬಿ. ಶಾಣಪ್ಪ, ವಿಜಯಲಕ್ಷ್ಮೀ ಎನ್.ಎಚ್., ಶಿವಾಜಿ, ಎಚ್.ಬಿ. ತೀರ್ಥೆ, ತುಕಾರಾಮ ಬಗಾಡೆ, ಶಿವಪುತ್ರ ಕುಂಬಾರ, ಮಲ್ಲಿನಾಥ ಪಾಟೀಲ, ಬಸವರಾಜ ಆಳಂದ, ಪರುಶುರಾಮ ಸೇರಿದಂತೆ ಕಾಲನಿಯ ಅನೇಕ ನಿವಾಸಿಗಳು ಇದ್ದರು.

ನರ್ಮದಾ ಜಾಧವ (ಪಾನ್), ಇಂದಿರಾ ಚವ್ಹಾಣ (ಮಂಗಳೂರು ಭಜಿ), ಸಂಗೀತಾ ಗೋಡಕೆ (ವಡಾಪಾವ್), ಸುಜಾತಾ ರಜನೀಶ (ಪಾನಿಪೂರಿ), ಸುಪ್ರಿಯಾ (ಬದಾಮ ಹಾಲು), ಶಕುಂತಲಾ ಮಾನೆ (ಸಮೋಸಾ, ಚಕುಲಿ), ಅಂಜಲಿ ಡಿ. (ಬೇಲ್‌ಪುರಿ), ಕಿರಣ ಅಶೋಕ (ಗೆಜ್ಜರಿ ಹಲ್ವಾ), ವಿಜಯಲಕ್ಷ್ಮೀ ಎನ್.ಎಚ್. (ಜಾಮೂನು), ಪ್ರೇಮಾ ಮಠ (ಪಾವ್ ಭಜಿ), ಪ್ರಿಯಾ ಮೋಹನ (ಮಿರ್ಚಿಭಜಿ), ಫರಾನಾ (ಬ್ರೆಡ್ ಪಟ್ಟೀಸ್), ಪುತಳಾಬಾಯಿ (ಗೋಬಿ-೬೫) ಮುಂತಾದವರು ವಿವಿಧ ಬಗೆಯ ತಿಂಡಿ ತಿನಿಸುಗಳ ಮಳಿಗೆ ಹಾಕಿ ವ್ಯಾಪಾರ ಮಾಡಿದರು. ಮಹಿಳೆಯರು ಮತ್ತು ಮಕ್ಕಳು ಆಹಾರ ಪದಾರ್ಥಗಳನ್ನು ಖರೀದಿಸಿ ತಿಂಡಿ ತಿನಿಸುಗಳನ್ನು ಸವಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

8 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

9 hours ago