ಜನಪರ ಸಂಘಟನೆಗಳಿಂದ ಕಾರ್ನಾಡರಿಗೆ ಗೌರವ ಶೃದ್ಧಾಂಜಲಿ

ನವ ದೆಹಲಿ: ದೆಹಲಿಯಲ್ಲಿಂದು ಜನನಾಟ್ಯ ಮಂಚ, ಸಹಮತ್ ಮೊದಲಾದ ಜನಪರ ಸಂಘಟನೆಗಳು ಕಾರ್ನಾಡರಿಗೆ ಗೌರವ ಸೂಚಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು.‌ ಸಂಘಟನೆಗೆ ಕನ್ನಡ ಪೀಠವೂ ಸಹಾಯಮಾಡಿತ್ತು. IIC ಯ ತುಂಬಿದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ನಾಡರ ಬಗ್ಗೆ ಅನೇಕ ಮಾತುಗಳು ಕೇಳಿಬಂದುವು. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ-

ಇಂಗ್ಲಿಷನ್ನು ಅದ್ಭುತವಾಗಿ ಮಾಡಬಲ್ಲ ಕಾರ್ನಾಡರು ಬರೆಯಲು ಕನ್ನಡವನ್ನೇ ಆಯ್ದುಕೊಂಡರು ಎಂಬುದು ಬಹಳ ಮುಖ್ಯ’ -ಗೀತಾ ಹರಿಹರನ್, ಲೇಖಕಿ

 ‘ಉತ್ಸವವೇ ಪ್ರಧಾನವಾಗಿದ್ದ ಭಾರತೀಯ ರಂಗಭೂಮಿಗೆ ಪ್ರಶ್ನೆ ಕೇಳಲು ಕಲಿಸಿದವರು ಕಾರ್ನಾಡರು’

– ಅಶೋಕ ವಾಜಪೇಯಿ, ಕವಿ

 ‘ತುಘಲಕ್ ನಾಟಕವು ಭಾರತೀಯ ರಂಗಭೂಮಿಯ ಶಾಶ್ವತ ನಾಟಕಗಳಲ್ಲಿ ಒಂದು: ಜನನಾಟ್ಯ ಮಂಚ್

 ‘ಗಿರೀಶರ ಕನ್ನಡ ನಾಟಕಗಳು ಹಿಂದೀ ರಂಗಭೂಮಿಯ ವ್ಯಾಕರಣವನ್ನೇ ಬದಲಾಯಿಸಿದುವು’: -ಎಂ ಕೆ ರೈನಾ, ನಿರ್ದೇಶಕ

‘ಇತಿಹಾಸ ಮತ್ತು ಪುರಾಣಗಳು ಶಾಶ್ವತವೆಂದು ಡಂಗುರ  ಬಾರಿಸುತ್ತಿರುವ ಹೊತ್ತಲ್ಲಿ ಕಾರ್ನಾಡರು ಅದರ ವಿರುದ್ಧ ದಿಕ್ಕಿನಲ್ಲಿ ಹೊರಟು ಅವೆಷ್ಟು ಫ್ಲೆಕ್ಸಿಬಲ್ ಎಂಬುದನ್ನು ತೋರಿಸಿಕೊಟ್ಟರು: ಅನುರಾಧಾ ಕಪೂರ್, NSD

 ‘ಕನ್ನಡದ ಲೇಖಕರು ಇಷ್ಟೊಂದು ಶಕ್ತಿಶಾಲಿಗಳಾಗಲು ಅವರಿಗಿರುವ ವಚನ ಚಳುವಳಿಯ ಹಿನ್ನೆಲೆಯೇ ಕಾರಣ’

– ಸಚ್ಚಿದಾನಂದನ್, ಕವಿ

ಅತ್ಯುತ್ಕೃಷ್ಟವಾದ ಪ್ರಾಮಾಣಿಕ ಹುಡುಕಾಟವನ್ನು ಕೊನೆವರೆಗೆ ಕಾರ್ನಾಡರು ಉಳಿಸಿಕೊಂಡಿದ್ದರು, ಇದು ಸುಲಭವಾದ ಕೆಲಸವಲ್ಲ’: ಟಿ ಎಂ ಕೃಷ್ಣ, ಕಲಾವಿದ (ಕೃಷ್ಣ ಅವರು ಕಳಬೇಡ ಕೊಲಬೇಡ ವಚನವನ್ನೂ ಮನಮುಟ್ಟುವಂತೆ ಹಾಡಿದರು)

ಒಬ್ಬ ಲೇಖಕ ನಾಡು ನುಡಿಗೆ ಗೌರವ ತಂದುಕೊಡುವುದೆಂದರೆ ಹೀಗೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420