ಜನಪದರ ಬದುಕು ಕಟ್ಟಿ ಕೊಟ್ಟ ಸಾಹಿತ್ಯ: ಧನ್ನಿ

ಕಲಬುರ್ಗಿ: ಗ್ರಾಮೀಣ ಜನರ ಬದುಕನ್ನು ಕಟ್ಟಿ ಕೊಡುವಲ್ಲಿ ಜನಪದ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ ಎಂದು ಸಾಹಿತಿ ಪತ್ರಕರ್ತ ದರ್ಮಣ್ಣ ರಚ್ ಧನ್ನಿ ಅವರು ಹೇಳಿದರು.

ತಾಲೂಕಿನ ಶರಣಸಿರಸಗಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಗೌತಮ ಯುವಜನ ಸಾಂಸ್ಕೃತಿಕ ಸೇವಾ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಗ್ರಾಮೀಣ ಜನಪದ ಸಂಭ್ರಮ ಮತ್ತು ಪಂಚಾಯಿತಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿಜೆಪಿ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ

ಜೀವನದ ಪ್ರತಿ ಹೆಜ್ಜೆಯಲ್ಲಿ ಜನಪದ ಸೊಗಡನ್ನು ಕಾಣಬಹುದು. ಅದನ್ನೆ ತಮ್ಮ ಉಸಿರಾಗಿಸಿ ಕೊಂಡ ಜನಪದ ಕಲಾವಿದರ ಜೀವನ ಮಟ್ಟ ಕುಸಿಯುತ್ತಿದೆ. ಕಲಾವಿದರಿಗೆ ಸೂಕ್ತ ವೇದಿಕೆಗಳಿಲ್ಲ. ಕಲೆಗಳು ಉಳಿದರೆ ಜನಪದರ ಸೊಗಡು ಬೆಳೆಯಲು ಸಾಧ್ಯ. ಕಲಾವಿದರಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವ ಮೂಲಕ ರಾಜ್ಯ ಸರ್ಕಾರ ಅರ್ಹ ಜನಪದ ಕಲಾವಿದರಿಗೆ ಮಾಶಾಸನ ಒದಗಿಸಬೇಕು ಎಂದು ಮನವಿ ಮಾಡಿದರು.

ಸಂಸ್ಥೆ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ ಅವರು ಅಧ್ಯಕ್ಷತೆ ವಹಿಸಿ, ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸಗಳು ಕೈಗೊಳ್ಳಬೇಕಾಗಿದೆ ಎಂದರು. ಗ್ರಾಮದ ಮುಖಂಡ ಶರಣಗೌಡ ಪೊಲೀಸ್ ಪಾಟೀಲ ಉದ್ಘಟಿಸಿದರು. ಅಮೃತರಾವ ಸುಂದರಕರ ಪ್ರಾಸ್ತಾವಾಗಿ ಮಾತನಾಡಿದರು.

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಗ್ರಾಪಂ ಉಪಾದ್ಯಕ್ಷ ಅನೀಲ ಭರಣಿ, ಸದಸ್ಯರಾದ ಶಿವಕುಮಾರ ಹಂಗರಗಿ, ಸತೀಶ ತಂಬಾಕವಾಡಿ, ಬಸವರಾಜ ಆಳಂದಕರ, ಶಿವಯೋಗಿ ಹೊಸಮನಿ, ಶಿವಮೂರ್ತಿ ನಡುಗೇರಿ, ಮಡಿವಾಳಪ್ಪ, ಉಪನ್ಯಾಸಕ ಡಾ ಕರಿಗೋಳೇಶ್ವರ ಫರತಾಬಾದ, ಮುಖಂಡರಾದ ಶರಣಬಸಪ್ಪ ಯಳಸಂಗಿ,ಪೀರಪ್ಪ ಹಾದಿಮನಿ, ಶ್ರೀಶೈಲ ಹಂಗರಗಿ, ಸುರೇಶ ದೊಡ್ಡಮನಿ, ನಾಗರಾಜ ನಡುಗೇರಿ, ಪ್ರೇಮ ದೊಡ್ಡಮನಿ, ಶಿವಕುಮಾರ ಭರಣಿ, ಮಲ್ಲು ಅವರಾದಕರ, ಬಸಲಿಂಗಯ್ಯ ಸ್ವಾಮಿ,ಶರಣು ಸಾವಳಗಿ, ದೇವಾನಂದ ಯಳಸಂಗಿ ಸೇರಿ ಇತರರಿದ್ದರು.

ನಂತರ ಜನಪದ ಕಲಾವಿದರಾದ ಸುಭದ್ರಬಾಯಿ ಹಾಗೂ ತಂಡದವರಿಂದ ಸಂಪ್ರದಾಯ ಪದಗಳು ಮತ್ತು ಬಸವರಾಜ ಕಣಮಸ ತಂಡದವರಿಂದ ಹಂತಿ, ಮೋಹರಂ ಪದಗಳನ್ನು ಹಾಡಿದರು.

sajidpress

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

1 hour ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

2 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

2 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

2 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

2 hours ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420