ಮೂಲಭೂತ ಸೌಲಭ್ಯಕ್ಕಾಗಿ ಕೊಡೇಕಲ್ ಬಸ್ ನಿಲ್ದಾಣದಲ್ಲಿ ಕರವೇ ಧರಣಿ

2
26

ಸುರಪುರ: ಕೊಡೇಕಲ್ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳೆಂಬುದು ಮರೀಚಿಕೆಯಾಗಿದೆ,ಅನೇಕ ಬಾರಿ ಮನವಿ ಸಲ್ಲಿಸಿ ಬೇಸತ್ತಿದ್ದು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕೊಡೇಕಲ್ ವಲಯ ಅಧ್ಯಕ್ಷ ರಮೇಶ ಬಿರಾದಾರ್ ಆಕ್ರೋಶ ವ್ಯಕ್ತಪಡಿಸಿದರು.

ಕೊಡೇಕಲ್ ಬಸ್ ನಿಲ್ದಾಣದ ಆವರಣದಲ್ಲಿ ವೇದಿಕೆ ವತಿಯಿಂದ ಹಮ್ಮಿಕೊಂಡ ಧರಣಿಯ ನೇತೃತ್ವವಹಿಸಿ ಮಾತನಾಡಿ,ನಮ್ಮ ಗ್ರಾಮದ ಬಸ್ ನಿಲ್ದಾಣ ಎಂದರೆ ಅಧಿಕಾರಿಗಳಿಗೆ ಅಸಡ್ಡೆ ಎನ್ನುವಂತಾಗಿದೆ,ಬಸ್ ನಿಲ್ದಾಣದಲ್ಲಿ ದನ ಹಂದಿಗಳು ಮಲಗುತ್ತವೆ,ಶೌಚಾಲಯ ವ್ಯವಸ್ಥೆಯಿಲ್ಲ ಅಲ್ಲದೆ ಒಂದೂ ಬಸ್ ನಿಲ್ದಾಣದ ಒಳಗೆ ಬರುವುದಿಲ್ಲ, ಬರೀ ರೋಡಲ್ಲಿ ನಿಂತು ಜನರನ್ನು ತುಂಬಿಕೊಂಡು ಹೋಗುತ್ತವೆ,ಬಸ್ ನಿಲ್ದಾಣ ಇದೇ ಎಂಬುದೆ ಸಾರಿಗೆ ಇಲಾಖೆಯವರಿಗೆ ಗೊತ್ತಿಲ್ಲದಷ್ಟು ನಿರ್ಲಕ್ಷ್ಯ ತೋರುತ್ತಾರೆ.ಆದ್ದರಿಂದ ಕೂಡಲೇ ಬಸ್ ನಿಲ್ದಾಣಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಅಲ್ಲಿಯವರೆಗೆ ಧರಣಿಯನ್ನು ನಿರಂತರವಾಗಿ ನಡೆಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

ಸಾರಿಗೆ ಇಲಾಖೆಯ ಅಧಿಕಾರಿಗಳು ಧರಣಿ ಸ್ಥಳಕ್ಕೆ ತೆರಳಿ ಮನವಿ ಆಲಿಸಿದರಾದರೂ ಧರಣಿ ನಿರತರು ಯಾದಗಿರಿ ಎನ್‌ಇಕೆಆರ್‌ಟಿಸಿ ಡಿಸಿಯವರು ಬರುವವರೆಗೆ ಧರಣಿ ನಿಲ್ಲಿಸುವುದಿಲ್ಲ,ಡಿಸಿಯವರು ಬಂದು ಲಿಖಿತ ಭರವಸೆ ನೀಡಿದಾಗ ಮಾತ್ರ ಧರಣಿ ಕೈಬಿಡುವುದಾಗಿ ಎಚ್ಚರಿಸಿದರು.ಧರಣಿಯಲ್ಲಿ ಮುಖಂಡರಾದ ಶಿವರಾಜ ಹೊಕ್ರಾಣಿ ಅಮರೇಶ ನೂಲಿ ದೇವರಾಜ್ ಪಾಟೀಲ್ ಕಾಂತು ಗುತ್ತೇದಾರ ತಿರುಪತಿ ಪವಾರ್ ಅಮರೇಶ ಅಗ್ನಿ ಸುರೇಶ ಏವೂರ ಅಯ್ಯಣ್ಣ ಪಡಶೆಟ್ಟಿ ಸಂಗಮೇಶ ಕಕ್ಕೇರಾ ಮಲ್ಲಣ್ಣ ಆರಲಗಡ್ಡಿ ರಮೇಶ ನಾಲತವಾಡ ಶರಣು ವಡಗೇರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here