ಕಲಬುರಗಿ: ನಾವು ಆಚರಿಸುವ ಜನ್ಮದಿನ ಸೇರಿದಂತೆ ಮುಂತಾದ ಆಚರಣೆ, ಕಾರ್ಯಕ್ರಮಗಳು ಕೇವಲ ಪ್ರತಿಷ್ಠೆಗೆ ಜೋತುಬಿದ್ದು, ಅನಾವಶ್ಯಕ ವೆಚ್ಚಕ್ಕೆ ಕಾರಣವಾಗಬಾರದು. ಆಚರಣೆಯು ಸ್ವತಃ ತೃಪ್ತಿಯ ಜೊತೆಗೆ ಸಮಾಜಕ್ಕೆ ಅದರಿಂದ ಉಪಯೋಗವಾಗುವ ಅರ್ಥಪೂರ್ಣ ಆಚರಣೆಗಳಿಗೆ ಪ್ರಸ್ತುತ ಸಂದರ್ಭದಲ್ಲಿ ಪ್ರಾಮುಖ್ಯತೆ ನೀಡುವುದು ತುಂಬಾ ಅಗತ್ಯವಾಗಿದೆಯೆಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಅಭಿಮತ ವ್ಯಕ್ತಪಡಿಸಿದರು.
ಸಮಾಜ ಸೇವಕ ಸುನೀಲಕುಮಾರ ವಂಟಿ ಅವರ ೫೧ನೇ ಜನ್ಮದಿನದ ಪ್ರಯುಕ್ತ ’ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’, ’ಬಸವೇಶ್ವರ ಸಮಾಜ ಸೇವಾ ಬಳಗ’, ’ಜೈ ಭೀಮ ಸಮಾಜ ಸೇವಾ ಬಳಗ’, ’ಕರ್ನಾಟಕ ಸಮತಾ ಸೈನಿಕ ದಳ’, ’ಕರ್ನಾಟಕ ಜನ ಜಾಗೃತಿ ಸಂಗರ್ಷ ಸಮಿತಿ’, ’ಫೆವಾರ್ಡ್ ಕಲಬುರಗಿ’, ’ಗೌತಮಿ ಸ್ವ-ಸಹಾಯ ಸಂಘ’, ’ಸಿದ್ಧಾರ್ಥ ಸ್ವ-ಸಹಾಯ ಸಂಘ’, ’ಶ್ರೀ ಸಾಯಿ ಪ್ರಸಾದ ಎಂ.ಎಸ್.ಡಬ್ಲ್ಯೂ, ಪದವಿ, ಸ್ನಾತಕೋತ್ತರ ಕಾಲೇಜು’ ಇವೆಲ್ಲವುಗಳ ವತಿಯಿಂದ ನಗರದ ಟೌನಹಾಲ್ನಲ್ಲಿ ಬುಧವಾರ ಪೌರಕಾರ್ಮಿಕರಿಗೆ ಉಪಹಾರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಸದ ಜಾಧವ್ ಗೆ ಶಾಸಕ ಖರ್ಗೆ ತಿರುಗೇಟು
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಸಮಾಜಮುಖಿ ಆಚರಣೆ ನಮ್ಮದಾಗಬೇಕಾಗಿದೆ. ಮೋಜು-ಮಸ್ತಿ ಮಾಡಿ, ಕುಣಿದು ಕುಪ್ಪಳಿಸಿದರೆ ಮಾತ್ರ ಜನ್ಮದಿನಾಚರಣೆಯಾಗುವುದಿಲ್ಲ. ಬದಲಿಗೆ ಕಾಯಕಜೀವಿಗಳು, ಅನಾಥರು, ಬಡವರು, ಅಸಹಾಯಕರು, ವಯೋವೃದ್ಧರಿಗೆ ಅವಶ್ಯಕತೆಗನುಗುಣವಾಗಿ ಸಹಾಯಹಸ್ತ ಚಾಚುವ ಮೂಲಕ ಆಚರಿಸಿದರೆ ಅದಕ್ಕೆ ಹೆಚ್ಚಿನ ಮೌಲ್ಯ ಬರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೂರಾರು ಜನ ಪೌರ ಕಾರ್ಮಿಕರಿಗೆ ಉಪಹಾರ ವಿತರಣೆ ಮಾಡುವ ಮೂಲಕ ಅರ್ತಪೂರ್ಣವಾದ ಜನ್ಮದಿನ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಜಯಶೀ ಎಸ್.ವಂಟಿ, ಸುಜಯ್, ಸಾಯಿಪ್ರಸಾದ, ಅನೀಲ ಎಂಟಮನಿ, ಆದಂ ಅಲಿಸಾಹೇಬ್ ಬಾಬಾ, ಡಾ.ನಾಗರತ್ನ ದೇಶಮಾನೆ, ಎಂ.ಬಿ.ನಿಂಗಪ್ಪ, ರಾಮಚಂದ್ರ ಕಾರಭೋಸಗಾ, ಈಶ್ವರ ಇಂಗನ್, ಸಂಜೀವ ಮಾಲೆ, ಎಂ.ಎನ್.ಸುಗಂಧಿ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ರಾಜಕುಮಾರ ಬಟಗೇರಿ, ದೇವೇಂದ್ರಪ್ಪ ಗಣಮುಖಿ, ಸಂಗಮೇಶ ಇಮ್ಡಾಪೂರ, ಬಸವರಾಜ ಗುತ್ತೇದಾರ, ಗುಡುಸಾಬ್, ಲಕ್ಷ್ಮೀಬಾಯಿ ಸಂಗವಾಡೆ, ಮಲ್ಲಿಕಾರ್ಜುನ ಜಮಾದಾರ ಸೇರಿದಂತೆ ಅನೇಕ ಪೌರ ಕಾರ್ಮಿಕರು, ಮತ್ತಿತರರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…