ಬಿಸಿ ಬಿಸಿ ಸುದ್ದಿ

ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ

ಶಹಾಬಾದ: ರಾಜ್ಯದಲ್ಲಿಯೇ ಅತ್ಯಂತ ಚಿಕ್ಕ ತಾಲೂಕಾ ಎಂದು ಹೆಗ್ಗಳಿಕೆ ಪಡೆದ ಮತ್ತು ಫರ್ಸಿಯ ನಾಡಿಗೆ ಹೆಸರುವಾಸಿಯಾದ ಶಹಾಬಾದ ತಾಲೂಕಿನಲ್ಲಿ ಜಿಪಂ ಕ್ಷೇತ್ರ ೧ರಿಂದ ೨ಕ್ಕೆ ಏರಿದ್ದು, ತಾಪಂ ಕ್ಷೇತ್ರ ೩ ರಿಂದ ೧೧ಕ್ಕೆ ಏರಿಸಿ ರಾಜ್ಯ ಚುನಾವಣಾ ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದೆ.

ಶಹಾಬಾದ ತಾಲೂಕಿನಲ್ಲಿ ಈ ಮೊದಲು ಕೇವಲ ಒಂದು ಜಿಪಂ ಕ್ಷೇತ್ರವನ್ನು ಹೊಂದಿತ್ತು.ಭಂಕೂರ ಜಿಪಂ ಕ್ಷೇತ್ರವಾಗಿದ್ದರೂ ಶಹಾಬಾದ ಹಾಗೂ ಚಿತ್ತಾಪೂರ ತಾಲೂಕಿನ ಗ್ರಾಮಗಳನ್ನೊಳಗೊಂಡಿತ್ತು.ಪೂರ್ಣ ಪ್ರಮಾಣದ ಗ್ರಾಮಗಳು ಶಹಾಬಾದ ತಾಲೂಕಿನಲ್ಲಿರಲಿಲ್ಲ.ಈಗ ಮರುವಿಂಗಡಣೆ ಮಾಡಿ ಎರಡಕ್ಕೆ ಏರಿಸಿ ಚುನಾವಣಾ ಆಯೋಗ ಅಂತಿಮಗೊಳಿಸಿದೆ.ಅಲ್ಲದೇ ತಾಪಂ ಕ್ಷೇತ್ರ ಕೇವಲ ಮೂರನ್ನು ಹೊಂದಿತ್ತು.ಅದನ್ನು ೧೧ಕ್ಕೆ ಏರಿಸಿ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದ್ದೇ ತಡ ತಾಪಂ ಚುನಾವಣೆಯ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ.ಅಲ್ಲದೇ ಜಿಪಂ ಮತ್ತು ತಾಪಂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತ ಹೋಗುತ್ತಿದೆ.ತಾಪಂ ಸ್ಥಾನಕ್ಕೆ ಹೊಸ ಮುಖಗಳು ಸ್ಪರ್ಧೆಗೆ ಒಡ್ಡಲು ಮುಂದಾಗುತ್ತಿದ್ದಾರೆ.

ನಗರಸಭೆಯ ಉಪಚುನಾವಣೆಯಲ್ಲಿ ಗೆಲುವು: ಶಾಸಕ ಮತ್ತಿಮಡುಗೆ ಸನ್ಮಾನ

ಈ ಹೊಸ ತಾಲೂಕು ವ್ಯಾಪ್ತಿಯಲ್ಲಿ ರಾವೂರ ಜಿಪಂ ಕ್ಷೇತ್ರವನ್ನು ಒಂದನ್ನು ಹೆಚ್ಚಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದಾರೆ. ಈ ಮೊದಲು ಭಂಕೂರ ಜಿಪಂ ಕ್ಷೇತ್ರ, ಹೊಸದಾಗಿ ರಚನೆಯಾದ ರಾವೂರ ಜಿಪಂ ಕ್ಷೇತ್ರ ಕೂಡಿ ಎರಡು ಜಿಪಂ ಕ್ಷೇತ್ರ ಶಹಾಬಾದ ತಾಲೂಕಿಗೆ ಒಳಪಟ್ಟಿವೆ. ಆದರೆ ಮೊದಲಿದ್ದ ಭಂಕೂರ ಜಿಪಂ ಕ್ಷೇತ್ರದ ಗ್ರಾಮಗಳು ಅದಲಿ ಬದಲಿಯಾಗಿವೆ.ಇದರಿಂದ ಸ್ಪರ್ಧಾಳುಗಳಿಗೆ ಅಸಮಾಧಾನ ವ್ಯಕ್ತವಾಗಿದೆ. ಈ ಮೊದಲು ಚಿತ್ತಾಪೂರ ತಾಲೂಕಿಗೆ ಒಳಪಟ್ಟ ರಾವೂರ ಕೂಡ ಜಿಪಂ ಮತ್ತು ತಾಪಂ ಕ್ಷೇತ್ರವನ್ನು ಹೊಂದಿತ್ತು.ಇತ್ತಿಚ್ಚಿಗಷ್ಟೇ ಶಹಾಬಾದ ತಾಲೂಕಿಗೆ ಸೇರ್ಪಡೆಯಾಗಿದೆ.

೩ರಿಂದ ೧೧ಕ್ಕೆ ಏರಿದ ತಾಪಂ ಕ್ಷೇತ್ರ : ರಾಜ್ಯ ಚುನಾವಣಾ ಆಯೋಗ ತಾಪಂ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಶಹಾಬಾದ ತಾಲೂಕಿನಲ್ಲಿ ಕೇವಲ ಮೂರು ತಾಪಂ ಕ್ಷೇತ್ರಗಳಿದ್ದವು.ಈಗ ಅದು ೧೧ಕ್ಕೆ ಏರಿದೆ.ಇದರಿಂದ ತಾಲೂಕಿನಲ್ಲಿ ಸ್ಪರ್ಧೆಗೆ ಇಳಿಯುವ ಆಕಾಂಕ್ಷಿಗಳಿಗೆ ಎಲ್ಲಿಲ್ಲದ ಸಂತೋಷ ಉಂಟು ಮಾಡಿದೆ.ಈಗಾಗಲೇ ವಿವಿಧ ರಾಜಕೀಯ ಪಕ್ಷದ ಮುಖಂಡರು ಎಲ್ಲಿ , ಎಷ್ಟು ಕ್ಷೇತ್ರಗಳನ್ನು ಗೆಲ್ಲಬಹುದೆಂಬ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.

ಬಿಜೆಪಿ ಪ್ರಥಮ ಕಾರ್ಯಕಾರಿಣಿ ಸಭೆ

ತಾಪಂ ಕ್ಷೇತ್ರಗಳು ಹಾಗೂ ಸೇರ್ಪಡೆಯಾದ ಗ್ರಾಮಗಳು :ಭಂಕೂರ(೧) ಕ್ಷೇತ್ರ -ಭಂಕೂರ ಗ್ರಾಮ, ಭಂಕೂರ(೨) ಕ್ಷೇತ್ರ -ಭಂಕೂರ ಗ್ರಾಮ , ಭಂಕೂರ ವಾಡಾ, ಸೇವಾನಗರ (ಮುತ್ತಗಾ) ಕ್ಷೇತ್ರ – ಭಂಕೂರ ವಾಡಾ, ಸೇವಾನಗರ, ಶಂಕರವಾಡಿ ಮತ್ತು ಮುತ್ತಗಾ ಗ್ರಾಮಗಳು, ಮರತೂರ ಕ್ಷೇತ್ರ – ಮರತೂರ ಗ್ರಾಮ ಮಾತ್ರ, ಮುಗುಳನಾಗಾಂವ (ದೇವನತೆಗನೂರ) ಕ್ಷೇತ್ರ- ದೇವನತೆಗನೂರ,ಅಲ್ದಿಹಾಳ, ಮುಗುಳನಾಗಾಂವ,ಮಹಾನಗರ ಗ್ರಾಮಗಳು, ಮಾಲಗತ್ತಿ ಕ್ಷೇತ್ರ- ಮಾಲಗತ್ತಿ ಹಾಗೂ ಜೀವಣಗಿ ಗ್ರಾಮ, ರಾವೂರ ಕ್ಷೇತ್ರ- ರಾವೂರ ಗ್ರಾಮ ಮಾತ್ರ,  ರಾವೂರ(೨) ರಾವೂರ ಗಾಂಧಿ ನಗರ ಕ್ಷೇತ್ರ – ರಾವೂರ ಗಾಂಧಿ ನಗರ ಗ್ರಾಮ, ತೊನಸನಹಳ್ಳಿ(ಎಸ್) ಕ್ಷೇತ್ರ – ತೊನಸನಹಳ್ಳಿ(ಎಸ್) ಮತ್ತು ತರನಳ್ಳಿ ಗ್ರಾಮಗಳು, ಗೋಳಾ(ಕೆ) ಕ್ಷೇತ್ರ- ಗೋಳಾ(ಕೆ) ಮತ್ತು ಹೊನಗುಂಟಾ ಗ್ರಾಮಗಳು, ಹೊನಗುಂಟಾ ಕ್ಷೇತ್ರ- ಹೊನಗುಂಟಾ ಹಾಗೂ ಕಡಿಹಳ್ಳಿ ಗ್ರಾಮಗಳು ಒಳಗೊಂಡಿವೆ.

ಸಚಿವ ಪ್ರಭು ಚವ್ಹಾಣ್ ವಿರುದ್ಧ ಕ್ರಮಕೈ ಆಗ್ರಹ

ಜಿಪಂ ಕ್ಷೇತ್ರ ಹಾಗೂ ಸೇರ್ಪಡೆಯಾದ ಗ್ರಾಮಗಳು: ಭಂಕೂರ ಕ್ಷೇತ್ರ -ಭಂಕೂರ,ಮರತೂರ,ಮುಗುಳನಾಗಾಂವ, ಮಾಲಗತ್ತಿ ಪಂಚಾಯತಿಗಳು, ರಾವೂರ ಕ್ಷೇತ್ರ : ರಾವೂರ, ತೊನಸನಹಳ್ಳಿ(ಎಸ್), ಹೊನಗುಂಟಾ ಪಂಚಾಯತಿಗಳು ಸೇರ್ಪಡೆಗೊಂಡಿವೆ.

ಭಂಕೂರ ಜಿಪಂ ಕ್ಷೇತ್ರಕ್ಕೆ ಆರು ತಾಪಂ ಕ್ಷೇತ್ರಗಳು ಹಾಗೂ ರಾವೂರ ಜಿಪಂ ಕ್ಷೇತ್ರಕ್ಕೆ ಐದು ತಾಪಂ ಕ್ಷೇತ್ರಗಳು ಒಳಗೊಂಡಿವೆ.

emedialine

Recent Posts

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

23 mins ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

34 mins ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

37 mins ago

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

2 hours ago

ಪತ್ರಕರ್ತ ಸಿದ್ರಾಮ್ ನಾಡಗೇರಿ ಪುತ್ರಿ ಸ್ಪಂದನಾ ಎಸ್. ನಡಗೇರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…

2 hours ago

ಸೇವಾ ಮನೋಭಾವದ ಮನಸ್ಸು ಹೆಚ್ಚಾಗಲಿ: ಜ್ಯೋತಿ ಪಾಟೀಲ್

ಕಲಬುರಗಿ: ನೌಕರಿ ಕಾಯಕವಾದರೆ ತೃಪ್ತಿ ಜೀವನ, ವೃತ್ತಿಯಲ್ಲಿ ಸೇವಾ ಮನೋಭಾವ ಹೊಂದಿದರೆ ಆತ್ಮಶುದ್ಧಿಯಾಗಿ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ಉಪಳಾಂವ…

2 hours ago