ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ಕೋಗಿಲೆ ಸೀಜನ್ ೧ ಮೆಗಾ ಆಡಿಷನ್ನ ಕಾರ್ಯಕ್ರಮವನ್ನು ನಿವೃತ ಪ್ರಾಧ್ಯಪಕ ಪ್ರೋ ಶಂಕರ ಪಾಟೀಲ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ವಿನೋದಕುಮಾರ ಹೊಸಳ್ಳಿ, ಕಾರ್ಯಕ್ರಮ ಆಯೋಜಕರಾದ ಗುರುರಾಜ ಸಿ. ಬಂಡಿ ಅವರು ಮಾತನಾಡಿ ಕಲ್ಯಾಣ ಕರ್ನಾಟಕ ಕೋಗಿಲೆ ಮೆಗಾ ಆಡಿಷನ್ ಆಗಿದ್ದು ಇದರಲ್ಲಿ ನೂರು ಜನರಲ್ಲಿ ಐವತ್ತು ಜನಕ್ಕೆ ಆಯ್ಕೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಡ್ಜಸ್ಗಳಾದ ಅನಂತರಾಜು ಮಿಸ್ತ್ರಿ, ಅದಿತಿ ಖಂಡಗಳ, ಆನಂದ ವಾರಿಕ, ಮಂಜು ಹಿರೋಳ್ಳಿ, ದಿಗಂಬರ್ ತಾರಫೈಲ್, ನಾಗರಾಜ ಶೇರಖಾನ್, ಡಾ.ಪಿ.ಎನ್ ರಾವ್ ಇದ್ದರು.