ಅಮೀನರೆಡ್ಡಿ ಬಿಜೆಪಿ ಸೇರಿದ್ದರಿಂದ ಉಂಟಾಗುವ ಪರಿಣಾಮಗಳೇನು ?

ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಜನತೆ ಹಾಗೂ ರಾಜಕಾರಣಿಗಳು ತುಂಬಾ ಭಿನ್ನ. ಇಲ್ಲಿನ ರಾಜಕಾರಣಿಗಳಾಗಲಿ, ಮತದಾರರಾಗಲಿ ಗುಂಡಾಗಿರಿಗೆ ಎಂದೂ ಆಸ್ಪದ ನೀಡಿದವರೆ ಅಲ್ಲ. ಗುಂಡಾಗಿರಿಗೆ ರಾಜಕಾರಣಿಗಳು ಸಪೋರ್ಟ್ ನೀಡುತ್ತಾರೆ ಎಂದು ಮನವರಿಗೆ ಆಗುತ್ತಲೇ ಮತದಾರ ತಕ್ಷಣ ಎಚ್ಚೆತ್ತುಕೊಂಡು ಆ ರಾಜಕಾರಣಿಯ ಕೋರೆ ಹಲ್ಲುಗಳನ್ನು ಮುರಿಯಬಲ್ಲ. ಕೋಡು ಕಿತ್ತಬಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹಿಂದೆ ಈ ಕ್ಷೇತ್ರದಿಂದ ಗೆದ್ದು ಬಂದ ಶಿವಶೇಖರಪ್ಪ ಪಾಟೀಲ ಶಿರವಾಳ ಬರೀ ಉಪದ್ಪ್ಯಾಪಿ ಮಾತಾಡಿದಕ್ಕೆ ದರ್ಶನಾಪುರ ಗೆದ್ದು ಬಂದರು. ಅದಕ್ಕೂ ಪೂರ್ವದಲ್ಲಿ ಬಾಪುಗೌಡ ದರ್ಶನಾಪುರ ಆರ್ಭಟಿಸಿದ್ದಕ್ಕೆ ನೇರ ಮನೆಗೆ ಕಳಿಸಿದರು. ಇದೆಲ್ಲ ಒತ್ತಟ್ಟಿಗಿರಲಿ ಶರಣಬಸಪ್ಪಗೌಡ ದರ್ಶನಾಪುರ ಅವರ ಕಾಕ ಬಸವರಾಜಪ್ಪಗೌಡ ಮತ್ತು ಪಟಾಲಂ ಭೀಮರಾಯನ ಗುಡಿಯಲ್ಲಿ ಕುಂತು ಕೆಮ್ಮಿದ್ದಕ್ಕೆ ಶರಣಬಸಪ್ಪಗೌಡ ತನ್ನ‌ ಸ್ಥಾನವನ್ನು ಕಳಕೊಂಡು ಗುರುಪಾಟೀಲ ಆ ಸ್ಥಾನವನ್ನು ಅಲಂಕರಿಸಿದರು.

ಆದರೆ ಗುರುಪಾಟೀಲ ಒಳ್ಳೆಯವರೇನೋ ಹೌದು. ಆದರೆ ಅಪ್ಪನಂತೆ ಮಗ ಉದಾರಿ ಅಲ್ಲ ಎಂಬ ಹೇಳಿಕೆ ಕ್ಷೇತ್ರದ ತುಂಬಾ ಹಬ್ಬಿತು. ಆಗ ಕ್ಷೇತ್ರಕ್ಕೆ ಸಾಕಷ್ಟು ಕೆಲಸಗಳು ಆಗಲಿಲ್ಲ ಎಂಬ ಆಪಾದನೆಯ ಹಿನ್ನೆಯಲ್ಲಿ ಮತ್ತೆ ಶರಣಬಸಪ್ಪಗೌಡ ದರ್ಶನಾಪುರ ಗೆದ್ದು ಬಂದರು.

ಓದುಗರ ಗಮನ ಸೆಳೆಯುವ “ನಿಜ ಶರಣ’ ನಾಟಕ

ಶರಣಬಸಪ್ಪಗೌಡ ಗೆದ್ದು ಬರಲು ತುಂಬಾ ಮಹತ್ವದ ಕಾರಣವೆಂದರೆ ಯಾಳಗಿಯ ಅಮೀನರೆಡ್ಡಿ ಪಾಟೀಲ ಜೆಡಿಎಸ್ ದಿಂದ ಸ್ಪರ್ದಿಸಿದ್ದು. ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಹಣಾಹಣಿಯಲ್ಲಿ ದರ್ಶನಾಪುರ ಗೆದ್ದು ಬಂದರು ಎಂಬ ವಾದವಿದೆ ಇದು ಅರ್ಧ ಸತ್ಯ. ಆದರೆ ಇದೆಲ್ಲಕ್ಕಿಂತ ಮುಖ್ಯ ಗುರುಪಾಟೀಲ ಹಾಗೂ ಅಮೀನರೆಡ್ಡಿಯ ನಡುವಿನ ಒಪ್ಪಂದ ತುಂಬಾ ಪ್ರಮುಖ ಪಾತ್ರ ವಹಿಸಿತು ಎಂದು ಹೇಳುವವರಿದ್ದಾರೆ.

ಇದೇನೆ ಇರಲಿ, ಇದೀಗ ಅಮೀನರೆಡ್ಡಿ ಪಾಟೀಲ ಯಾಳಗಿ ಜೆಡಿಎಸ್ ತೊರೆದು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಗುರು ಪಾಟೀಲ ಅಮೀನರಡ್ಡಿಯೊಂದಿಗೆ ಸ್ಪಂದಿಸಿದರೆ ದರ್ಶನಾಪುರ ಅವರ ಮುಂದಿನ ಚುನಾವಣೆ ತುಂಬಾ ತುರುಸಿನಿಂದ ಕೂಡಲಿದೆ. ಹಾಗಂತ ದರ್ಶನಾಪುರ ಬಳಗವೇನು ಕೈಕಟ್ಟಿ ಕೂಡುವುದಿಲ್ಲ. ಅವರೂ ತಮ್ಮ ಇಡೀ ಕಸುವನ್ನು ಕ್ಷೇತ್ರದಲ್ಲಿ ಹಾಕಿ ಗೆಲ್ಲಲು ತಯಾರಿ ಮಾಡಿಕೊಳ್ಳುವವರೆ ಆಗಿದ್ದಾರೆ.

ಇತ್ತೀಚಿನ ರಾಜಕೀಯದಲ್ಲಿ ಹಣಬಲ ತುಂಬಾ ಮುಖ್ಯ. ಅದು ಅಮೀನರೆಡ್ಡಿ ಪಾಟೀಲಗೆ ಇದೆ. ಹೇಳಿಕೇಳಿ ಅಮೀನರೆಡ್ಡಿ ಕ್ಲಾಸ್ ಒನ್ ಕಂಟ್ರ್ಯಾಕ್ಟರ್. ಈಗಾಗಲೇ ದೇವೇಗೌಡರ ಸಹಾಯದಿಂದ ಸಾಕಷ್ಟು ಅದನ್ನು ಗಳಿಸಿ ಆಗಿದೆ. ಇದು ಮುಂದಿನ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.

ರಾಯಚೂರು ವಿವಿಗೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ಸಿಎಂಗೆ ಎಸ್ಎಫ್ಐ ಮನವಿ

ಹಾಗಂತ ದರ್ಶನಾಪುರ ಅವರೇನು ಕಮ್ಮಿ ಇಲ್ಲ. ಅವರೂ ತಮ್ಮ ಶಕ್ತಿಯನ್ನು ಪಣಕ್ಕಿಟ್ಟು ಹೋರಾಡಬಲ್ಲರು. ಕ್ಷೇತ್ರದ ತುಂಬಾ ಅವರು ಮಾಡಿರುವ ಕೆಲಸಗಳು ಲೆಕ್ಕಕ್ಕೆ ಬಂದರೆ ಅಮೀನರೆಡ್ಡಿ ಬೇಕಾದಷ್ಟು ಲಾಗ ಹಾಕಿದರೂ ಅದು ಪರಿಣಾಮ ಉಂಟು ಮಾಡದು.

ಚುನಾವಣೆಗಳು ಇನ್ನೂ ಬಹುದೂರ ಇರುವಾಗ ಈ ಲೆಕ್ಕಾಚಾರಗಳೆಲ್ಲ ಏನಾದರೂ ಆಗುವ ಸಾಧ್ಯತೆ ಇದೆ. ಜೆಡಿ ಎಸ್ ಪಕ್ಷದಿಂದ ಮತ್ತೊಬ್ಬ ವ್ಯಕ್ತಿಯ ಸ್ಪರ್ಧೆ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಬಹುದು.

೦ ವಿಶ್ವಾರಾಧ್ಯ ಸತ್ಯಂಪೇಟೆ

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420