ಶಹಾಪುರ: ಶಿರವಾಳ ಗ್ರಾಮದ ಅಂಬೇಡ್ಕರ್ ಕಾಲೋನಿಯ ಸರಕಾರಿ ಶಾಲೆಯಲ್ಲಿ 130ನೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಮಾಡಲಾಯಿತು.
sdmc ಅಧ್ಯಕ್ಷ ಅಯ್ಯಪ್ಪ ಧಮ್ಮನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಯಶ್ರೀ ಹರನೂರ್, ಅತಿಥಿಗಳಾಗಿ ದಲಿತ ಸಮಿತಿ ತಾಲೂಕಿನ ಸದಸ್ಯರು ಶಿವು ಆಂದೋಲ, ಬಲಭಿಮ್ ನಡುವಿನಕೇರಿ, ಸಿದ್ದಪ್ಪ ನಡುವಿನಕೇರಿ sdmc ಸದಸ್ಯರು ಬಸವರಾಜ ಮ್ಯಾಗೇರಿ, ದೇವೀಂದ್ರಪ್ಪ ತಳಗೇರಿ, ದೇವಪ್ಪ ತಳಗೇರಿ, ಮಾನಪ್ಪ ಅನ್ನೂರ್, ಮಹಾಲಿಂಗಪ್ಪ ಗಂವ್ಹಾರ್, ಮರೀಲಿಂಗಪ್ಪ ಬಂಡಾರಿ, ತಾಯಪ್ಪ ಧಮ್ಮನ್ ಊರಿನ ಪ್ರಮುಖರು ಗಣ್ಯರು ಭಾಗವಹಿಸಿ ಯಶಶ್ವಿ ಗೊಳಿಸಿದರು ಮುಖ್ಯ ಗುರುಗಳು S. M ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ ಅಂಬೇಡ್ಕರ್ ರವರು ಸಮಾನತೆಗಾಗಿ ಹೋರಾಡಿದ ಭಾರತಾಂಬೆಯ ಹೆಮ್ಮೆಯ ಪುತ್ರ ಮತ್ತು ಶಿಕ್ಷಣದ ಬಗ್ಗೆ ನೀಡಿದ ಮಹತ್ವದ ಕುರಿತು ತಿಳಿಸಿದರು. ಸಾವಿತ್ರಿ ಸ ಶಿ ಮಗುವಿನ ಕನಸು ನನಸಾಗಲು ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡಲು ತಿಳಿಸಿದರು. ಶಾರದಾ ಸ. ಶಿ ಕಾರ್ಯನಿರೂಪಿಸಿದರು. ಜಯಶ್ರೀ ಸ. ಶಿ ಸ್ವಾಗತಿಸಿದರು. ಜುಬೇದಾ ಬೇಗಮ್ ಸ. ಶಿ ವಂದನಾರ್ಪಣೆ ಮಾಡಿದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…