ಶಿರವಾಳ ಸರಕಾರಿ ಶಾಲೆಯಲ್ಲಿ ಅಂಬೇಡ್ಕರ್ ಜಯಂತೋತ್ಸವ ಆಚರಣೆ

0
117

ಶಹಾಪುರ: ಶಿರವಾಳ ಗ್ರಾಮದ ಅಂಬೇಡ್ಕರ್ ಕಾಲೋನಿಯ ಸರಕಾರಿ  ಶಾಲೆಯಲ್ಲಿ 130ನೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಮಾಡಲಾಯಿತು.

sdmc ಅಧ್ಯಕ್ಷ ಅಯ್ಯಪ್ಪ ಧಮ್ಮನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಯಶ್ರೀ ಹರನೂರ್, ಅತಿಥಿಗಳಾಗಿ ದಲಿತ ಸಮಿತಿ ತಾಲೂಕಿನ ಸದಸ್ಯರು ಶಿವು ಆಂದೋಲ, ಬಲಭಿಮ್ ನಡುವಿನಕೇರಿ, ಸಿದ್ದಪ್ಪ ನಡುವಿನಕೇರಿ sdmc ಸದಸ್ಯರು ಬಸವರಾಜ ಮ್ಯಾಗೇರಿ, ದೇವೀಂದ್ರಪ್ಪ ತಳಗೇರಿ, ದೇವಪ್ಪ ತಳಗೇರಿ, ಮಾನಪ್ಪ ಅನ್ನೂರ್, ಮಹಾಲಿಂಗಪ್ಪ ಗಂವ್ಹಾರ್, ಮರೀಲಿಂಗಪ್ಪ ಬಂಡಾರಿ, ತಾಯಪ್ಪ ಧಮ್ಮನ್ ಊರಿನ ಪ್ರಮುಖರು ಗಣ್ಯರು ಭಾಗವಹಿಸಿ ಯಶಶ್ವಿ ಗೊಳಿಸಿದರು ಮುಖ್ಯ ಗುರುಗಳು S. M ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ ಅಂಬೇಡ್ಕರ್ ರವರು ಸಮಾನತೆಗಾಗಿ ಹೋರಾಡಿದ ಭಾರತಾಂಬೆಯ ಹೆಮ್ಮೆಯ ಪುತ್ರ ಮತ್ತು ಶಿಕ್ಷಣದ ಬಗ್ಗೆ ನೀಡಿದ ಮಹತ್ವದ ಕುರಿತು ತಿಳಿಸಿದರು. ಸಾವಿತ್ರಿ ಸ ಶಿ ಮಗುವಿನ ಕನಸು ನನಸಾಗಲು ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡಲು ತಿಳಿಸಿದರು. ಶಾರದಾ ಸ. ಶಿ ಕಾರ್ಯನಿರೂಪಿಸಿದರು. ಜಯಶ್ರೀ ಸ. ಶಿ ಸ್ವಾಗತಿಸಿದರು. ಜುಬೇದಾ ಬೇಗಮ್ ಸ. ಶಿ ವಂದನಾರ್ಪಣೆ ಮಾಡಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here