ಕಲಬುರಗಿ: ಮನಸ್ಸಿಗೆ ಮುದ ನೀಡುವ ಕಾಯಕದಲ್ಲಿ ನಿರತರಾಗಿರುವ ಸಂಗೀತ ಕಲಾವಿದರಿಗೆ ಹೆಚ್ಚೆಚ್ಚೆ ಅವಕಾಶಗಳು ದೊರೆಯುವಂತಾಗಲಿ ಎಂದು ಡಾ. ರಾಘವೇಂದ್ರ ಚಿಂಚನಸೂರ ಅಭಿಪ್ರಾಯಪಟ್ಟರು.
ಕಲಬುರಗಿಯ ರಾಮತೀರ್ಥ ನಗರದ ಜ್ಞಾನ ಸರಸ್ವತಿ ವಿದ್ಯಾಮಂದಿರ ಆವರಣದಲ್ಲಿ ಗಡಿನಾಡ ಸಂಗೀತ ಹಾಗೂ ವಿವಿದೋದ್ದೇಶ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಹುಜನ ಸಮಾಜ ಪಕ್ಷದಿಂದ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕ
ಭಾರತೀಯ ಸಂಗೀತಕ್ಕೆ ಜಗತ್ತಿನಲ್ಲಿ ವಿಶಿಷ್ಟ ಮನ್ನಣೆ ಇದೆ ಈ ನಿಟ್ಟಿನಲ್ಲಿ ಸಂಗೀತ ಆಸಕ್ತರು ಗುಣಮಟ್ಟದ ಕಾರ್ಯಕ್ರಮಗಳನ್ನು ನೀರಿಕ್ಷೆ ಮಾಡುತ್ತಾರೆ ಎಂದರು.
ಉದ್ದಿಮೆದಾರ ಗುರುರಾಜ ಮತ್ತಿಮಡು ಕಾರ್ಯಕ್ರಮ ಉದ್ಘಾಟಿಸಿದರು, ಎಸ್ ಕೆ ಕುಂಬಾರ, ರಾಜಶೇಖರ ಯಂಕಂಚಿ, ಮಹಾದೇವಪ್ಪ ಗೊಬ್ಬುರ, ಬಸವರಾಜ ಪಾಟೀಲ, ಸೋಮಶೇಖರ ಮೂಲಗೆ, ವಿಶ್ವನಾಥ ಮಠಪತಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ಅಧ್ಯಕ್ಷತೆ ವಹಿಸಿದ್ದರು.
ಆಳಂದ ನಿರಗುಡಿಗೆ ವಿವಿಧ ಸಂಘಗಳಿಂದ ಬೆಂಬಲ
ಕಲಾವಿದರಾದ ಶಿವರುದ್ರಯ್ಯ ಗೌಡಗಾಂವ, ಮಡಿವಾಳಯ್ಯ ಸ್ವಾಮಿ, ಅಣ್ಣಾರಾವ ಶೆಳ್ಳಗಿ, ಸೈದಪ್ಪ ಚೌಡಾಪುರ, ಸೀಮಾ ಪಾಟೀಲ, ವಿಜಯಲಕ್ಷ್ಮೀ ಕೆಂಗನಾಳ, ರೇಣುಕಾ ಪ್ರವೀಣಕುಮಾರ, ನಿರ್ಮಲ ಸಿರಗಾಪುರ, ಶಾಂತವೀರಯ್ಯ ಮಠಪತಿ, ಪ್ರಕೃತಿ ಮೇತ್ರೆ, ಸಾಕ್ಷಿ ಪಾಟೀಲ, ಸ್ವರೂಪ ವಾಲಿ, ಹಣಮಂತರಾವ ಕುಲಕರ್ಣಿ, ಶಾಂತಕುಮಾರ ಸಾವಳಗಿ, ಲಿಂಗಾನಂದ ಚಿಕ್ಕಮಠ, ಸ್ವಾಮಿ ಶಿವರಾಜ, ಸಾವಿತ್ರಿ ಪತ್ತಾರ, ಬಾಬುರಾವ ಕೋಬಾಳ, ದತ್ತರಾಜ ಕಲಶೆಟ್ಟಿ, ಚನ್ನವೀರಯ್ಯ ವಾಗ್ದರ್ಗಿ, ಚೇತನ ಬೀದಿಮನಿ,ಬ ರೇವಣಯ್ಯ ಸುಂಟನೂರ, ಸಂಗಣ್ಣ ಕುಂಬಾರ, ಶಿವಕವಿ ಹಿರೇಮಠ, ಉದಯಕುಮಾರ ಭೀಮಳ್ಳಿ, ರಾಚಯ್ಯ ಶಾಸ್ತ್ರೀ, ಪ್ರಶಾಂತ ಗೋಲ್ಡಸ್ಮಿಥ್, ಶಂಕರ ರುದ್ರವಾಡಿ, ಗುರುಲಿಂಗಯ್ಯ ವಾಡಿ, ಮಹಾಂತೇಶ ಹರವಾಳ, ನಾಗಲಿಂಗಯ್ಯ ಸ್ಥಾವರಮಠ, ಮೌನೇಶ ಪಾಂಚಾಳ, ವೀರಯ್ಯಸ್ವಾಮಿ, ಸಿದ್ದಲಿಂಗ ಹಡಪದ, ಸ್ವಯಂ ಸಿರಗಾಪೂರ ಸಂಗೀತ ಸೇವೆ ಸಲ್ಲಿಸಿದರು.
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…