ಆಳಂದ ನಿರಗುಡಿಗೆ ವಿವಿಧ ಸಂಘಗಳಿಂದ ಬೆಂಬಲ

0
36

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಾಹಿತಿ ಲೇಖಕ ಬಿ.ಹೆಚ್.ನಿರಗುಡಿ ಅವರಿಗೆ ಆಳಂದದ ಗುರುಭವನದಲ್ಲಿರುವ ಇಂದು ನಡೆದ ಸಭೆಯಲ್ಲಿ ವಿವಿಧ ಸಂಘಗಳ ಅಪಾರ ಬೆಂಬಲ ವ್ಯಕ್ತವಾಗಿದೆ.

ಸಾಹಿತಿಗಳ, ಬುದ್ಧಿ ಜೀವಿಗಳ,ಚಿಂತಕರು ಈ ಸಭೆಯಲ್ಲಿ ಮಾತನಾಡಿದ ಭಾರತ ಜ್ಞಾನ ವಿಜ್ಞಾನ ಸಂಘದ ಈ ಬಾರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆಬದಲಾವಣೆ ತರುವ ನಿಟ್ಟಿನಲ್ಲಿ ಸಾಹಿತಿ, ಲೇಖಕರಾಗಿ ಅನೇಕ ಪುಸ್ತಕಗಳು ನಾಡಿಗೆ ಪರಿಚಯಿಸಿದ್ದಾರೆ.ಇದಲ್ಲದೇ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದಾರೆ.ಇಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಿದ್ದಾರೆ.ಇಂಥವರಿಗೆ ಕನ್ನಡ ಕಟ್ಟುವ ಅವಕಾಶಕ್ಕಾಗಿ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಭೆಯಲ್ಲಿ ಅಭ್ಯರ್ಥಿ ಬಿ.ಹೆಚ್.ನಿರಗುಡಿ,ಜಿ.ಎಸ್.ಮಾಲಿಪಾಟೀಲ, ಲಿಂಗರಾಜ ಸಿರಗಾಪೂರ,ಸಿ.ಎಸ್.ಮಾಲಿಪಾಟೀಲ, ಸಿದ್ಧರಾಮ ಪಾಟೀಲ್,ಮರೇಪ್ಪ ಬಡಿಗೇರ, ಗುರುನಾಥ್ ಬಾವಿ, ರಾಜಕುಮಾರ ಬೆಟಗೇರಿ,ಜಿ.ಜಿ.ವಣಿಕ್ಯಾಳ, ಶರಣಗೌಡ ಪಾಟೀಲ್ ಪಾಳಾ, ಭೀಮಾಶಂಕರ ಎಳಿಮೆಲೆ,ಸಂಜಯ ಪಾಟೀಲ,ಶ್ರೀಶೈಲ ಮಾಡ್ಯಾಳೆ ಈ ಸಂದರ್ಭದಲ್ಲಿ ಮಾತನಾಡಿದರು.ನಾಗರಾಜ ಘೋಡಗಕೆ,ಕಲ್ಯಾಣಪ್ಪಾ ಬಿಜ್ಜರಗಿ,ಅಂಕುಶ ಚಳಕಾಪೂರ,ಮರೇಪ್ಪ ಬಡಿಗೇರ,ಲೋಕಪ್ಪ ಜಾಧವ, ಸತೀಶ್ ಸನ್ಮೂಖ, ವಿಶ್ವನಾಥ ಘೋಟಕೆ,ನಾಗಪ್ಪ ಮದರಿ, ಬಾಬುರಾವ್ ಮಡ್ಡೆ, ಪ್ರಭಾಕರ ಸಲಗರೆ, ಶಿವರಾಜ ಖಂಡಾಳೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here