ರಾಮನ ರಾಜ್ಯಾಭಾರದಲ್ಲಿ ಹಸಿವೆನಿಂದ ಜನ ಬಳಲುತ್ತಿರಲಿಲ್ಲ: ಈರಣ್ಣ ಕಾರ್ಗಿಲ್

ಶಹಾಬಾದ : ನವ ಪೀಳಿಗೆ ಯಶಸ್ವಿ ಮತ್ತು ಪರಿಪೂರ್ಣ ಬದುಕಿಗಾಗಿ ಭಗವಾನ್ ರಾಮನ ಜೀವನ ಮತ್ತು ಸದ್ಗುಣಗಳಿಂದ ಪಾಠ ಕಲಿತು, ಶ್ರೀ ರಾಮ ತೋರಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಹೇಳಿದರು.

ಅವರು ಬುಧವಾರ ಭಂಕೂರ ಗ್ರಾಮದ ವೃತ್ತದಲ್ಲಿ ಗ್ರಾಮದ ಯುವಕರು ಆಯೋಜಿಸಲಾದ ರಾಮನವಮಿ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ ಧರ್ಮದಲ್ಲಿ ರಾಮನಿಗೆ ಮಹತ್ವದ ಸ್ಥಾನವಿದ್ದು ಅವರನ್ನು ಮರ್ಯಾದಾ ಪುರು?ತ್ತಮ ಎಂದು ಕರೆಯಲಾಗಿದೆ. ವಿ?ವಿನ ಹತ್ತನೆಯ ಅವತಾರವಾಗಿ ರಾಮನನ್ನು ಕೊಂಡಾಡುತ್ತಾರೆ. ರಾಮಾಯಣದ ಕಥೆಯನ್ನು ಆಲಿಸಿಕೊಂಡು ಬೆಳೆದು ಬಂದವರು ನಾವಾಗಿರುವುದರಿಂದ ಜೀವನದಲ್ಲಿನ ಮಹತ್ವದ ಅಂಶಗಳನ್ನು ನಾವು ರಾಮಾಯಣದಿಂದ ಅರಿತಿದ್ದೇವೆ. ರಾಮನನ್ನು ಮರ್ಯಾದಾ ಪುರು?ತ್ತಮ ಎಂದು ಕರೆಯಲಾಗುತ್ತದೆ.ರಾಮನ ಸದ್ಗುಣಗಳನ್ನು ಪಾಲಿಸುವ ಮೂಲಕ ನವ ಸಮಾಜದ ನಿರ್ಮಾಣಕ್ಕೆಮುಂದಾಗೋಣ ಎಂದರು.

ಪ್ರತಿದಿನ ನೈಟ್ ಕಫ್ರ್ಯೂ, ಶನಿವಾರ ಮತ್ತು ರವಿವಾರ ಸಂಪೂರ್ಣ ಬಂದ್

ಪ್ರಕಾಶ ಪಾಟೀಲ ಮಾತನಾಡಿ, ರಾಮನು ಒಬ್ಬ ಪ್ರಜಾ ಪಾಲಕನಾಗಿದ್ದ. ಅವರ ರಾಜ್ಯಾಭಾರದಲ್ಲಿ ಕಳ್ಳತನ, ದರೋಡೆ, ಹಸಿವೆಯಿಂದ ಜನ ಬಳಲುತ್ತಿರಲಿಲ್ಲ. ತನ್ನ ವನವಾಸದ ಬಳಿಕ ಅಯೋಧ್ಯೆಗೆ ಮರಳಿ ರಾಜ್ಯಾಭಾರವನ್ನು ನಡೆಸಿದ ರಾಮನ ನಿರ್ಧಾರ ಮತ್ತು ಆಡಳಿತ ಪಾರದರ್ಶಕವಾಗಿತ್ತು. ಪ್ರಜೆಗಳ ಪಾಲನೆಯನ್ನು ಅತ್ಯಂತ ಗೌರವದಿಂದ ಮಾಡುತ್ತಿದ್ದ ರಾಮನು ಒಬ್ಬ ಪರಿಪೂರ್ಣ ಮನು?ನಾಗಿದ್ದಾರೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಲಕ್ಷ್ಮಿಕಾಂತ ಕಂದಗೂಳ ಮಾತನಾಡಿ, ಧರ್ಮ ಮಾರ್ಗದಲ್ಲಿ ಪರಿಪಾಲನೆಗೆ ಹೆಸರುವಾಸಿಯಾದವರು ರಾಮನು. ರಾಮನ ಆಡಳಿತದ ಸಮಯದಲ್ಲಿ ರಾಜ್ಯದಲ್ಲಿದ್ದ ಜನರು ಸುಖಿಗಳಾಗಿದ್ದರು. ಎಲ್ಲಿಯೂ ಕಳ್ಳತನ, ಮೋಸ, ವಂಚನೆ, ಹಸಿವಿನ ಚಿಂತೆ ಇರಲಿಲ್ಲ. ಎಲ್ಲಾ ಪ್ರಜೆಗಳು ಸುಖದಿಂದ ಬಾಳುತ್ತಿದ್ದರು. ರಾಮನ ಉದಾತ್ತ ಆದರ್ಶಗಳನ್ನು ಅವರು ನಂಬಿದ್ದರು. ಅಂತೂ ರಾಮ ರಾಜ್ಯ ಸುಖೀ ರಾಜ್ಯ ಎಂದು ಕರೆಯಬಹುದು ಎಂದು ಹೇಳಿದರು.

ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ: 4ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ

ಗ್ರಾಮದ ಮುಖಂಡರಾದ ಶಶಿಕಾಂತ ಪಾಟೀಲ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಯುವಕರಾದ ಸಂತೋಷ ಕಲಶೆಟ್ಟಿ, ಈರಪ್ಪ ಹೂಗಾರ, ವಿರೇಶ ಸ್ವಾಮಿ,ಸಂಗಮೇಶ ಚಿತ್ತಾಪೂರ, ಪವನ ಸಿರಗೊಂಡ ಇತರರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420