ರಾಮನ ರಾಜ್ಯಾಭಾರದಲ್ಲಿ ಹಸಿವೆನಿಂದ ಜನ ಬಳಲುತ್ತಿರಲಿಲ್ಲ: ಈರಣ್ಣ ಕಾರ್ಗಿಲ್

0
76

ಶಹಾಬಾದ : ನವ ಪೀಳಿಗೆ ಯಶಸ್ವಿ ಮತ್ತು ಪರಿಪೂರ್ಣ ಬದುಕಿಗಾಗಿ ಭಗವಾನ್ ರಾಮನ ಜೀವನ ಮತ್ತು ಸದ್ಗುಣಗಳಿಂದ ಪಾಠ ಕಲಿತು, ಶ್ರೀ ರಾಮ ತೋರಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಹೇಳಿದರು.

ಅವರು ಬುಧವಾರ ಭಂಕೂರ ಗ್ರಾಮದ ವೃತ್ತದಲ್ಲಿ ಗ್ರಾಮದ ಯುವಕರು ಆಯೋಜಿಸಲಾದ ರಾಮನವಮಿ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಹಿಂದೂ ಧರ್ಮದಲ್ಲಿ ರಾಮನಿಗೆ ಮಹತ್ವದ ಸ್ಥಾನವಿದ್ದು ಅವರನ್ನು ಮರ್ಯಾದಾ ಪುರು?ತ್ತಮ ಎಂದು ಕರೆಯಲಾಗಿದೆ. ವಿ?ವಿನ ಹತ್ತನೆಯ ಅವತಾರವಾಗಿ ರಾಮನನ್ನು ಕೊಂಡಾಡುತ್ತಾರೆ. ರಾಮಾಯಣದ ಕಥೆಯನ್ನು ಆಲಿಸಿಕೊಂಡು ಬೆಳೆದು ಬಂದವರು ನಾವಾಗಿರುವುದರಿಂದ ಜೀವನದಲ್ಲಿನ ಮಹತ್ವದ ಅಂಶಗಳನ್ನು ನಾವು ರಾಮಾಯಣದಿಂದ ಅರಿತಿದ್ದೇವೆ. ರಾಮನನ್ನು ಮರ್ಯಾದಾ ಪುರು?ತ್ತಮ ಎಂದು ಕರೆಯಲಾಗುತ್ತದೆ.ರಾಮನ ಸದ್ಗುಣಗಳನ್ನು ಪಾಲಿಸುವ ಮೂಲಕ ನವ ಸಮಾಜದ ನಿರ್ಮಾಣಕ್ಕೆಮುಂದಾಗೋಣ ಎಂದರು.

ಪ್ರತಿದಿನ ನೈಟ್ ಕಫ್ರ್ಯೂ, ಶನಿವಾರ ಮತ್ತು ರವಿವಾರ ಸಂಪೂರ್ಣ ಬಂದ್

ಪ್ರಕಾಶ ಪಾಟೀಲ ಮಾತನಾಡಿ, ರಾಮನು ಒಬ್ಬ ಪ್ರಜಾ ಪಾಲಕನಾಗಿದ್ದ. ಅವರ ರಾಜ್ಯಾಭಾರದಲ್ಲಿ ಕಳ್ಳತನ, ದರೋಡೆ, ಹಸಿವೆಯಿಂದ ಜನ ಬಳಲುತ್ತಿರಲಿಲ್ಲ. ತನ್ನ ವನವಾಸದ ಬಳಿಕ ಅಯೋಧ್ಯೆಗೆ ಮರಳಿ ರಾಜ್ಯಾಭಾರವನ್ನು ನಡೆಸಿದ ರಾಮನ ನಿರ್ಧಾರ ಮತ್ತು ಆಡಳಿತ ಪಾರದರ್ಶಕವಾಗಿತ್ತು. ಪ್ರಜೆಗಳ ಪಾಲನೆಯನ್ನು ಅತ್ಯಂತ ಗೌರವದಿಂದ ಮಾಡುತ್ತಿದ್ದ ರಾಮನು ಒಬ್ಬ ಪರಿಪೂರ್ಣ ಮನು?ನಾಗಿದ್ದಾರೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಲಕ್ಷ್ಮಿಕಾಂತ ಕಂದಗೂಳ ಮಾತನಾಡಿ, ಧರ್ಮ ಮಾರ್ಗದಲ್ಲಿ ಪರಿಪಾಲನೆಗೆ ಹೆಸರುವಾಸಿಯಾದವರು ರಾಮನು. ರಾಮನ ಆಡಳಿತದ ಸಮಯದಲ್ಲಿ ರಾಜ್ಯದಲ್ಲಿದ್ದ ಜನರು ಸುಖಿಗಳಾಗಿದ್ದರು. ಎಲ್ಲಿಯೂ ಕಳ್ಳತನ, ಮೋಸ, ವಂಚನೆ, ಹಸಿವಿನ ಚಿಂತೆ ಇರಲಿಲ್ಲ. ಎಲ್ಲಾ ಪ್ರಜೆಗಳು ಸುಖದಿಂದ ಬಾಳುತ್ತಿದ್ದರು. ರಾಮನ ಉದಾತ್ತ ಆದರ್ಶಗಳನ್ನು ಅವರು ನಂಬಿದ್ದರು. ಅಂತೂ ರಾಮ ರಾಜ್ಯ ಸುಖೀ ರಾಜ್ಯ ಎಂದು ಕರೆಯಬಹುದು ಎಂದು ಹೇಳಿದರು.

ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ: 4ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ

ಗ್ರಾಮದ ಮುಖಂಡರಾದ ಶಶಿಕಾಂತ ಪಾಟೀಲ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಯುವಕರಾದ ಸಂತೋಷ ಕಲಶೆಟ್ಟಿ, ಈರಪ್ಪ ಹೂಗಾರ, ವಿರೇಶ ಸ್ವಾಮಿ,ಸಂಗಮೇಶ ಚಿತ್ತಾಪೂರ, ಪವನ ಸಿರಗೊಂಡ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here