ಕಲಬುರಗಿ: ಮನುಷ್ಯನ ನಡವಳಿಕೆ ಆತನ ವ್ಯಕ್ತಿತ್ವದ ಕನ್ನಡಿ ಸಾರ್ವಜನಿಕರ ವರ್ತನೆಯಿಂದ ಅವರ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಅಂತಹ ಉತ್ತಮ ವ್ಯಕ್ತಿತ್ವ ಗುಣಗಳನ್ನು ಹೊಂದಿ ಹಲವಾರು ಜನರ ಮನದಲ್ಲಿ ಶಿವರಾಯಗೌಡ ಪಾಟೀಲರು ಸದ್ದಿಲ್ಲದೆ ಸಮಾಜ ಸೇವೆಗೈದ ಸೇವಕರಾದರು ಎಂದು ಕೆಎಚ್ ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಸಂಜೀವ್ ಕುಮಾರ ಶೆಟ್ಟಿ ಹೇಳಿದರು.
ನಿನ್ನೆ ನಗರದ ಸಂತೋಷ ಕಾಲೊನಿಯ ಕೆಎಚ್ ಬಿ ಬಡಾವಣೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದವತಿಯಿ೦ದ ಆಯೋಜಿಸಲಾದ ಇತ್ತೀಚಿಗೆ ನಮ್ಮನ್ನಗಲಿದ ಸಮಾಜ ಸೇವಕರು ಹಾಗೂ ಸಂಘದ ಹಿರಿಯ ಮಾರ್ಗದರ್ಶಕರಾದ ಶಿವರಾಯಗೌಡ ಪಾಟೀಲ ಮುದಡಗಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸೂಜಿಯು ತುಂಡಾದ ಬಟ್ಟೆಯನ್ನು ಜೋಡಿಸಿ ಹೊಲಿಯುವ ಹಾಗೆ ಸರ್ವ ಜನಾಂಗವನ್ನು ಒ೦ದು ಗೂಡಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಸಮಸಮಾಜ ನಿರ್ಮಿಸಲು ಶ್ರೀಯುತರು ಪ್ರಯತ್ನಿಸಿದರು. ಯಾವುದೇ ಅಧಿಕಾರ ಬಯಸದೆ ಎಲೆಮರೆ ಕಾಯಿಯಂತೆ ಸಮಾಜ ಸೇವೆ ಮಾಡಿ ಹಲವಾರು ಜನರ ಮನದಲ್ಲಿ ದಿವ್ಯ ಮೂರ್ತಿಯಾಗಿ ಅಮರರಾಗಿದ್ದಾರೆ.
ಅಂತಹ ಮಹಾನ ವ್ಯಕ್ತಿಯನ್ನು ಕಳೆದುಕೊಂಡ ನಮ್ಮ ಬಡಾವಣೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತರಿಗೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಆಚರಿಸಲಾಯಿತು. ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಮಾತನಾಡಿ ಶ್ರೀಯುತರು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಏರುವ ಸಂದರ್ಭದಲ್ಲಿಯೆ ನಮ್ಮನ್ನಲಿರುವದು ದುಃಖಕರ ವಿಷಯ. ಸಾರ್ವಜನಿಕರು ಈಗ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕು ನಡೆಸುವಂತಾಗಿದೆ ಸರ್ವರು ಕೊರೊನ ಸೊ೦ಕಿನಿ೦ದ ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತೆ ವಹಿಸಿಕೊಂಡು ತಮ್ಮ ಜೀವ ತಮ್ಮ ಕೈಯಲ್ಲೆ ಎನ್ನುವ ಹಾಗೆ ಸುರಕ್ಷಿತವಾಗಿ ಜೀವನ ನಡೆಸಬೇಕೆಂದು ಹೇಳಿದರು.
ನಾಗೇಂದ್ರಪ್ಪ ದಂಡೋತಿಕರ್, ಸಂಗಮೇಶ ಸರಡಗಿ, ಬಾಲಕೃಷ್ಣ ಕುಲಕರ್ಣಿ, ಚಂದ್ರಕಾಂತ ತಳವಾರ, ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಾಜೇಶ್ ನಾಗಭುಜಂಗೆ, ಬಸವರಾಜ ತಳವಾರ ಯಾಳಗಿ, ಡಿ. ವಿ.ಕುಲಕರ್ಣಿ, ಶ್ರೀನಿವಾಸ ಬುಜ್ಜಿ , ಶರಣಬಸಪ್ಪ ದೆಶೆಟ್ಟಿ, ರೇವಣಸಿದ್ದಪ್ಪ ರುದ್ರವಾಡಿ, ಕೆ.ಎಮ್. ಲೋಕಯ್ಯ, ಗೌಸ್ ಅಸ್ಮತ್ ಅಲಿ ಖಾನ್, ಸಿದ್ರಾಮಪ್ಪ ಬಿರಾದಾರ, ದೇಶಮುಖ ಬಿರಾದಾರ, ಬಾಬುರಾವ ಚವ್ಹಾಣ, ಅರುಣಕುಮಾರ ಬೈರಗೊ೦ಡ,ರಾಮು, ಇತರರು ಭಾಗವಹಿಸಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…