ಸುರಪುರ: ಸರಕಾರದ ಆದೇಶದಂತೆ ಈ ಬಾರಿಯ ರಂಜಾನ್ ಮತ್ತು ಬಸವ ಜಯಂತಿಯನ್ನು ನಿಮ್ಮ ನಿಮ್ಮ ಮನೆಗಳಲ್ಲಿಯೆ ಆಚರಿಸುವಂತೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಪೊಲೀಸ್ ಇಲಾಖೆ ಹಾಗು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ರಂಜಾನ್ ಹಬ್ಬವೆಂದು ಯಾರು ಕೂಡ ಮೆರವಣಿಗೆ ನಡೆಸುವುದಾಗಲಿ,ಪರಸ್ಪರ ಕೈ ಕುಲುಕುವುದಾಗಲಿ, ಅಪ್ಪಿಕೊಳ್ಳುವುದನ್ನು ಮಾಡದಿರಿ.ಅಲ್ಲದೆ ಬೇರೆಯವರನ್ನು ಮನೆಗೆ ಔತಣಕ್ಕೂ ಕರೆಯಬೇಡಿ,ಯಾಕೆಂದೆರೆ ಕೊರೊನಾ ಸೊಂಕು ತುಂಬಾ ವೇಗವಾಗಿ ಹರಡುತ್ತಿದ್ದು,ಇದರಿಂದ ದೂರ ಉಳಿಯುವುದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಉದ್ಯೋಗ ಖಾತ್ರಿ ಆರಂಭಿಸಲು ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ
ಪಿಐ ಎಸ್.ಎಮ್.ಪಾಟೀಲ್ ಮಾತನಾಡಿ,ಸರಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು ಮುಸ್ಲೀಂ ಬಾಂಧವರು ರಂಜಾನ್ ಹಬ್ಬವನ್ನು ಮನೆಯಲ್ಲಿಯೇ ಆಚರಿಸಿ ಮಜೀದ್ಗೆ ಯಾರೂ ಹೋಗಬೇಡಿ,ಇನ್ನು ಬಸವ ಜಯಂತಿಯನ್ನೂ ದೇವಸ್ಥಾನದಲ್ಲಿ ಆಚರಿಸುವಂತಿಲ್ಲ ತಮ್ಮ ತಮ್ಮ ಮನೆಗಳಲ್ಲಿಯೆ ಆಚರಿಸಿ.ದೇವಸ್ಥಾನದಲ್ಲಿ ಕೇವಲ ಅರ್ಚಕರು ಮಾತ್ರ ದೇವರಿಗೆ ಸಾಂಪ್ರದಾಯಿಕವಾಗಿ ಸರಳವಾಗಿ ಪೂಜೆಯನ್ನು ನೆರವೇರಿಸಲು ಮಾತ್ರ ಅವಕಾಶವಿದೆ ಎಂದರು.
ನಂತರ ಮಾಜಿ ನಗರಸಭೆ ಅಧ್ಯಕ್ಷ ಶೇಖ್ ಮಹಿಬೂಬ ಒಂಟಿ ಮಾತನಾಡಿ,ಮಜೀದ್ನಲ್ಲಿ ಕೇವಲ ಐದು ಜನರು ಪ್ರಾರ್ಥನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.ನಂತರ ಮುಫ್ತಿ ಎಕ್ಬಾಲ್ ಒಂಟಿ ಮಾತನಾಡಿ,ಸರಕಾರ ನಮ್ಮೆಲ್ಲರ ಒಳಿತಿಗಾಗಿಯೆ ನಿಯಮ ಮಾಡಿದೆ,ಎಲ್ಲರು ಆದೇಶವನ್ನು ಪಾಲಿಸೋಣ ಈ ಬಾರಿಯ ರಂಜಾನ್ ಹಬ್ಬವನ್ನು ಸರಳವಾಗಿ ಮನೆಗಳಲ್ಲಿಯೆ ಆಚರಿಸೋಣ ಎಂದು ಎಲ್ಲರಿಗೂ ತಿಳಿಸಿದರು.
ಪತ್ರಕರ್ತ ಕಾಗಲಕರ್ ನಿಧನಕ್ಕೆ ಶಾಸಕ ಗುತ್ತೇದಾರ ಸಂತಾಪ
ಸಭೆಯಲ್ಲಿ ಮುಖಂಡರಾದ ಅಬ್ದುಲ್ ಗಫೂರ ನಗನೂರಿ ಖಾಜಾ ಖಲೀಲ ಅಹ್ಮದ್ ಅರಕೇರಿ ಖಾಲಿದ್ ಅಹ್ಮದ್ ತಾಳಿಕೋಟಿ ಶರಣು ಕಳ್ಳಿಮನಿ ಲಿಯಾಖತ್ ಹುಸೇನ್ ಉಸ್ತಾದ್ ಉಸ್ತಾದ ವಜಾಹತ್ ಹುಸೇನ್ ಅಬ್ದುಲ್ ಮಜೀದ್ ಸಾಬ್ ಗಫರ್ ಖುರೇಶಿ ಮಹ್ಮದ್ ಮೌಲಾ ಸೌದಾಗರ್ ದಾವೂದ್ ಇಬ್ರಾಹಿಂ ಪಠಾಣ್ ಅಬೀದ್ ಹುಸೇನ್ ಪಗಡಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…