ಬಿಸಿ ಬಿಸಿ ಸುದ್ದಿ

“ರೋಗಿಯನ್ನು ಉಳಿಸಿ ಜೀವ ರಕ್ಷಿಸಿ”

ಕಲಬುರಗಿ: ಇಂದು ನಗರದ ದೇವಿ ನಗರದ ಬಡಾವಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಆನ್ ಲೈನ್ ಮೂಲಕ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಮಾತನಾಡುತ್ತಾ ಕೋವಿಡ ನಿಯಂತ್ರಣ ಮಾಡುವಲ್ಲಿ ಕಲಬುರಗಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಪೂರ್ಣಪ್ರಮಾಣದ ವೆಂಟಿಲೇಟರ್, ಆಕ್ಸಿಜನ್’,ಬೆಡ ಕೊರತೆಯಿಂದ ಹಾಗೂ ಸರಿಯಾದ ಚಿಕಿತ್ಸೆ ಇಲ್ಲದೆ ಸೊ೦ಕಿತರು ಸಾವನ್ನಪ್ಪುತ್ತಿದ್ದಾರೆ. ರೋಗಿಯ ಜೀವ ಉಳಿಸುವರೊ೦ದಿಗೆ ಜೀವ ರಕ್ಷಿಸುವದು ಸರಕಾರದ ಜವಾಬ್ದಾರಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರು ಹಲವಾರು ಬಾರಿ ನಮ್ಮ ಕಲಬುರ್ಗಿ ನಗರಕ್ಕೆ ಭೇಟಿ ಕೊಟ್ಟು ವಿಕ್ಷಣೆ ಮಾಡುತ್ತಿರುವದು ಸ್ವಾಗತಾರ್ಹ ಆದರೂ ಕೂಡ ಪ್ರತಿ ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ಕೇಂದ್ರದಲ್ಲಿ  ಕೋವಿಡ ಕೇಂದ್ರ ಪ್ರಾರಂಭಿಸಿ ಸರ್ಕಾರ  ಜನರ ನೆರವಿಗೆ ಬರುಬೇಕೆ೦ದು ಒತ್ತಾಯಿಸುತ್ತಾ, ಜೊತೆಗೆ ನಗರದಲ್ಲಿರುವ ಹಲವಾರು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಸರಿಯಾದ ಚಿಕಿತ್ಸೆ ನೀಡುವಂತಾಗಬೇಕು.

ಇನ್ನೂ ಅತೀ ತೀವ್ರ ಗತಿಯಿಂದ ಹರಡುತ್ತಿರುವ ಸೋಂಕು ತಡೆಗಟ್ಟಲು ಪ್ರಯತ್ನ ಮಾಡಬೇಕು. ಹಳ್ಳಿಹಳ್ಳಿಗಳಲ್ಲಿ ಹರಡುತ್ತಿರುವ ಸೋಂಕು ತಡೆಗಟ್ಟಬೇಕು. ಬಡ ಕೂಲಿ ಕಾರ್ಮಿಕರ  ಕುಟುಂಬದ ನಿರ್ವಹಣೆಗಾಗಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂ. ಗಳಂತೆ  ಪರಿಹಾರ ಧನ ನೀಡಬೇಕು.  ಪ್ರತಿಯೊಂದು ಕೋವಿಡ ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರೋಗಿಯ ಸಂಬಂಧಿಕರಿಗೆ ಪಾರದರ್ಶಕವಾಗಿ ನೋಡುವ ಹಾಗೆ ಮತ್ತು ರೋಗಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಎಐವೈಎಫ್ ಜಿಲ್ಲಾಧ್ಯಕ್ಷ ಹಣಮಂತರಾಯ ಅಟ್ಟೂರ, ಅಲಿಸಾಬ್ ಸಿಂದಗಿ, ರಘುನಂದನ ಕುಲಕರ್ಣಿ, ಸುರೇಶ ಮಸಳಿ ಇದ್ದರು.

emedialine

Recent Posts

ವಾಸವದತ್ತಾ ರೈಲು ಸಂಚಾರ ಸಮಯ ಬದಲು : ಡಿಸಿ ಭರವಸೆ

ರೈಲ್ವೆ ಇಲಾಖೆ ಜೊತೆಗೆ ಚರ್ಚಿಸಿ ಕ್ರಮ : ನಂತರ ರೈಲು ಹಳಿ ಸ್ಥಳಾಂತರಕ್ಕೆ ಕ್ರಮ ಸೇಡಂ: ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ…

3 mins ago

ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ

ಕಲಬುರಗಿ: ತಾಲೂಕಿನ ಇಟಗಾ ಗ್ರಾಮದ ಹಿಂದೂ ಕಾರ್ಯಕರ್ತನಾದ ಭೀಮು ದಾಸರ ಇವರ ಮೇಲೆ ಅನ್ಯ ಕೋಮಿನ ಜನ ಹಲ್ಲೆ ಮಾಡಿದವರ…

11 mins ago

ವಾರ್ಡ ನಂ 6 ಉದ್ಯಾನವನ ಕಳಪೆ ಕಾಮಗಾರಿ ಆರೋಪ

ಕಲಬುರಗಿ: ನಗರದ ವಾರ್ಡ ನಂ 6 ರಲ್ಲಿ ಬರುವ ಚೆನ್ನವೀರ ಬಡಾವಣೆಯಲ್ಲಿ ಕೆಕೆಆರ್.ಡಿಬಿ ಅನುದಾನದಲ್ಲಿ ಕೆ.ಆರ್.ಐ.ಡಿ.ಎಲ್. ನಿಂದ ಕಾಮಗಾರಿ ಉದ್ಯಾನವನವು…

13 mins ago

ಆದಿಜಾಂಭವ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂ. ಮೀಸಲಿಡಲು ಆಗ್ರಹ

ಕಲಬುರಗಿ: ಕಳೆದ 25 ವರ್ಷಗಳಿಂದ ಮಾದಿಗರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ವಿವಿಧ ರಾಜಕೀಯ ಆಡಳಿತ ಸರಕಾರಗಳಿಗೆ ಪ್ರತಿಭಟನೆ,ಧರಣಿ, ಸತ್ಯಾಗೃಹ,…

18 mins ago

ಪ್ರೊ. ಎ. ಎಸ್. ಹೊಸಮನಿ ಜಪಾನ್ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರಾಧ್ಯಾಫಕ ಹಾಗೂ ವಾಣಿಜ್ಯ ನಿಕಾಯದ ಡೀನ್ ಪ್ರೊ. ಎ.…

21 mins ago

“ಲವ್ ಇಸ್ ಬ್ಲೈಂಡ್” ಚಿತ್ರದ ಪೋಸ್ಟರ್ ಬಿಡುಗಡೆ

ಕಲಬುರಗಿ: ಜುಲೈ 1ರ ಸೋಮವಾರ ರಾತ್ರಿ 8 ಗಂಟೆಗೆ ಕಲಬುರಗಿ ನಗರದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದ…

24 mins ago