ಕಲಬುರಗಿ: ಡೆಡ್ಲಿ ಕರೋನಾ ಮಹಾಮಾರಿ ಭೀತಿಯಿಂದ ಇಡೀ ಭಾರತವೇ ೧ನೇ ಹಂತದಲ್ಲಿ ಲಾಕ್ಡೌನ್ ಆಗಿರುವುದರಿಂದ ಕಲಾವಿದರು ಬಹಳ ನಷ್ಟ ಅನುಭವಿಸುತ್ತಿದ್ದಾರೆ.
ಹೀಗಾಗಿ ಸರಕಾರ ಕಲಾವಿದರಿಗೆ ಕಳೆದ ವರ್ಷ ಕೂಡಾ ಯಾವುದೇ ರೀತಿಯ ಸಹಾಯ ಹಸ್ತ ಮಾಡಿರುವುದಿಲ್ಲ. ಸದರಿ ೨ನೇ ಅಲೆಯಲ್ಲಿ ಕರ್ನಾಟಕ ಸಂಪೂರ್ಣವಾಗಿ ಲಾಕ್ಡೌನ್ ಆಗಿರುವುದರಿಂದ ಸಮಸ್ತ ಕಲಾವಿದರಿಗೆ ಜೀವನವನ್ನು ನಡೆಸುವಲ್ಲಿ ತುಂಬಾ ಕಷ್ಠದಾಯಕವಾಗುತ್ತಿದೆ ಎಂದು ಗುಲಬರ್ಗಾ ಡ್ಯಾನ್ಸ್ ಸಂಘ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಯಂಕಪ್ಪ (ಅಕ್ಷಯ) ಅವರು ತಿಳಿಸಿದ್ದಾರೆ.
ಕಲಾವಿದರು ಜೀವನವನ್ನು ಸಾಗಿಸುವುದು ತುಂಬಾನೇ ಕಷ್ಠದಾಯಕವಾಗಿದೆ. ಕಲೆಯಿಂದನೇ ಕಲಾವಿದರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈಗ ಕರೋನಾ ಮಹಾಮಾರಿ ಬೀತಿಯ ಹಿನ್ನಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿರುತ್ತದೆ. ಮತ್ತು ಕಲೆಗೆ ಬೆಲೆ ಇಲ್ಲದಂತಾಗಿರುತ್ತದೆ ಕಲಾವಿದರೂ ಎಲ್ಲಾ ಕ್ಷೇತ್ರದಲ್ಲಿ ತುಂಬಾ ಅವಶ್ಯಕತೆ ಇದ್ದು ಈಗ ಸದರಿ ಸರ್ಕಾರವು ಕಲಾವಿದರನ್ನು ಕಡೆಗಣಿಸುತ್ತಿದ್ದಾರೆ ಎಂದು ಯಂಕಪ್ಪ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಡಕಾರ್ಮಿಕರಿಗೆ ಹಣ ಘೋಷಣೆ ಮಾಡಿದ ಹಾಗೆ ಕಲಾವಿದರಿಗೂ ಕೂಡ ಸಹಾಯ ಹಸ್ತವನ್ನು ಮಾಡಬೇಕೆಂದು ಸಮಸ್ತ ಕಲಾವಿದರ ವತಿಯಿಂದ ಸರ್ಕಾರಕ್ಕೆ ಮನವಿಯನ್ನು ಮಾಡಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮನಸ್ಸು ಜಾನಪದ ಕಲಾ ಸಂಸ್ಥೆ, ಜ್ಯೋತಿ ಜಾನಪದ ಕಲಾ ಸಂಸ್ಥೆ, ಮಯ್ಯೂರಿ ನೃತ್ಯ ಕಲಾ ತಂಡ, ರಂಗಾಂತರ ರಂಗ ಜಾನಪದ ತಂಡ, ಕರ್ನಾಟಕ ನೃತ್ಯ ಕಲಾ ಸಂಸ್ಥೆ, ಎಚ್.ಕೆ.ಇ.ಡಿ ಸಂಗೀತ ಕಲಾ ಸಂಸ್ಥೆ, ಅರವಿಂದ ಸನಗುನಗಿ ಜಾನಪದ ಕಲಾ ತಂಡ, ಚಾಂಚ ಜಾಕ್ಷನ ಜಾನಪದ ಕಲಾ ತಂಡ, ಮಹಾತ್ಮಾಗಾಂಧಿ ಡ್ಯಾನ್ಸ್ ಅಕಾಡಮಿ, ಸಾಯಬಣ್ಣಾ ಸನ್ಮಾನ ಡ್ಯಾನ್ಸ್ ಅಕಾಡಮಿ, ಮನಸ್ವಿನಿ ಜಾನಪದ ಕಲಾ ತಂಡ, ಶ್ರೀ ಬಸವ ಸಂಗೀತ ಜಾನಪದ ಕಲಾ ತಂಡ, ಶರಣು ಕ.ಎ. ಮೂಲಗೆ ಕಲಾ ತಂಡದವರು ಉಪಸ್ಥಿತರಿದ್ದರು.
ಕಲಬುರಗಿ: ಇಂದು ಜಿಲ್ಲೆಯ ಅಂಧ ಬಾಲಕರ ಸಕಾ೯ರಿ ಶಾಲೆಗೆ ಹೊಸ ಕಟ್ಟಡದ ನಿಮಾ೯ಣ ಕಾಯ೯ಕ್ಕೆ ಸಂಬಂಧಿಸಿದಂತೆ KRIDL ENGINEERS ರವರೊಂದಿಗೆ…
ಜಿಲ್ಲಾಧಿಕಾರಿಗಳಿಂದ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ…
ಕಲಬುರಗಿ: ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹೆಕ್ಕಿ ತೆಗೆದ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯದ ಪಿತಾಮಹ ಎಂದು ಮುಖ್ಯಮಂತ್ರಿಗಳ…
ಕಲಬುರಗಿ: ಸ್ಥಳೀಯ ಕೆಬಿಎನ್ ವಿವಿಯ ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನವನ್ನು ಆಚರಿಸಲಾಯಿತು. ರೇಡಿಯೋ ಡಿಗ್ನೋಸಿಸ ವಿಭಾಗದ ಮಾಜಿ ಮುಖಸ್ಥ ಡಾ.…
ಕಲಬುರಗಿ : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ…
ಕಲಬುರಗಿ: ಕಂದಾಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ನೂತನ 18 ತಾಲೂಕು ಕೇಂದ್ರಗಳಲ್ಲಿ ಆಡಳಿತ ವಿಧಾನಸೌಧಗಳನ್ನು ನಿರ್ಮಿಸಲು ತಲಾ…