ಕಲಾವಿದರಿಗೂ ಧನ ಸಹಾಯ ನೀಡಿ: ಯಂಕಪ್ಪ

0
21

ಕಲಬುರಗಿ: ಡೆಡ್ಲಿ ಕರೋನಾ ಮಹಾಮಾರಿ ಭೀತಿಯಿಂದ ಇಡೀ ಭಾರತವೇ ೧ನೇ ಹಂತದಲ್ಲಿ ಲಾಕ್‌ಡೌನ್ ಆಗಿರುವುದರಿಂದ ಕಲಾವಿದರು ಬಹಳ ನಷ್ಟ ಅನುಭವಿಸುತ್ತಿದ್ದಾರೆ.

ಹೀಗಾಗಿ ಸರಕಾರ ಕಲಾವಿದರಿಗೆ ಕಳೆದ ವರ್ಷ ಕೂಡಾ ಯಾವುದೇ ರೀತಿಯ ಸಹಾಯ ಹಸ್ತ ಮಾಡಿರುವುದಿಲ್ಲ. ಸದರಿ ೨ನೇ ಅಲೆಯಲ್ಲಿ ಕರ್ನಾಟಕ ಸಂಪೂರ್ಣವಾಗಿ ಲಾಕ್‌ಡೌನ್ ಆಗಿರುವುದರಿಂದ ಸಮಸ್ತ ಕಲಾವಿದರಿಗೆ ಜೀವನವನ್ನು ನಡೆಸುವಲ್ಲಿ ತುಂಬಾ ಕಷ್ಠದಾಯಕವಾಗುತ್ತಿದೆ ಎಂದು ಗುಲಬರ್ಗಾ ಡ್ಯಾನ್ಸ್ ಸಂಘ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಯಂಕಪ್ಪ (ಅಕ್ಷಯ) ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಕಲಾವಿದರು ಜೀವನವನ್ನು ಸಾಗಿಸುವುದು ತುಂಬಾನೇ ಕಷ್ಠದಾಯಕವಾಗಿದೆ. ಕಲೆಯಿಂದನೇ ಕಲಾವಿದರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈಗ ಕರೋನಾ ಮಹಾಮಾರಿ ಬೀತಿಯ ಹಿನ್ನಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವಂತಾಗಿರುತ್ತದೆ. ಮತ್ತು ಕಲೆಗೆ ಬೆಲೆ ಇಲ್ಲದಂತಾಗಿರುತ್ತದೆ ಕಲಾವಿದರೂ ಎಲ್ಲಾ ಕ್ಷೇತ್ರದಲ್ಲಿ ತುಂಬಾ ಅವಶ್ಯಕತೆ ಇದ್ದು ಈಗ ಸದರಿ ಸರ್ಕಾರವು ಕಲಾವಿದರನ್ನು ಕಡೆಗಣಿಸುತ್ತಿದ್ದಾರೆ ಎಂದು ಯಂಕಪ್ಪ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬಡಕಾರ್ಮಿಕರಿಗೆ ಹಣ ಘೋಷಣೆ ಮಾಡಿದ ಹಾಗೆ ಕಲಾವಿದರಿಗೂ ಕೂಡ ಸಹಾಯ ಹಸ್ತವನ್ನು ಮಾಡಬೇಕೆಂದು ಸಮಸ್ತ ಕಲಾವಿದರ ವತಿಯಿಂದ ಸರ್ಕಾರಕ್ಕೆ ಮನವಿಯನ್ನು ಮಾಡಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮನಸ್ಸು ಜಾನಪದ ಕಲಾ ಸಂಸ್ಥೆ, ಜ್ಯೋತಿ ಜಾನಪದ ಕಲಾ ಸಂಸ್ಥೆ, ಮಯ್ಯೂರಿ ನೃತ್ಯ ಕಲಾ ತಂಡ, ರಂಗಾಂತರ ರಂಗ ಜಾನಪದ ತಂಡ, ಕರ್ನಾಟಕ ನೃತ್ಯ ಕಲಾ ಸಂಸ್ಥೆ, ಎಚ್.ಕೆ.ಇ.ಡಿ ಸಂಗೀತ ಕಲಾ ಸಂಸ್ಥೆ, ಅರವಿಂದ ಸನಗುನಗಿ ಜಾನಪದ ಕಲಾ ತಂಡ, ಚಾಂಚ ಜಾಕ್ಷನ ಜಾನಪದ ಕಲಾ ತಂಡ, ಮಹಾತ್ಮಾಗಾಂಧಿ ಡ್ಯಾನ್ಸ್ ಅಕಾಡಮಿ, ಸಾಯಬಣ್ಣಾ ಸನ್ಮಾನ ಡ್ಯಾನ್ಸ್ ಅಕಾಡಮಿ, ಮನಸ್ವಿನಿ ಜಾನಪದ ಕಲಾ ತಂಡ, ಶ್ರೀ ಬಸವ ಸಂಗೀತ ಜಾನಪದ ಕಲಾ ತಂಡ, ಶರಣು ಕ.ಎ. ಮೂಲಗೆ ಕಲಾ ತಂಡದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here