ಶಹಾಬಾದ: ಕೋವಿಡ ೨ ಎರಡನೆಯ ಅಲೆಯಿಂದ ತತ್ತರಿಸಿ ಹೋದ ಶಹಾಬಾದ ನಗರದ ವಾರ್ಡ ನಂ. ೧೧, ೧೨, ೧೩ ರ ಕಡು ಬಡವರಿಗೆ ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷ ಯುವ ನಾಯಕ ಡಾ. ರವಿ ಚವ್ಹಾಣ ಪ್ರತಿ ಕುಟುಂಬಕ್ಕೆ ವ್ಯಯಕ್ತಿಕ ಹಣದ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ಡಾ.ರವಿ ಚವ್ಹಾಣ, ಲಾಕ್ಡೌನ್ನಿಂದ ಕಡುಬಡವರ ಸ್ಥಿತಿ ಚಿಂತಾಜನಕವಾಗಿದೆ. ಕೈಗಳಿಗೆ ಕೆಲಸವಿಲ್ಲದೇ ಕುಟುಂಬ ನಿರ್ವಹಣೆ ಸವಾಲಾಗಿ ಬಿಟ್ಟಿದೆ.ಇದರಿಂದ ಒಂದೊತ್ತಿನ ಊಟಕ್ಕೂ ಪರಿತಪಿಸುವಂತಹ ವಾತಾವರಣ ನಿರ್ಮಾಣವಾಗಿದೆ.ಆದ್ದರಿಂದ ಸ್ಥಳೀಯ ಮುಖಂಡರಾದ ಕುಮಾರ ಚವ್ಹಾಣ ಅವರು ನನಗೆ ಮಾಹಿತಿ ನೀಡಿದ್ದರಿಂದ ಸುಮಾರು ೬೦ ಕುಟುಂಬದವರಿಗೆ ವ್ಯಯಕ್ತಿಕವಾಗಿ ಹಣದ ರೂಪದಲ್ಲಿ ಸಹಾಯ ಸಲ್ಲಿಸಿದ್ದೆನೆ.
ಕಷ್ಟದಲ್ಲಿರುವ ಕುಟುಂಬಗಳಿಗೆ ಶಹಾಬಾದ ನಗರದ ಬಾಬಾ ಖಾನ ಹಾಗೂ ಅನೀಲ ಚವ್ಹಾಣ ಇವರ ಮುಖಾಂತರ ಹಣವನ್ನು ಹಂಚಲಾಗಿದೆ. ದಯವಿಟ್ಟು ಸಾರ್ವಜನಿಕರೂ ಮಾಸ್ಕ್ ಕಡ್ಡಾಯವಾಗಿ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ.ಯಾವುದೇ ಕಾರಣಕ್ಕೂ ಹೊರಗಿನಿಂದ ಬಂದ ಗೆಳೆಯರೇ ಇರಲಿ.ಸಂಬಂಧಿಕರೇ ಇರಲಿ.ಅವರನ್ನು ಮಾಸ್ಕ್ ಧರಿಸುವಂತೆ ಹೇಳಿ.ತಾವು ಮಾಸ್ಕ್ ಧರಿಸಿಯೇ ಮಾತನಾಡಿ.ಅವರು ನಮ್ಮ ಬಗ್ಗೆ ಅಂದುಕೊಂಡರೇ ಹೇಗೆ ಎಂಬ ಆಲೋಚನೆ ಮಾಡದೇ ನಿಮ್ಮ ಹಾಗೂ ಅವರ ಆರೋಗ್ಯ ಕಾಪಾಡುವುದು ನಿಮ್ಮ ಕೈಯಲ್ಲಿದೆ ಎಂದು ಹೇಳಿದರು. ಕಳಕಳಿಯ ಮನವಿ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…