ಕಡು ಬಡವರಿಗೆ ವ್ಯಯಕ್ತಿಕ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದ ಕಾಂಗ್ರೆಸ್ ಯುವ ನಾಯಕ ಡಾ. ರವಿ ಚವ್ಹಾಣ

0
70

ಶಹಾಬಾದ: ಕೋವಿಡ ೨ ಎರಡನೆಯ ಅಲೆಯಿಂದ ತತ್ತರಿಸಿ ಹೋದ ಶಹಾಬಾದ ನಗರದ ವಾರ್ಡ ನಂ. ೧೧, ೧೨, ೧೩ ರ ಕಡು ಬಡವರಿಗೆ ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷ ಯುವ ನಾಯಕ ಡಾ. ರವಿ ಚವ್ಹಾಣ ಪ್ರತಿ ಕುಟುಂಬಕ್ಕೆ ವ್ಯಯಕ್ತಿಕ ಹಣದ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಡಾ.ರವಿ ಚವ್ಹಾಣ, ಲಾಕ್‌ಡೌನ್‌ನಿಂದ ಕಡುಬಡವರ ಸ್ಥಿತಿ ಚಿಂತಾಜನಕವಾಗಿದೆ. ಕೈಗಳಿಗೆ ಕೆಲಸವಿಲ್ಲದೇ ಕುಟುಂಬ ನಿರ್ವಹಣೆ ಸವಾಲಾಗಿ ಬಿಟ್ಟಿದೆ.ಇದರಿಂದ ಒಂದೊತ್ತಿನ ಊಟಕ್ಕೂ ಪರಿತಪಿಸುವಂತಹ ವಾತಾವರಣ ನಿರ್ಮಾಣವಾಗಿದೆ.ಆದ್ದರಿಂದ ಸ್ಥಳೀಯ ಮುಖಂಡರಾದ ಕುಮಾರ ಚವ್ಹಾಣ ಅವರು ನನಗೆ ಮಾಹಿತಿ ನೀಡಿದ್ದರಿಂದ ಸುಮಾರು ೬೦ ಕುಟುಂಬದವರಿಗೆ ವ್ಯಯಕ್ತಿಕವಾಗಿ ಹಣದ ರೂಪದಲ್ಲಿ ಸಹಾಯ ಸಲ್ಲಿಸಿದ್ದೆನೆ.

Contact Your\'s Advertisement; 9902492681

ಕಷ್ಟದಲ್ಲಿರುವ  ಕುಟುಂಬಗಳಿಗೆ ಶಹಾಬಾದ ನಗರದ ಬಾಬಾ ಖಾನ ಹಾಗೂ ಅನೀಲ ಚವ್ಹಾಣ ಇವರ ಮುಖಾಂತರ ಹಣವನ್ನು ಹಂಚಲಾಗಿದೆ. ದಯವಿಟ್ಟು ಸಾರ್ವಜನಿಕರೂ ಮಾಸ್ಕ್ ಕಡ್ಡಾಯವಾಗಿ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ.ಯಾವುದೇ ಕಾರಣಕ್ಕೂ ಹೊರಗಿನಿಂದ ಬಂದ ಗೆಳೆಯರೇ ಇರಲಿ.ಸಂಬಂಧಿಕರೇ ಇರಲಿ.ಅವರನ್ನು ಮಾಸ್ಕ್ ಧರಿಸುವಂತೆ ಹೇಳಿ.ತಾವು ಮಾಸ್ಕ್ ಧರಿಸಿಯೇ ಮಾತನಾಡಿ.ಅವರು ನಮ್ಮ ಬಗ್ಗೆ ಅಂದುಕೊಂಡರೇ ಹೇಗೆ ಎಂಬ ಆಲೋಚನೆ ಮಾಡದೇ ನಿಮ್ಮ ಹಾಗೂ ಅವರ ಆರೋಗ್ಯ ಕಾಪಾಡುವುದು ನಿಮ್ಮ ಕೈಯಲ್ಲಿದೆ ಎಂದು ಹೇಳಿದರು. ಕಳಕಳಿಯ ಮನವಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here