ಬಿಸಿ ಬಿಸಿ ಸುದ್ದಿ

ರೆಡ್ ಕ್ರಾಸ್ ದಿಂದ ಕೊರೊನಾ ಮಾಸ್ಕ್, ಸಾಬೂನು ವಿತರಣೆ

ಕಲಬುರಗಿ: ಯಾವ ಜಾತಿ,ಮತ,ಪಂತ ಒಡವ,ಬಲ್ಲಿದ ಎನ್ನದೆ ಹಸಿದು ಬಂದು ಹೊಟ್ಟೆಗೆ ಪ್ರಾಸಾದ ನೀಡಿ ಸಂತೈಸುವ  ಸದಾ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ಮಾಡುತ್ತಿರುವ ಕೈಗಳು ಪ್ರಾಥಿಸುವ ತುಟಿಗಳಿಗಿಂತ ಶ್ರೇಷ್ಠ ಎಂದು ಕರ್ನಾಟಕ ಯುವಜನ ಒಕ್ಕೂಟದ ಜಿಲ್ಲಾ ಅದ್ಯಕ್ಷ ಅನಂತ ಗುಡಿ ಅವರು ಅಭಿಪ್ರಾಯ ಪಟ್ಟರು.

ವಿಶೇಷ ಪ್ರಧೂಷ ಪೂಜಾ ನಿಮಿತ್ತ ನಗರದ ಹೂರ ವಲಯದ ಲಕ್ಷ್ಮೀ ನಾರಾಯಣ ದೇವಸ್ಥಾನ ದಲ್ಲಿ ಕೊರೊನಾ ನಿಮಿತ್ತ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಹಾಜರಾದ ಭಕರಿಗೆ ಪ್ರಸಾದ ವ್ಯವಸ್ಥೆ ಮಾಡಿ ಸಾಮಾಜಿಕ ಅಂತರದಿಂದಿದಲ್ಲೆ ಕೂಡಿಸಿ ಪ್ರಸಾದ ವಿತರಿಸುವ ಗೆಳೆಯರ ಸೇವಾ ಬಳಗದವರಿಗೆಲ್ಲರಿಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಮಾಸ್ಕ ಹಾಗೂ ಸಾಬೂನು ವಿತರಿಸಿದ್ದು ಬಹಳ ಯೋಗ್ಯವಾದ ಕಾರ್ಯ ಎಂದು ಅನಂತ ಗುಡಿಯವರು ರೆಡ್ ಕ್ರಾಸ್ ಸಂಸ್ಥೆ ಅವರಿಗೆ ಅಭಿನಂದಿಸಿದ್ದಾರೆ.

ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅದ್ಯಕ್ಷ ರಾದ  ಅಪ್ಪಾರಾವ ಅಕ್ಕೇೂಣಿ ಉಪಾಧ್ಯಕ್ಷ ಅರುಣಕುಮಾರ ಲಾಹಿಯಾ ಕಾರ್ಯದರ್ಶಿ ರವೀಂದ್ರ ಶಾಹಾಬಾದಿ ಅವರ ಆದೇಶ ಮೆರೆಗೆ ಜಿಲ್ಲಾ ಸಮಿತಿಯ ಸದಸ್ಯರಾದ ಶಿವರಾಜ ಎಸ್ ಅಂಡಗಿ ಅವರ ನೇತ್ರತ್ವದಲ್ಲಿ ಸದರಿ ಅಭಿಯಾನ ಹಮ್ಮಿಕೊಳ್ಳಲಾಯಿತ್ತು.

ಮಾಹಾಮಾರಿ ಕೂರೊನಾ ವೈರಸ್ ಹರಡದಂತೆ  ಮುಂಜಾಗ್ರತೆಯ ವಹಿಸಲು ಜನಸಾಮಾನ್ಯರಿಗೆ ಜಾಗ್ರತಿ ಮೂಡಿಸುವ ಕುರಿತು ಕರ ಪತ್ರ ಹಂಚ್ಚುವ  ಮ‌ೂಲಕ ಮಾಸ್ಕ ಹಾಗೂ ಸಾಬೂನು ವಿತರಿಸಲಾಯಿತು. ಕರ್ನಾಟಕ ಯುವಜನ ಒಕ್ಕೂಟ ರಾಜ್ಯ ಸಂಚಾಲಕರಾದ  ವಿನೇೂದಕುಮಾರ ಜೇನೆವೆರ ಹಾಗೂ ಜಿಲ್ಲಾ ಅದ್ಯಕ್ಷ ಅನಂತ ಗುಡಿ ಅವರ ಸಹಕಾರದೊ೦ದಿಗೆ ಅಭಿಯಾನ ಜರುಗಿತು.

ಗೆಳೆಯರ ಸೇವಾ ಬಳಗದ ಸದಸ್ಯರಾದ ವಿಜಯೇಂದ್ರ ದೇಶಪಾಂಡೆ, ಶಾರದುಲ್ ಗಾರಂಪಳ್ಲಿ,ಅಜಯ ಕುಲಕರ್ಣಿ, ದತ್ತು ಲಂಡನ್‌, ಗುಂಡುರಾವ ಕುಸನೂರ,ಅಕ್ಷಯ್ ಕುಲಕರ್ಣಿ, ಅಶ್ವತ್ ಮಾಡ್ಯಾಳಕರ, ಶ್ರಯಾ ಕುಲಕರ್ಣಿ, ಸಂತೊಷ ಆಳಂದಕರ್,ರಸವೇಂದ್ರ ಕೇೂಳ್ಳಿ,ಹರಿಪ್ರಾಣ ಎಸ್ ಉಪಸ್ಥಿತರಿದ್ದರು.

emedialine

Recent Posts

ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಜಯನಗರ…

2 hours ago

ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಸಮೀಕ್ಷೆ : ಡಾ. ಶಾಲಿನಿ ರಜನೀಶ್

ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು…

4 hours ago

ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ: ಸಿಎಂ ಸಿದ್ದು

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ…

4 hours ago

ಕನ್ನಡದ ನೆಲದಲ್ಲಿ ಕನ್ನಡಿಗರ ಮಕ್ಕಳೇ ಉದ್ಯೋಗ ಮಿಸಲಾತಿ ಕೇಳುವಂತಹ ಪರಸ್ಥಿತಿ ಆಘಾತಕಾರಿ

ಕಲಬುರಗಿ: ಡಾ.ಸರೋಜನಿ ಮಹಿಷಿ ವರದಿ ಅನುಷ್ಠಾನಕ್ಕೆ ನಡೆದ, ನಡೆಯುತ್ತಿರುವ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮಹಿಷಿ ವರದಿಯ ಹೆಸರು ಹೇಳಿ ಆಳಿದ…

4 hours ago

ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹೇಶ್ ರೆಡ್ಡಿ ನಾಮಪತ್ರ ಸಲ್ಲಿಕೆ

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸದಸ್ಯ ಸಮಿತಿಗೆ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ ಹಾಗೂ ಸಮಾಜದ…

4 hours ago

ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲ: ರಾಜ್ಯ ಸರಕಾರದ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗೃಹ

ಕಲಬುರಗಿ: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನೀತರಾಜ…

4 hours ago