ಕಲಬುರಗಿ: ಲಾಕ್ ಡೌನ್ ಅಗತ್ಯ ಸೇವೆಗಳಲ್ಲಿ ಒಂದಾದ ಖಾಸಗಿ ಅಂತರ್ಜಾಲ ಸೇವಾ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವಿವಿಧ ಇಲಾಖೆಗಳ ತರಬೇತಿಗಳಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ.ಪೊಲೀಸ್ ಪೇದೆ ಭರ್ತಿ, ಬ್ಯಾಂಕ್ ಉದ್ಯೋಗಾವಕಾಶ ಸೇರಿದಂತೆ ಜಾತಿ ಪ್ರಮಾಣಪತ್ರ,ಮರಣ ಪ್ರಮಾಣ ಪತ್ರ, ವಿದ್ಯಾರ್ಥಿ ವೇತನ ಹೀಗೆ ಎಲ್ಲವೂ ಅಂತರ್ಜಾಲವನ್ನೇ ಅವಲಂಬಿಸಿದೆ.
ಇನ್ನು ಸರಕಾರ ಘೋಷಿಸಿದ ಪರಿಹಾರದ ಹಣ ಪಡೆಯಲು ಫಲಾನುಭವಿಗಳು ಇಂಟರ್ನೆಟ್ ನಲ್ಲಿ ಅರ್ಜಿ ಸಲ್ಲಿಸಬೇಕು,ಆದರೆ ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ.ಅಗತ್ಯ ಖರೀದಿಗೆ ನಿಗದಿತ ಸಮಯ ನೀಡಲಾಗಿದೆ.ನೀಡಲಾದ ಸಮಯದಲ್ಲಿ ಇಂಟರ್ನೆಟ್ ಸೇವೆ ನೀಡಲು ಸಾಕಾಗುತ್ತಿಲ್ಲ.ದಿನನಿತ್ಯ ವಿದ್ಯಾರ್ಥಿಗಳು, ನೌಕರರು ಅಂತರ್ಜಾಲಕ್ಕಾಗಿ ಪರದಾಡುವಂತಾಗಿದೆ.ಕೊರೊನಾ ಸೋಂಕಿತರ ಕೊವಿಡ ಪರೀಕ್ಷೆಯ ವರದಿ ಕೂಡ ಇಂಟರ್ನೆಟ್ ನಲ್ಲಿ ನಮೂದಾಗಿರುತ್ತದೆ.
ಅದರ ಪ್ರಿಂಟ್ ಕಾಪಿ ಪಡೆಯ ಬೇಕಾದರೆ ಖಾಸಗಿ ಅಂತರ್ಜಾಲ ಮಳಿಗೆಗೆ ತೆರಳಬೇಕು.ಮಳಿಗೆಗಳು ಬಂದ್ ಆಗಿರುವುದರಿಂದ ಪರದಾಡುವಂತಾಗಿದೆ. ಈಗಂತೂ ಲಾಕ್ ಡೌನ್ ಇರುವುದರಿಂದ ಸರಕಾರ ಮನೆಗಳ,ನೀರಿನ ಕರ, ವಿದ್ಯುತ್ ಬಿಲ್ ಹಾಗೂ ಇನ್ನಿತರ ತೆರಿಗೆಗಳನ್ನು ಆನ್ ಲೈನ್ ನಲ್ಲಿ ಪಾವತಿಸಲು ಸೂಚಿಸಿದೆ.ಆದರೆ ನಿಗದಿತ ಸಮಯದಲ್ಲಿ ಇದು ಸಾಧ್ಯವಿಲ್ಲ.ಆದ್ದರಿಂದ ಜಿಲ್ಲಾಧಿಕಾರಿಗಳು ಅಂತರ್ಜಾಲ ಮಳಿಗೆಗಳನ್ನು ದಿನದಲ್ಲಿ ಕನಿಷ್ಠ 10 ತಾಸು ತೆರೆಯಲು ಅನುಮತಿ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…