ಕಲಬುರಗಿ:ರಾಜ್ಯದಲ್ಲಿ ಹಿಂದಿನ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರಹೆಚ್ಚಳ ಮಾಡಿರುವ ರಾಜ್ಯ ಸರಕಾರದ ತೀರ್ಮಾನವನ್ನು ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಉಗ್ರವಾಗಿ ಖಂಡಿಸಿದ್ದಾರೆ.
ಪ್ರತಿ ಯೂನಿಟ್ಗೆ 30 ಪೈಸೆ ದರ ಹೆಚ್ಚಳವಾಗಿದೆ, ಜೊತೆಗೇ ಸ್ಥಾರವಗಳ ಠೇವಣಿಯೂ ಹೆಚ್ಚಿಸಲಾಗಿದೆ. ಮೊದಲೇ ಕೊರೋನಾದಿಂದ ಕಂಗಾಲಾಗಿರುವ ಜನತೆಗೆ ಇದು ಶಾಕ್ ನೀಡಿದಂತಾಗಿದೆ. ತಕ್ಷಣ ದರ ಹೆಚ್ಚಳ ಕೈಬಿಡಬೇಕು. ಕೊರೋನಾ ಲಾಕ್ಡೌನ್ನಿಂದ ಆರ್ಥಿಕ ತೊಂದರೆ.ಲ್ಲಿರುವ ಜನತೆಗೆ ನೆಮ್ಮದಿ ಬೇಕಿದೆ. ಈಗಾಗಲೇ ಪೆಟ್ರೋಲ್, ಅಡುಗೆ ಅನೀಲ ಬೆಲೆ ಏರಿಕೆ ಬಿಸಿಯಲ್ಲೇ ನೊಂದಿರುವ ಜನತೆಗೆ ಕರೆಂಟ್ ಕೂಡಾ ಸಾಕ್ ನೀಡಿದರೆ ಅವರು ಬಗದುಕುವುದಾದರೂ ಹೇಗೆ ಎಂದು ಭೂಸನೂರ್ ಕರೆಂಟ್ ದರ ಹೆಚ್ಚಳದ ನಿರ್ಧಾರವನ್ನು ಉಗ್ರವಾಗಿ ಖಂಡಿಸಿದ್ದಾರೆ.
ದರ ಹೆಚ್ಚಳ ಕೈಬಿಡಬೇಕು, ಥ್ರೀ ಫೇಸ್ ಕೆರಂಟ್ ಕೊಡುವಲ್ಲಿ ಸೇವಾ ಗುಣಮಟ್ಟ ಹೆಚ್ಚಿಸಬೇಕು, ವಿದ್ಯುತ್ ಕಂಪನಿಗಳು ಗುಣಮಟ್ಟದ ಕರೆಂಟ್ ನೀಡಿ ರೈತರ ನೆರವಿಗೆ ನಿಲ್ಲಬೇಕು. ರಾಜ್ಯ ಸರಕಾರ ರೈತರಿಗೆ ನೆರವಿನ ಯೋಜನೆ ಘೋಷಿಸಿ ಕರೆಂಟ್ ಭಾರ ಇಳಿಸಬೇಕು. ಇದನ್ನು ಬಿಟ್ಟು ದರ ಹೆಚ್ಚಳಕ್ಕೆ ಮುಂದಾದಲ್ಲಿ ಕೊರೋನಾದಿಂದಲೇ ಕಂಗೆಟ್ಟಿರುವ ನಾಡಿನ ರೈತರು ದರ ಹೆಚ್ಚಳ, ಬೆಲೆ ಎರಿಕೆಯಲ್ಲೇ ಬೆಂದು ಆತ್ಮಹತ್ಯೆ ದಾರಿ ಹಿಡುಯವ ದಿನಗಳು ದೂರವೇನಿಲ್ಲವೆಂದು ಭೂಸನೂರ್ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…