ಕಲಬುರಗಿ: ಕೇತು ಸೂರ್ಯ ಗ್ರಹಣ ಎಂಬುದು ಸಹಜ ನೈಸರ್ಗಿಕ ಪ್ರಕ್ರೀಯೆ ಇದನ್ನು ವೈಜ್ಞಾನಿಕವಾಗಿ ಸ್ವಿಕರಿಸಬೇಕೇ ಹೊರತು ದಾರ್ಮಿಕ ಭಾವನೆಯಿಂದ ನೋಡಬಾರದೆಂದು ಜಾಗೃತಿ ಮೂಡಿಸಲು ಪ್ರಗತಿಪರ ವಿಚಾರ ಹೊಂದಿರುವವರು ಇಂದು ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ವಿಶ್ವ ಗುರು ಬಸವಣ್ಣನವರ ಪುತ್ತಳಿಯ ಆವರಣದಲ್ಲಿ ಗ್ರಹಣ ಸಂದರ್ಭದಲ್ಲಿ ಉಪಹಾರವನ್ನು ಸೇವಿಸಿ ಜನರಲ್ಲಿರುವ ಗ್ರಹಣ ಎಂಬ ಭಯವನ್ನು ಹೋಗಲಾಡಿಸಲು ಕಾರ್ಯಕ್ರವನ್ನು ಹಮ್ಮಿಕೊಂಡಿದ್ದರು.
ಪ್ರಗತಿ ಪರ ಚಿಂತಕರು ಮಾಜಿ ಶಾಸಕರು ಆದ ಬಿ ಎರ್ ಪಾಟೀಲ ಅವರು ಮಾತನಾಡಿ ಇಂದಿನ 21 ನೇ ಶತಮಾನದಲ್ಲು ನಮ್ಮ ವಿಜ್ಞಾನಿಗಳೇ ಮೌಡ್ಯದ ಬೆನ್ನು ಬಿದ್ದಿರುವುದು ತುಂಬಾ ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ನಾವೆಲ್ಲರೂ ಕೂಡಿ ಗ್ರಹಣದ ಬಗ್ಗೆ ಜನರಲ್ಲಿರುವ ಭಯ ಮೂಡ ನಂಬಿಕೆಗಳನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಮತ್ತು ಮೌಡ್ಯ ಮುಕ್ತ ಜೀವನ ನಮ್ಮದಾಗಿಸಿಕೊಳ್ಳೋಣ ಎಂದು ಮಾರ್ಮಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಬಸವಸೇವಾ ಪ್ರತಿಷ್ಟಾನದ ಅದ್ಯಕ್ಷರಾದ ಶರಣ ರಾಜಶೇಖರ ಯಂಕಂಚಿ, ಶರಣಬಸಪ್ಪ ವಾಗೆ ಅದ್ಯಕ್ಷರು ಪಿ ಎಲ್ ಡಿ ಬ್ಯಾಂಕ್ ಆಳಂದ, ಗಣೇಶ ಪಾಟೀಲ, ಸತೀಶ ಕಡಗಂಚಿ, ಲಿಂಗು ಜಾನೆ, ನಾಗೇಂದ್ರ ಕೊರೆ . ಹಣಮಂತರಾಯ ಪಾಟೀಲ ಕುಸುನೂರ, ಶಿವಶರಣ ದೇಗಾಂವ, ಸತೀಶ ಎಸ್ ಸಜ್ಜನಶೆಟ್ಟಿ. ಆರ್ ಜಿ ಶಟಗಾರ. ರವಿಕುಮಾರ ಹರಗಿ. ಅಶೋಕ ಘೂಳಿ. ಶಿವಾನಂದ ಡೋಮನಾಳ. ಉಪಸ್ಥಿತರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…