ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮದಲ್ಲಿ ವಿದ್ಯಾರ್ಥಿಯೊಬ್ಬ ಪಾರ್ಶ್ವವಾಯುಗೆ ತುತ್ತಾಗಿ ಅನೇಕ ದಿನಗಳಿಂದ ನರಳಾಡುತ್ತಿದ್ದು,ಶನಿವಾರ ಯುವಕನ ಕುಟುಂಬ ಭೇಟಿ ನೀಡಿ ರಾಜುಗೌಡ ಸೇವಾ ಸಮಿತಿ ಮುಖಂಡರು ಭೇಟಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಶೆಳ್ಳಗಿ ಗ್ರಾಮದ ನಾಗರಾಜ ಭೀಮಯ್ಯ ಈಳಿಗೇರ ಎಂಬ ವಿದ್ಯಾರ್ಥಿ ಪಾರ್ಶ್ವವಾಯುನಿಂದ ಕಳೆದ ಅನೇಕ ದಿನಗಳಿಂದ ನರಳುತ್ತಿದ್ದ.ಬಡ ಕುಟುಂಬದ ಪೋಷಕರು ಯುವಕನಿಗೆ ಸಾಧ್ಯವಾದಷ್ಟು ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವು ಖಾಲಿಯಾಗಿದ್ದರಿಂದ ಮಗನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಚಿಂತೆಗೀಡಾಗಿದ್ದಾರೆ.ವಿದ್ಯಾರ್ಥಿಯ ಈ ಕತೆಯನ್ನು ಕೇಳಿದ ರಾಜುಗೌಡ ಸೇವಾ ಸಮಿತಿಯ ಮುಖಂಡರು ಶನಿವಾರ ಮದ್ಹ್ಯಾನ ಶೆಳ್ಳಗಿ ಗ್ರಾಮದಲ್ಲಿನ ನಾಗರಾಜ ಕುಟುಂಬಕ್ಕೆ ಭೇಟಿ ನೀಡಿ ವಿದ್ಯಾರ್ಥಿಯ ಸ್ಥಿತಿಯನ್ನು ಕಂಡು ಶಾಸಕ ರಾಜುಗೌಡ ಅವರ ಸಲಹೆಯಂತೆ ೨೫ ಸಾವಿರ ರೂಪಾಯಿಗಳ ನೆರವು ನೀಡಿ ಕಾರವಾರಕ್ಕೆ ಚಿಕಿತ್ಸೆಗಾಗಿ ಹೋಗಲು ಅನುಕೂಲ ಮಾಡಿಕೊಟ್ಟಿದ್ದಾರೆ.ಅಲ್ಲದೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರದ ನಿಧಿಯಿಂದ ಆಸ್ಪತ್ರೆಯ ಚಿಕಿತ್ಸೆಯ ಖರ್ಚು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಪಾಟೀಲ್ ಮನೋಹರ ಹೂಗಾರ ಮಲಕನಗೌಡ ಪೊಲೀಸ್ ಪಾಟೀಲ್ ಅಂಬ್ರೇಶಗೌಡ ನಾಡಗೌಡ ಅಶೋಕ ಗುತ್ತೇದಾರ ಹುಲಗಪ್ಪ ತಳವಾರ ಪರಶುರಾಮ ನಾಟೇಕಾರ್ ತಿಗಳಪ್ಪ ಕವಡಿಮಟ್ಟಿ ಇತರರಿದ್ದರು.
ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…
ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…