ಪಾರ್ಶ್ವವಾಯುನಿಂದ ನರಳುತ್ತಿದ್ದ ಶೆಳ್ಳಗಿ ವಿದ್ಯಾರ್ಥಿಗೆ ರಾಜುಗೌಡ ಸೇವಾ ಸಮಿತಿ ನೆರವು

0
21

ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮದಲ್ಲಿ ವಿದ್ಯಾರ್ಥಿಯೊಬ್ಬ ಪಾರ್ಶ್ವವಾಯುಗೆ ತುತ್ತಾಗಿ ಅನೇಕ ದಿನಗಳಿಂದ ನರಳಾಡುತ್ತಿದ್ದು,ಶನಿವಾರ ಯುವಕನ ಕುಟುಂಬ ಭೇಟಿ ನೀಡಿ ರಾಜುಗೌಡ ಸೇವಾ ಸಮಿತಿ ಮುಖಂಡರು ಭೇಟಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಶೆಳ್ಳಗಿ ಗ್ರಾಮದ ನಾಗರಾಜ ಭೀಮಯ್ಯ ಈಳಿಗೇರ ಎಂಬ ವಿದ್ಯಾರ್ಥಿ ಪಾರ್ಶ್ವವಾಯುನಿಂದ ಕಳೆದ ಅನೇಕ ದಿನಗಳಿಂದ ನರಳುತ್ತಿದ್ದ.ಬಡ ಕುಟುಂಬದ ಪೋಷಕರು ಯುವಕನಿಗೆ ಸಾಧ್ಯವಾದಷ್ಟು ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವು ಖಾಲಿಯಾಗಿದ್ದರಿಂದ ಮಗನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಚಿಂತೆಗೀಡಾಗಿದ್ದಾರೆ.ವಿದ್ಯಾರ್ಥಿಯ ಈ ಕತೆಯನ್ನು ಕೇಳಿದ ರಾಜುಗೌಡ ಸೇವಾ ಸಮಿತಿಯ ಮುಖಂಡರು ಶನಿವಾರ ಮದ್ಹ್ಯಾನ ಶೆಳ್ಳಗಿ ಗ್ರಾಮದಲ್ಲಿನ ನಾಗರಾಜ ಕುಟುಂಬಕ್ಕೆ ಭೇಟಿ ನೀಡಿ ವಿದ್ಯಾರ್ಥಿಯ ಸ್ಥಿತಿಯನ್ನು ಕಂಡು ಶಾಸಕ ರಾಜುಗೌಡ ಅವರ ಸಲಹೆಯಂತೆ ೨೫ ಸಾವಿರ ರೂಪಾಯಿಗಳ ನೆರವು ನೀಡಿ ಕಾರವಾರಕ್ಕೆ ಚಿಕಿತ್ಸೆಗಾಗಿ ಹೋಗಲು ಅನುಕೂಲ ಮಾಡಿಕೊಟ್ಟಿದ್ದಾರೆ.ಅಲ್ಲದೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರದ ನಿಧಿಯಿಂದ ಆಸ್ಪತ್ರೆಯ ಚಿಕಿತ್ಸೆಯ ಖರ್ಚು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಪಾಟೀಲ್ ಮನೋಹರ ಹೂಗಾರ ಮಲಕನಗೌಡ ಪೊಲೀಸ್ ಪಾಟೀಲ್ ಅಂಬ್ರೇಶಗೌಡ ನಾಡಗೌಡ ಅಶೋಕ ಗುತ್ತೇದಾರ ಹುಲಗಪ್ಪ ತಳವಾರ ಪರಶುರಾಮ ನಾಟೇಕಾರ್ ತಿಗಳಪ್ಪ ಕವಡಿಮಟ್ಟಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here