ಬೆಂಗಳೂರು: ಭಾರತದಲ್ಲಿ ಅಗ್ರಮಟ್ಟದ ಮಾರಾಟ ಹೊಂದಿರುವ ಸ್ಪ್ರಿಂಗ್ ಮ್ಯಾಟ್ರೆಸ್ಗಳ ತಯಾರಕರಾದ ಪೆಪ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಈಗ ನಿದ್ರೆಯ ಆಕ್ಸಸರಿಗಳನ್ನು ಒಳಗೊಂಡಿರುವ `ಪೆಪ್ಸ್ ಡ್ರೀಮ್ ಡೆಕಾರ್’ ಎಂಬ ಬ್ರಾಂಡ್ ಅನ್ನು ಬಿಡುಗಡೆ ಮಾಡುತ್ತಿದೆ.
ನೂತನ ಶ್ರೇಣಿಯಲ್ಲಿ ಅತ್ಯಂತ ಎಚ್ಚರಿಕೆಯೊಂದಿಗೆ ರೂಪಿಸಲಾದ ಉನ್ನತಮಟ್ಟದ ಬೆಡ್ಶೇಟ್ಗಳು, ಪಿಲ್ಲೊಗಳು, ಮ್ಯಾಟ್ರೆಸ್ ಪ್ರೊಟೆಕ್ಟರ್ಗಳು, ಕುಷನ್ಗಳು, ಬ್ಲಾಂಕೆಟ್ಗಳು ಮತ್ತು ಟ್ರಾವೆಲ್ ಆಕ್ಸಸರಿಗಳು ಸೇರಿರುತ್ತವೆ. ಇವುಗಳನ್ನು ಅತ್ಯಂತ ಅನುಕೂಲಕರವಾಗಿರುವಂತೆ ಮತ್ತು ಸೂಕ್ತ ಬೆಂಬಲ ನೀಡುವಂತೆ ಹಾಗೂ ವಿಶೇಷ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಪೆಪ್ಸ್ ಡ್ರೀಮ್ ಡೆಕಾರ್ನ ಬೆಡ್ ಲಿನೆನ್ ಶ್ರೇಣಿ ಆಕರ್ಷಕ ಕಣ್ಸೆಳೆಯುವ ಬಣ್ಣಗಳಲ್ಲಿ ಹಾಗೂ ಬೆರಗುಗೊಳಿಸುವ ವಿನ್ಯಾಸಗಳಲ್ಲಿ ಬರುತ್ತಿದೆ. ಹೂವುಗಳ ಚಿತ್ರಗಳಿಂದ ಹಿಡಿದು ಜ್ಯಾಮಿತಿಯ ವಿನ್ಯಾಸಗಳನ್ನು ಇದು ಒಳಗೊಂಡಿದೆ.
ಯಾವುದೇ ಸ್ಥಳದ ನೋಟವನ್ನು ಇವು ತಕ್ಷಣ ಉತ್ತಮ ಪಡಿಸುತ್ತವೆ. ಜೊತೆಗೆ ಬಳಕೆದಾರರಿಗೆ ಮಕಮಲ್ಲಿನ ಮೃದುವಾದ ಹತ್ತಿಯ ವಿಲಾಸಿ ಭಾವನೆಯನ್ನು ಆನಂದಿಸಲು ಅವಕಾಶ ಮಾಡಿಕೊಡುತ್ತವೆ. ಉತ್ಪನ್ನಗಳ ಶ್ರೇಣಿಯಲ್ಲಿ ಯಾವುದೇ ರೀತಿಯ ತೊಂದರೆಗೆ ಅವಕಾಶ ಕೊಡದೆ ಅನುಕೂಲಕರವಾದಂತಹ ನೋ-ಫಸ್ ಉತ್ಪನ್ನಗಳಾದ, ವಾಟರ್ಪ್ರೂಫ್ ಮ್ಯಾಟ್ರೆಸ್ ಪ್ರೊಟೆಕ್ಟರ್, ಫಿಟ್ಟೆಡ್ ಶೀಟ್ಸ್, ಆಂಟಿ-ಸ್ಕಿಡ್ ಬೊಲ್ಸ್ಟರ್ ಮತ್ತು ಆ್ಯಂಟಿ-ಪಿಲ್ಲಿಂಗ್ ಫ್ಲೀಸ್ ಬ್ಲಾಂಕೆಟ್ ಮುಂತಾದವುಗಳು ಸೇರಿದ್ದು, ನಿಮ್ಮ ಹಾಸಿಗೆ ಸಂಪೂರ್ಣ ಮತ್ತು ಶುದ್ಧವಾದ ವಿಶ್ರಾಂತಿ ನೀಡುವ ಮೂಲವಾಗಿರುವ ಖಾತ್ರಿ ಮಾಡಿಕೊಳ್ಳುತ್ತವೆ.
`ಪೆಪ್ಸ್ ಡ್ರೀಮ್ ಡೆಕಾರ್’ಗೆ ಪೆಪ್ಸ್ ಮ್ಯಾಟ್ರೆಸ್ಗಳಲ್ಲಿ ಬಳಸಲಾಗುವ ನವೀನ, ಉನ್ನತ ನಾಜೂಕಿನ ತಂತ್ರಜ್ಞಾನ ಕೂಡ ಸೇರಿಸಲಾಗಿದೆ. ನೂತನ ಶ್ರೇಣಿಯ ದಿಂಬುಗಳನ್ನು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಇವುಗಳು ಗರಿಷ್ಠ ಅನುಕೂಲ ಮತ್ತು ಬೆಂಬಲಪೂರೈಸುತ್ತವೆ.
ಈ ನೂತನ ಉತ್ಪನ್ನ ಶ್ರೇಣಿಯ ಮುಖ್ಯಾಂಶ ಎಂದರೆ ಗ್ರಿಪ್ಸ್ಟೆರ್-ಭಾರತದ ಪ್ರಥಮ ಆ್ಯಂಟಿ-ಸ್ಕಿಡ್ ಬಾಲ್ಸ್ಟರ್ ಆಗಿದೆ. ಎರ್ಗಾನಮಿಕಲಿ ವಿನ್ಯಾಸಗೊಳಿಸಲಾಗಿರುವ ಈ ಉತ್ಪನ್ನ ನಿಮ್ಮ ಮನೆಯಿಂದ ಕೆಲಸ ಮಾಡುವ ಅನುಭವವನ್ನು ಉತ್ತಮಗೊಳಿಸುತ್ತದೆ. ನಿಮ್ಮ ಹಾಸಿಗೆಯ ಮೇಲೆ ಅನುಕೂಲಕರ ರೀತಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆಯಲ್ಲದೆ, ಬೆನ್ನು ಮತ್ತು ಭುಜದ ನೋವುಗಳ ಹಿನ್ನೆಡೆ ಇಲ್ಲದಂತೆ ಮಾಡುತ್ತದೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…