ಬಿಸಿ ಬಿಸಿ ಸುದ್ದಿ

ಹುತಾತ್ಮ ಯೋಧ ಕಾಶಿರಾಯಗೆ ಸುರಪುರ ನಾಗರಿಕರ ಶ್ರದ್ಧಾಂಜಲಿ

ಸುರಪುರ: ಕಳೆದ ಶುಕ್ರವಾರ ಬೆಳಿಗ್ಗೆ ಫುಲ್ವಾಮಾದಲ್ಲಿ ನಡೆದ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿಯವರಿಗೆ ಸುರಪುರದಲ್ಲಿ ನಾಗರಿಕರಿಂದ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಉಗ್ರವಾದ ಎನ್ನುವುದು ಜಗತ್ತಿಗೆ ಅಂಟಿದ ಪಿಡುಗಾಗಿದೆ,ಅದನ್ನು ಸರ್ವನಾಶ ಮಾಡಲು ಭಾರತದಿಂದ ಸಾಧ್ಯವಿದೆ.ಇದನ್ನು ಅರಿತುಕೊಂಡ ಉಗ್ರಗಾಮಿಗಳು ಸದಾಕಾಲ ಭಾರತದಲ್ಲಿ ದಾಳಿಗೆ ವಂಚಿಸುತ್ತಿವೆ.

ಆದರೆ ಭಾರತದ ವೀರಯೋಧರು ಉಗ್ರಗಾಮಿಗಳನ್ನು ನಿರ್ನಾಮ ಮಾಡುತ್ತಾರೆ ಎಂಬುದನ್ನು ತಿಳಿದು ಮೋಸದಿಂದ ದಾಳಿಗೆ ಬರುತ್ತಿವೆ.ಅದರಂತೆ ಶುಕ್ರವಾರ ಫುಲ್ವಾಮಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಅನೇಕ ಜನ ಉಗ್ರರನ್ನು ನಾಶಮಾಡಿದ ನಮ್ಮ ಭಾರತೀಯ ವೀರ ಸೇನಾನಿಗಳು,ಅದರಲ್ಲಿ ನಮ್ಮ ರಾಜ್ಯದ ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವೀರಯೋಧ ಕಾಶೀರಾಯ ಬೊಮ್ಮನಹಳ್ಳಿಯವರು ತಮ್ಮ 35ನೇ ವಯಸ್ಸಿನಲ್ಲಿಯೆ ನಾವು ಅವರನ್ನು ಕಳೆದುಕೊಂಡಿದ್ದೇವೆ.ಇದು ಭಾರತೀಯರಾದ ನಮ್ಮೆಲ್ಲರಿಗೂ ನೋವಿನ ಸಂಗತಿಯಾಗಿದೆ.ಈ ಉಗ್ರಗಾಮಿಗಳೆಂಬ ನರ ರಾಕ್ಷಸರನ್ನು ಸರ್ವನಾಶ ಮಾಡಲು ನಾವೆಲ್ಲರು ನಮ್ಮ ಸೇನೆಯ ಬೆಂಬಲಕ್ಕೆ ನಿಲ್ಲೋಣ,ಅಲ್ಲದೆ ನಮ್ಮ ಯುವ ಪೀಳಿಗೆಯು ಸೇನೆಗೆ ಸೇರಲು ಮುಂದಾಗಬೇಕು ಎಂದರು.

ಅಲ್ಲದೆ ಈಗಾಗಲೇ ನಮ್ಮ ತಾಲೂಕಿನ ಚಂದ್ಲಾಪುರ ದೇವರಗೋನಾಲ ಲಕ್ಷ್ಮೀಪುರ ಹೀಗೆ ಅನೇಕ ಗ್ರಾಮಗಳ ಯೋಧರು ಸೇನೆಯಲ್ಲಿದ್ದು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಹಗಲಿರಳು ಭಾರತ ಮಾತೆಯ ಸೇವೆಯಲ್ಲಿ ತೊಡಗಿರುವ ಎಲ್ಲಾ ಯೋಧರಿಗೆ ನಾವು ಸದಾಕಾಲ ಋಣಿಯಾಗಿರಬೇಕು ಮತ್ತು ಸದಾಕಾಲ ಅವರ ಬೆಂಬಲಕ್ಕಿರಬೇಕೆಂದರು.

ಸಭೆಯ ಆರಂಭದಲ್ಲಿ ಹುತಾತ್ಮ ಯೋಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ನಂತರ ಮೇಣದ ಬತ್ತಿಯನ್ನು ಬೆಳಗಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಗಂಗಾಧರ ನಾಯಕ ಅರಳಳ್ಳಿ ಮಲ್ಲಿಕಾರ್ಜುನ ಬಾದ್ಯಾಪುರ ಪರಶುರಾಮ ನಾಆಟೇಕಾರ್ ಸಚಿನ ಕುಮಾರ ನಾಯಕ ರಮೇಶ ಕುಲಕರ್ಣಿ ಪ್ರವೀಣ ವಿಭೂತೆ ಆನಂದ ಪರ್ಥಾನೆ ದೇವಪ್ಪ ಮೇದಾ ಮಲ್ಲು ಒಟ್ಟಿ ಕೃಷ್ಣಾ ಕಾಥಾ ಮಂಜುನಾಥ ಮಠಪತಿ ಅನೀಲ್ ಪರಶುರಾಮ ಹುಲಕಲ್,ಪೊಲೀಸ್ ಪೇದೆಗಳಾದ ಬಸವರಾಜ ಮುದಗಲ್,ದಯಾನಂದ ಜಮಾದಾರ ಹೊನ್ನಪ್ಪ ಹೊನ್ನಾರಿ ಮಾನಯ್ಯ ಸೇರಿದಂತೆ ಅನೇಕ ಜನ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಹಾಗು ರಾಜುಗೌಡ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳಿದ್ದರು.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

49 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

57 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago