ಹೈದರಾಬಾದ್ ಕರ್ನಾಟಕ

ಮಳೆಗಾಗಿ ಪ್ರಾರ್ಥಿಸಿ ಸಾತನೂರನಲ್ಲಿ ಹಳ್ಳದ ಜಾತ್ರೆ

ಚಿತ್ತಾಪುರ:ತಾಲೂಕಿನ ಸಾತನೂರ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ರೈತರು ಬಸವಣ್ಣನ ಮೂರ್ತಿಯ ಮುಖ ತಿರುಗಿಸಿ ಭಕ್ತಿಯಿಂದ ಪೂಜೆ ಮಾಡಿ,ಹಳ್ಳದ ಜಾತ್ರೆ ನಡೆಸಿದರು.

ಗ್ರಾಮದ ಹೊರವಲಯದಲ್ಲಿರುವ ಚೌಡಮ್ಮ ಬಾವಿ ಹತ್ತಿರ ಇರುವ ಬಸವಣ್ಣನ ಮೂರ್ತಿಯನ್ನು ಊರಿನ ರೈತರು ಪೂರ್ವದಿಂದ ಪಶ್ಚಿಮಕ್ಕೆ ತಿರುಗಿಸಿ ಪೂಜೆ ಸಲ್ಲಿಸಿ ನಂತರ ಐದು ದಿವಸದ ನಂತರ ಮತ್ತೆ ಪೂರ್ವಕ್ಕೆ ತಿರುಗಿಸಿ ಮಾಲಿ ಗೌಡರಿಂದ ಪೂಜೆ ಸಲ್ಲಿಸಿ ಮಳೆ ಬರಲಿ ಎಂದು ಗ್ರಾಮದ ರೈತರು ಪ್ರಾರ್ಥನೆ ಸಲ್ಲಿಸಿದರು.ಪೂಜೆ ಸಲ್ಲಿಸಿದ ನಂತರ ಮಳೆ ಬಂದಿದು ಪವಾಡವೇ ಅನ್ನಬಹುದು. ಬಿತ್ತನೆ ಮಾಡಿದ ಬೆಳೆ ಒಣಗುತ್ತಿದರಿಂದ ಮಳೆ ಅವಶ್ಯಕವಾಗಿತ್ತು.ಮೂರ್ತಿ ತಿರುಗಿಸಿ ಪೂಜೆ ಸಲ್ಲಿಸಿದ ನಂತರ ಮಳೆ ಸುರಿದಿದ್ದು,ರೈತರ ಮುಖದಲ್ಲಿ ಮಂದಹಾಸ ಮೂಡಿಸಿತು.ಮಳೆ ಬಂದಿದ್ದು ರೈತರಿಗೆ ಭಾರಿ ಅನುಕೂಲವಾಗಿದೆ ಈ ಮಳೆಯನ್ನು ಬಂಗಾರದ ಮಳೆ ಎಂದು ರೈತ ಶರಣು ಬೊಮನಹಳ್ಳಿ ಸಂತೋಷ ವ್ಯಕ್ತಪಡಿಸಿದವರು.

ಹಲಗೆ,ಡೊಳ್ಳು,ಬಾಜಿಯೊಂದಿಗೆ ಗ್ರಾಮದಿಂದ ಬಸವಣ್ಣ ಮೂರ್ತಿವರಿಗೆ ನೈವೇದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.ಗ್ರಾಮಸ್ಥರೆಲ್ಲರು ಬಸವಣ್ಣನಿಗೆ ನೈವೇದ್ಯ ಸಲ್ಲಿಸಿ,ಸ್ವಾಮಿಗಳಿಗೆ ಹೊರಣಗಡಬು,ತುಪ್ಪ ಊಟ ಮಾಡಿಸಿದರು.ಮಾಲದಿ,ಕಡಬು,ಬಿಳಿ ಜೋಳದ ರೊಟ್ಟಿ,ಸಜ್ಜೆ ರೊಟ್ಟಿ,ಹಿಂಡಿ,ಅನ್ನ ಸೇರಿ ವಿವಿಧ ಬಗೆಯ ಅಡುಗೆ ತಯಾರಿಸಿ ತಂದು ಊಟ ಸವಿದರು.

ಹಲವು ವರ್ಷಗಳಿಂದ ರೈತರ ನಂಬಿಕೆಯಂತೆ ಮಳೆಯಾಗುತ್ತಿದೆ.ಪ್ರತಿ ವರ್ಷವೂ ಮಳೆಗಾಗಿ ಹಳ್ಳ ಬಸವಣ್ಣ ಜಾತ್ರೆ ಮಾಡುತ್ತಾರೆ.ಇದೊಂದು ಪವಾಡವೆಂದು ಊರಿನ ಗ್ರಾಮಸ್ಥರು ಹೇಳುತ್ತಾರೆ.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

45 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

53 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago