ಸುರಪುರ: ನಮ್ಮ ಸರಕಾರ ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿನ ಎಲ್ಲಾ ವರ್ಗಗಳಿಗು ಆದ್ಯತೆ ಮೇರೆಗೆ ಪರಿಹಾರವನ್ನು ನೀಡಿದೆ.ಅದರಂತೆ ರಾಜ್ಯದಲ್ಲಿರುವ ಸಿ ಕೆಟಗೆರಿ ದೇವಸ್ಥಾನಗಳ ಅರ್ಚಕರಿಗೂ ದಿನಸಿ ಕಿಟ್ಗಳನ್ನು ವಿತರಿಸುವ ಮೂಲಕ ನೆರವಾಗಿದೆ ಎಂದು ಶಾಸಕ ರಾಜುಗೌಡ ಮಾತನಾಡಿದರು.
ನಗರದ ತಹಸೀಲ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಸಿ ಕೆಟಗೆರಿ ದೇವಸ್ಥಾನಗಳ ಅರ್ಚಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ,ಕೋವಿಡ್ ಎಲ್ಲಾ ರಂಗಗಳಿಗೂ ತೀವ್ರ ಸಮಸ್ಯೆಯನ್ನು ತಂದಿದೆ.ಆದರೆ ಯಾವುದೇ ಜನರ ಜೀವನಕ್ಕೆ ತೊಂದರೆಯಾಗದಿರಲಿ ಎಂದು ಸರಕಾರ ಜನರ ನೆರವಿಗೆ ನಿಲ್ಲುವ ಮೂಲಕ ಲಾಕ್ಡೌನ್ ಸಂದರ್ಭದಲ್ಲಿ ದುಡಿಯುವ ವರ್ಗಗಳಿಗೆ ಸಮಸ್ಯೆಯಾಗದೆಂತೆ ಕ್ರಮ ಕೈಗೊಳ್ಳುವ ಮೂಲಕ ಕೊರೊನಾ ನಿಯಂತ್ರಿಸುವ ಕೆಲಸ ಮಾಡಿದೆ.ದೇವಸ್ಥಾನಗಳ ಅರ್ಚಕರು ಸರಕಾರ ಯೋಜನೆಯನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಒಟ್ಟು ನೂರು ಸಿ ಕೆಟಗೆರಿ ದೇವಸ್ಥಾನಗಳ ಅರ್ಚಕರಿಗೆ ಕಿಟ್ ವಿತರಣೆಯನ್ನು ಸಾಂಕೇತಿಕವಾಗಿ ೫ ಜನರಿಗೆ ವಿತರಣೆ ಮಾಡಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಬಿ.ಎಮ್.ಹಳ್ಳಿಕೊಟೆ ಹಾಗು ಉಪ ತಹಸೀಲ್ದಾರರಾದ ರೇವಪ್ಪ ತೆಗ್ಗಿನಮನಿ,ಸಿರಸ್ಥೆದಾರರಾದ ಸೋಮನಾಥ ನಾಯಕ,ಕೊಂಡಲ ನಾಯಕ,ಶಿವಾನಂದ ಮಠ,ಕಂದಾಯ ನಿರೀಕ್ಷರಾದ ವಿಠ್ಠಲ ಬಂದಾಳ,ಗುರುಬಸಪ್ಪ ಪಾಟೀಲ್,ಕಂಪ್ಯೂಟರ್ ಆಪರೇಟರ್ ಭೀಮು ಯಾದವ ಸೇರಿದಂತೆ ಎಲ್ಲಾ ಸಿಬ್ಬಂದಿಗಳಿದ್ದರು.
೧೦೦ ಕಿಟ್ ಸಿ ಕೆಟಗೆರಿ ದೇವಸ್ಥಾನದ ಅರ್ಚಕರಿಗೆ ಸಾಂಕೇತಿಕ ೫ ಜನರಿಗೆ, ಹಳ್ಳಿಕೊಟೆ ಸೋಮನಾಥ ನಾಯಕ,ರೆವಪ್ಪ ತೆಗ್ಗಿನಮನಿ,ಕೊಂಡಲ ನಾಯಕ,ಶಿವಾನಂದ ಮಠ,ವಿಠ್ಠಲ ಬಂದಾಳ,ಗುರುಬಸಪ್ಪ ಪಾಟೀಲ್,ಕಚೇರಿ ಸಿಬ್ಬಂದಿಗಳು
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…