ಇಂದ್ರಜಿತ್ ಲಂಕೇಶ ಬಹಿರಂಗ ಕ್ಷಮೆ ಕೇಳಲು ದರ್ಶನ್ ಅಭಿಮಾನಿಗಳ ಒತ್ತಾಯ

ಸುರಪುರ: ನಟ ದರ್ಶನ್ ವಿರುದ್ಧ ಹಗುರವಾಗಿ ಮಾತನಾಡುತ್ತಿರುವ ಪತ್ರಕರ್ತ ಇಂದ್ರಜಿತ್ ಲಂಕೇಶ ಅವರು ಕೂಡಲೇ ದರ್ಶನ ತೂಗುದೀಪ ಅವರಿಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಪ್ರತಿಭಟನೆ ನಡೆಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ ಅನೇಕ ಮುಖಂಡರು ಇಂದ್ರಜಿತ್ ಲಂಕೇಶ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ದರ್ಶನ್ ಅವರ ವಿರುಧ್ಧ ಮಾತನಾಡುವ ಭರದಲ್ಲಿ ಇಂದ್ರಜಿತ್ ಲಂಕೇಶ ಅವರು ಪೊಲೀಸರ ವಿರುಧ್ಧ ಅವಹೇಳನಕಾರಿ ಮಾತನಾಡಿದ್ದಾರೆ.ಸಿಲೆಬ್ರಿಟಿಗಳ ಬಗ್ಗೆಯು ಹಗುರವಾಗಿ ಮಾತನಾಡಿದ್ದಾರೆ.ಅಲ್ಲದೆ ಒಂದು ಸಮುದಾಯದ ಬಗ್ಗೆಯು ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ.

ಅಲ್ಲದೆ ದರ್ಶನ್ ಅಭಿಮಾನಿಗಳು ಮತ್ತು ಹಿಂಬಾಲಕರನ್ನು ರೌಡಿಗಳೆಂದು ಕರೆಯುವ ಮೂಲಕ ಅವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಆದ್ದರಿಂದ ಕೂಡಲೇ ಇಂದ್ರಜಿತ್ ಲಂಕೇಶ ನಟ ದರ್ಶನ್ ಅವರ ಕ್ಷಮೆ ಕೇಳಬೇಕು,ಇಲ್ಲವಾದಲ್ಲಿ ದರ್ಶನ್ ಅಭಿಮಾನಿಗಳು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲು ನಾಯಕ ಶಿಬಾರಬಂಡಿ,ಗೌರವಾಧ್ಯಕ್ಷ ಶರಣು ಬೈರಿಮಡ್ಡಿ,ಮುಖಂಡರಾದ ರವಿ ನಾಯಕ ಬೈರಿಮಡ್ಡಿ,ಯಲ್ಲಪ್ಪ ಕಲ್ಲೋಡಿ,ಮೌನೇಶ ಕಟ್ಟಿಮನಿ,ಶಿವಕುಮಾರ ದಿವಳಗುಡ್ಡ,ವೆಂಕಟೇಶ ಕೊಳ್ಳಿ,ಚೆನ್ನು ಗುತ್ತಿ,ಅರುಣಕುಮಾರ ಲಾಡ್ಲಾಪುರ,ನಾಗರಾಜ ಯಾದವ್,ಮಹೇಶ ದಿವಳಗುಡ್ಡ,ನಿಂಗಪ್ಪ ಯಾದವ್,ನಾಗರಾಜ ಶೆಟ್ಟಿ,ಚಂದ್ರಶೇಖರ ವಗ್ಗ,ಬೀರಲಿಂಗ ತುಮಕೂರ ಸೇರಿದಂತೆ ಅನೇಕರಿದ್ದರು.

emedialine

Recent Posts

ರಾಜ್ಯೋತ್ಸವ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯ ಸಂಘ 82ನೇ ನಾಡಹಬ್ಬ

ಸುರಪುರ: ರಾಜ್ಯದಲ್ಲಿಯೇ ಅತ್ಯುತ್ತಮವಾದ ಕನ್ನಡ ಸಾಹಿತ್ಯ ಸಂಘ ಎಂದು ಸರಕಾರ ಗುರುತಿಸಿ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ,ಇದಕ್ಕೆ ಅನೇಕ…

28 mins ago

ದಸರಾ ಸಿ.ಎಂ ಕಪ್ ಕ್ರೀಡಾಕೂಟಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಸಿ.ಎಂ ಕಪ್ ಕ್ರೀಡಾಕೂಟಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಚಾಲನೆ…

30 mins ago

ಪರಿಷತ್ತಿನ ಸಲಕರಣೆಗಳ ಖರೀದಿಗಾಗಿ 5 ಲಕ್ಷ ರೂ. ಅನುದಾನದ: ಎಂಎಲ್ಸಿ ಕಮಕನೂರ ಭರವಸೆ

ಕಲಬುರಗಿ: ಸದಾ ಕನ್ನಡಪರ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣಗೊಂಡಿರುವ ಸಾಹಿತ್ಯ ಮಂಟಪಕ್ಕೆ ಅಗತ್ಯವಿರುವ ಸಲಕರಣೆಗಳ ಖರೀದಿಗೆ…

2 hours ago

ತಳವಾರ ನೌಕರಿಗಾಗಿ ಸಿಂಧುತ್ವ ಪ್ರಮಾಣ ಪತ್ರ ಇತರೆ ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಗೆ ಮನವಿ

ಬೆಂಗಳೂರು: ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ರವಿವಾರ ತಳವಾರ ಸಮುದಾಯದ ಸರಕಾರಿ ನೌಕರರ ಸಿಂಧುತ್ವ…

2 hours ago

ಜೀವನದಲ್ಲಿ ಸವಾರ್ಂಗೀಣ ಸ್ವಾಸ್ಥ್ಯ ಸಾಧಿಸಲು ಭಾರತೀಯ ಜ್ಞಾನ ವ್ಯವಸ್ಥೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಕಲಬುರಗಿ; ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯು ಜೀವನದಲ್ಲಿ ಸವಾರ್ಂಗೀಣ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಸಾಧಿಸಲು ಎಲ್ಲಾ ಸಮಸ್ಯೆಗಳಿಗೆ ಉತ್ತರ ಮತ್ತು…

2 hours ago

ಕಾವ್ಯ ದೊಂಬರಾಟವಲ್ಲ: ಕಾವ್ಯ ಸಂಸ್ಕೃತಿ ಯಾನಕ್ಕೆ ಚಾಲನೆ

ಕಲಬುರಗಿ: 'ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.‌ಬಸವರಾಜ ಸಾದರ ಅಭಿಪ್ರಾಯ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420