ಸುರಪುರ: ನಟ ದರ್ಶನ್ ವಿರುದ್ಧ ಹಗುರವಾಗಿ ಮಾತನಾಡುತ್ತಿರುವ ಪತ್ರಕರ್ತ ಇಂದ್ರಜಿತ್ ಲಂಕೇಶ ಅವರು ಕೂಡಲೇ ದರ್ಶನ ತೂಗುದೀಪ ಅವರಿಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಪ್ರತಿಭಟನೆ ನಡೆಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ ಅನೇಕ ಮುಖಂಡರು ಇಂದ್ರಜಿತ್ ಲಂಕೇಶ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ದರ್ಶನ್ ಅವರ ವಿರುಧ್ಧ ಮಾತನಾಡುವ ಭರದಲ್ಲಿ ಇಂದ್ರಜಿತ್ ಲಂಕೇಶ ಅವರು ಪೊಲೀಸರ ವಿರುಧ್ಧ ಅವಹೇಳನಕಾರಿ ಮಾತನಾಡಿದ್ದಾರೆ.ಸಿಲೆಬ್ರಿಟಿಗಳ ಬಗ್ಗೆಯು ಹಗುರವಾಗಿ ಮಾತನಾಡಿದ್ದಾರೆ.ಅಲ್ಲದೆ ಒಂದು ಸಮುದಾಯದ ಬಗ್ಗೆಯು ಮಾತನಾಡಿ ಜಾತಿ ನಿಂದನೆ ಮಾಡಿದ್ದಾರೆ.
ಅಲ್ಲದೆ ದರ್ಶನ್ ಅಭಿಮಾನಿಗಳು ಮತ್ತು ಹಿಂಬಾಲಕರನ್ನು ರೌಡಿಗಳೆಂದು ಕರೆಯುವ ಮೂಲಕ ಅವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಆದ್ದರಿಂದ ಕೂಡಲೇ ಇಂದ್ರಜಿತ್ ಲಂಕೇಶ ನಟ ದರ್ಶನ್ ಅವರ ಕ್ಷಮೆ ಕೇಳಬೇಕು,ಇಲ್ಲವಾದಲ್ಲಿ ದರ್ಶನ್ ಅಭಿಮಾನಿಗಳು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲು ನಾಯಕ ಶಿಬಾರಬಂಡಿ,ಗೌರವಾಧ್ಯಕ್ಷ ಶರಣು ಬೈರಿಮಡ್ಡಿ,ಮುಖಂಡರಾದ ರವಿ ನಾಯಕ ಬೈರಿಮಡ್ಡಿ,ಯಲ್ಲಪ್ಪ ಕಲ್ಲೋಡಿ,ಮೌನೇಶ ಕಟ್ಟಿಮನಿ,ಶಿವಕುಮಾರ ದಿವಳಗುಡ್ಡ,ವೆಂಕಟೇಶ ಕೊಳ್ಳಿ,ಚೆನ್ನು ಗುತ್ತಿ,ಅರುಣಕುಮಾರ ಲಾಡ್ಲಾಪುರ,ನಾಗರಾಜ ಯಾದವ್,ಮಹೇಶ ದಿವಳಗುಡ್ಡ,ನಿಂಗಪ್ಪ ಯಾದವ್,ನಾಗರಾಜ ಶೆಟ್ಟಿ,ಚಂದ್ರಶೇಖರ ವಗ್ಗ,ಬೀರಲಿಂಗ ತುಮಕೂರ ಸೇರಿದಂತೆ ಅನೇಕರಿದ್ದರು.