ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ
ಹಿಡಿದಿಹೆನೆಂದಡೆ ಸಿಕ್ಕದೆಂಬ ಬಳಲಿಕೆಯ ನೋಡಾ
ಕಂಡುದನೆ ಕಂಡು ಗುರುಪಾದವಿಡಿದಲ್ಲಿ
ಕಾಣಬಾರದುದ ಕಾಣಬಹುದು ಗುಹೇಶ್ವರಾ

ಬಸವಾದಿ ಶರಣರ ವಚನಗಳಲ್ಲಿ ಗುರುವಿನ ಕುರಿತು ಅನೇಕ ರೀತಿಯ ನಿರ್ವಚನವನ್ನು ಕಾಣುತ್ತವೆ. ಶರಣರು ಗುರು ಒಂದು ತತ್ವವೆಂದು ಹೇಳುತ್ತಾರೆ. ಗುರುವೆಂದರೆ, ಅಜ್ಞಾನದ ಕತ್ತಲೆಯನ್ನು ಕಳೆಯುವವನು. ಸೂರ್ಯ ಉದಯವಾದ ಕೂಡಲೇ ಬ್ರಹ್ಮಾಂಡದ ಕತ್ತಲೆಯನ್ನು ಹೇಗೆ ಕಳೆಯುತ್ತದೆಯೋ ಅದೇ ರೀತಿ ಗುರುವೆಂಬ ಸೂರ್ಯನಿಂದ ಪಿಂಡಾಂಡದಲ್ಲಿ ಆವರಿಸಿದ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುತ್ತದೆ. ಅಜ್ಞಾನದ ಕತ್ತಲೆಯನ್ನು ಕಳೆದಾಗ ಶಿಷ್ಯನಲ್ಲಿ ಜ್ಞಾನ ನೇತ್ರದ ಉದಯವಾಗುತ್ತದೆ. ಆ ಜ್ಞಾನ ನೇತ್ರದಿಂದ ನಮಗೆ ಶಿವಜ್ಞಾನದ, ದಿವ್ಯಜ್ಞಾನದ ಪ್ರಾಪ್ತಿ ಆಗುತ್ತದೆ. ಹಾಗಾಗಿ ಗುರುಕರುಣೆ ನಮಗೆ ಅವಶ್ಯಕವಾಗಿದೆ.

ಅಲ್ಲಮಪ್ರಭುಗಳು ಮೇಲಿನ ವಚನದಲ್ಲಿ ಗುರುವಿನ ಮಹತ್ವವನ್ನು ತಿಳಿಸುತ್ತಾರೆ. ಪರಮಾತ್ಮನು ನಿರಾಕಾರ, ನಿರ್ಗುಣ, ಅಗಮ್ಯ, ಅಪ್ರತಿಮ ಇದ್ದಾನೆ. ನಾವು ನಿರಾಕಾರವಾದಂತಹ ಪರಮಾತ್ಮನ ಹುಡುಕುತ್ತ ಹೋದರೆ ಅವನು ಸಿಗುವುದು ಕಷ್ಟ. ಆದರೆ ನಿರಾಕಾರ ಶಿವನ ರೂಪವೇ ಆದ ಗುರು ನಮ್ಮ ಕಣ್ಣಿಗೆ ಕಾಣುತ್ತಾರೆ. ಅವರು ತೋರಿಸಿರುವ ಭಕ್ತಿ ಮಾರ್ಗವನ್ನು ಹಿಡಿದು ನಾವು ಮುನ್ನಡೆದರೆ ಕಾಣಬಾರದ ಶಿವನ ದರ್ಶನ ನಮಗೆ ಆಗುತ್ತದೆ.

ಪರಮಾತ್ಮ ಸರ್ವವ್ಯಾಪಿ, ಸರ್ವಭರಿತ ಆಗಿದ್ದಾನೆ. ಸರ್ವಭರಿತವಾದ ಪರಮಾತ್ಮನನ್ನು ಶ್ರೀಗುರು ನಮಗೆ ಇಷ್ಟಲಿಂಗ ರೂಪದಲ್ಲಿ ಕರಸ್ಥಲಕ್ಕೆ ಕೊಡುತ್ತಾನೆ. ಆ ಇಷ್ಟಲಿಂಗದ ಆರಾಧನೆ ಮಾಡುತ್ತ ಪ್ರಾಣಲಿಂಗ, ಭಾವಲಿಂಗವನ್ನು ಅರಿಯಬೇಕಾಗಿದೆ. ಸರ್ವಭರಿತನಾದ ಪರಮಾತ್ಮನು ನಮ್ಮ ಬಹಿರಂಗದ ಕಣ್ಣಿಗೆ ಕಾಣುವುದಿಲ್ಲ. ಅದನ್ನು ಕಾಣಬೇಕಾದರೆ ಸದ್ಗುರು ನಮಗೆ ದಿವ್ಯಜ್ಞಾನದ ದೃಷ್ಟಿಯನ್ನು ಕರುಣಿಸುತ್ತಾರೆ. ಆವಾಗ ಪರಮಾತ್ಮನ ದರ್ಶನ ನಮಗೆ ಆಗುತ್ತದೆ.

ಶರಣಸಂಸ್ಕøತಿಯಲ್ಲಿ ಅರಿವು-ಆಚಾರ ಮತ್ತು ಅನುಭಾವವನ್ನು ಪಡೆದು ಯಾರು ಬೇಕಾದರು ಗುರು ಆಗಬಹುದು. ಗುರು ಆಗಲಿಕ್ಕೆ ಜಾತಿ, ಮತ, ವರ್ಗ, ವರ್ಣ, ಲಿಂಗ ಹೀಗೆ ಯಾವುದೇ ಭೇದಭಾವವಿಲ್ಲ. ಜ್ಯೋತಿ ಮುಟ್ಟಿ ಜ್ಯೋತಿಯಾದಂತೆ ಗುರುಮುಟ್ಟಿ ಗುರುವಾಗುವ ತತ್ವ ಶರಣರು ನಮಗೆ ಹೇಳಿದ್ದಾರೆ. ಹಾಗಾಗಿ ನಾವು ಸದ್ಗುರುವಿನಿಂದ ಅರಿವು ಆಚಾರ ಮತ್ತು ಅನುಭಾವವನ್ನು ಪಡೆದು ಗುರುರೂಪ ಆಗಬೇಕು.

ಗುರು ನಮ್ಮ ಬಹಿರಂಗದ ಸಂಪತ್ತು ಐಶ್ವರ್ಯ, ಸೌಂದರ್ಯ ನೋಡುವುದಿಲ್ಲ. ಅವನ ದೃಷ್ಟಿಗೆ ಅಂತರಂಗದ ಸೌಂದರ್ಯವನ್ನು ಕಾಣುತ್ತದೆ. ಯಾವ ಶಿಷ್ಯನಲ್ಲಿ ಎಂತಹ ಸಾಮಥ್ರ್ಯ ಎಂಬುದು ಗುರು ಗುರುತಿಸುತ್ತಾರೆ.

ವಿವೇಕಾನಂದರಲ್ಲಿರುವ ಅಪಾರ ಸಾಮಥ್ರ್ಯವನ್ನು ರಾಮಕೃಷ್ಣ ಪರಮಹಂಸರು ಗುರುತಿಸಿದರು. ಹಾಗಾಗಿಯೇ ವಿವೇಕಾನಂದರು ಜಗತ್ತನ್ನೆ ಬೆಳಗಿಸಿದರು. ಗುರುವಿನಲ್ಲಿ ಅಪಾರ ಸಾಮಥ್ರ್ಯವಿರುತ್ತದೆ. ಗುರು ನಮಗೆ ಭವಬಂಧನದಿಂದ ದೂರ ಮಾಡುತ್ತಾರೆ. ಅದಕ್ಕಾಗಿ ನಾವು ಸದ್ಗುರುವಿಗೆ ಮೊರೆಹೋಗುವ ಮೂಲಕ ನಿಜಜ್ಞಾನವನ್ನು ಪಡೆದು ಶಾಶ್ವತ ಸುಖಿಯಾಗೋಣ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420