ನಾಗಲಾಂಬಿಕೆ, ಗಂಗಾಂಬಿಕೆ, ನೀಲಾಂಬಿಕೆ: ಶರಣ ಚರಿತೆ

ಬಸವಣ್ಣನವರ ಜೊತೆಯಾಗಿ ಬೆಳೆದ ಅಕ್ಕ ನಾಗಲಾಂಬಿಕೆಗೆ ತಾಯಿಗಿಂತ ಮಹತ್ವದ ಸ್ಥಾನವಿದ್ದು, ಇವರಿಬ್ಬರು ಅನೋನ್ಯ ಬದುಕಿದವರು. ಬಸವಣ್ಣನವರು ಕೈಗೊಂಡ ಮಹತ್ವದ ಈ ಕಾರ್ಯದಲ್ಲಿ ಕೊನೆಯವರೆಗೂ ಸಂಪೂರ್ಣ ಬೆಂಬಲವಾಗಿ ನಿಂತವರು. ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ-ಪ್ರಭಾವ ಇರುತ್ತದೆ ಎಂದು ಹೇಳುತ್ತಾರೆ.

ಆದರೆ ಬಸವಣ್ಣನವರ ಯಶಸ್ವಿಯ ಹಿಂದೆ ಅಕ್ಕ ನಾಗಲಾಂಬಿಕೆ, ಮಡದಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆ ಈ ಮೂವರ ಪಾತ್ರವಿರುವುದನ್ನು ಗಮನಿಸಬಹುದು. ವಿಜಯಪುರ ಜಿಲ್ಲೆಯ ಬಾಗೇವಾಡಿ ಬಸವಣ್ಣ ಮತ್ತು ನಾಗಲಾಂಬಿಕೆಯರ ಸ್ವಂತ ಊರು. ಇಂಗಳೇಶ್ವರ ಇವರ ತಾಯಿ ಮಾದಲಾಂಬಿಕೆಯ ತವರೂರು.

ನಾಗಲಾಂಬಿಕೆ: ಪ್ರಾಧಿಕಾರದವರು ಮಾದರಸ-ಮಾದಲಾಂಬಿಕೆಯರಿದ್ದ ಮೂಲ ಮನೆಯನ್ನು ಈಗ ಸ್ಮಾರಕವನ್ನಾಗಿ ನಿರ್ಮಾಣ ಮಾಡಿರುವುದರಿಂದ ಬಸವನ ಬಾಗೇವಾಡಿ ಹಾಗೂ ಇಂಗಳೇಶ್ವರದಲ್ಲಿ ಅಕ್ಕನಾಗಮ್ಮನ ಮೂರ್ತಿಯೂ ಕಣಬಹುದು. ಇಂಗಳೇಶ್ವರದ ಕಲ್ಲಿನಾಥ ದೇವಾಲಯದ ಎದುರಿಗಿರುವ ಬೆಟ್ಟದ ತುದಿಯಲ್ಲಿ ನಾಗಲಾಂಬಿಕೆ ಹೆಸರಿನ ಗವಿ ಕಾಣಬಹುದು.

ಉಪನಯನ ತಿರಸ್ಕರಿಸಿದ ಬಸವಣ್ಣನವರು ಶಿಕ್ಷಣಕ್ಕಾಗಿ ಕೂಡಲಸಂಗಮಕ್ಕೆ ಇಲ್ಲಿಗೆ ಬಂದಾಗ ಅವರ ಜೊತೆ ನಾಗಲಾಂಬಿಕೆಯೂ ಬಂದರು. ಸಂಗಮೇಶ್ವರ ದೇವಾಲಯದ ಜೋಡು ನಂದಿ ಇರುವ ಸ್ಥಳದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು ಎನ್ನಲಾಗುತ್ತಿದೆ. ಬಸವಕಲ್ಯಾಣದಲ್ಲಿ ಅಕ್ಕನಾಗಮ್ಮನ ಹೆಸರಿನ ಉದ್ದನೆಯ ಗವಿಯಿದೆ.

ಅಲ್ಲೊಂದು ಅಕ್ಕನಾಗಮ್ಮನ ಶಿಲಾಮೂರ್ತಿಯಿದೆ. ಕಲ್ಯಾಣ ಕ್ರಾಂತಿಯ ನಂತರ ಉಳುವೆ ಕಡೆ ಹೊರಟಿರುವುದರಿಂದ ಧಾರವಾಡದ ಯು.ಬಿ. ಹಿಲ್ಸ್, ಬೈಲಹೊಂಗಲ ತಾಲ್ಲೂಕಿನ ಮರಡಿ ನಾಗಲಾಪುರ, ಉಳವಿ, ತರಿಕೆರೆ, ಎಣ್ಣೆಹೊಳೆ ಮುಂತಾದ ಕಡೆ ಅಕ್ಕನಾಗಮ್ಮನ ಹೆಸರಿನ ಸ್ಮಾರಕಗಳಿದ್ದು, ಎಣ್ಣೆಹೊಳೆಯಲ್ಲಿ ಅವರು ಲಿಂಗೈಕ್ಯರಾದರು ಎಂದು ಹೇಳುತ್ತಾರೆ.

ಗಂಗಾಂಬಿಕೆ:ಬಸವಕಲ್ಯಾಣದ ಪರುಷ ಕಟ್ಟೆ ಪಟ್ಟಣದ ಭಾಗದಲ್ಲಿ ಇವರ ತಂದೆ ಬಲದೇವರಸನ ಮನೆಯಿತ್ತು. ಕ್ರಾಂತಿಯ ನಂತರ ಕಲ್ಯಾಣದಿಂದ ನಾಗಲಾಂಬಿಕೆಯ ಜೊತೆ ಹೊರಟಾಗ ಕಲಬುರಗಿ ಜಿಲ್ಲೆಯ ಜೇರಟಗಿ ತಾಲ್ಲೂಕಿನ ಜೇರಟಗಿಯಲ್ಲಿ ಕೆಲವು ದಿನ ತಂಗಿದ್ದರು ಎಂದು ಹೇಳಲಾಗುತ್ತಿದ್ದು, ಇಲ್ಲಿ ನೀಲಗಂಗಾ ಹೆಸರಿನ ದೇವಸ್ಥಾನವಿದೆ. ಎಂ.ಕೆ. ಹುಬ್ಬಳಿಯಲ್ಲಿ ಇವರ ಸಮಾಧಿಯಿದೆ. ಹುಣಸಿಕಟ್ಟಿಯಲ್ಲಿ ರುದ್ರಮುನಿಯವರ ಸ್ಮಾರಕವಿದೆ. ತಿಗಡಿಯಲ್ಲಿ ಕಲ್ಯಾಣಮ್ಮನವರ ಸಮಾಧಿ ಇದೆ.

ನೀಲಾಂಬಿಕೆ: ಕಲ್ಯಾಣ ಕ್ರಾಂತಿಯ ನಂತರ ಕೂಡಲಸಂಗಮದೆಡೆಗೆ ಬಂದಾಗ ನಾಗಲಾಂಬಿಕೆ, ಗಂಗಾಂಬಿಕೆಯ ಜೊತೆಗಿದ್ದ ನೀಲಾಂಬಿಕೆಯ ಸ್ಮಾರಕಗಳೂ ಪ್ರತ್ಯೇಕವಗಿ ದೊರೆಯುವುದಿಲ್ಲ. ಆದರೆ ಎಂ.ಕೆ. ಹುಬ್ಬಳಿ ಸಮೀಪದ ಮುರುಕಿಬಾವಿ ಹತ್ತಿರ ಕಲ್ಯಣದ ನೀಲಮ್ಮವರ ಶಿಲಾಮೂರ್ತಿ ಇದೆ. ಇಲ್ಲಿಂದ ಬಾಗಲಕೋಟೆ ಮಾರ್ಗವಾಗಿ ಅವರು ಕೂಡಲಸಂಗಮ ತಲುಪಿದ್ದಾರೆ. ಪಕ್ಕದ ತಂಗಡಿಗಿಯಲ್ಲಿ ಇವರ ಸ್ಮಾರಕವಿದೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420