ವಚನ ದರ್ಶನ ಪ್ರವಚನ ಭಾಗ: ಗೆಲುವೆನೆಂಬ ಭಾಷೆ ಭಕ್ತನದು

ಶರಣರ ವಚನಗಳು ನಮಗೆ ಶಾಶ್ವತವಾದ ಬೆಳಕನ್ನು ನೀಡುತ್ತವೆ. ಆ ಬೆಳಕಿನಲ್ಲಿ ಮುನ್ನಡೆದರೆ ನಮ್ಮ ಅಜ್ಞಾನದ ಕತ್ತಲನ್ನು ಕಳೆಯುತ್ತದೆ. ಕಾಮ, ಕೋಪ, ಲೋಭ, ಮೋಹ, ಮದ, ಮತ್ಸರ ಈ ಷಡ್‍ವಿಕಾರಗಳು ನಷ್ಟವಾಗುತ್ತವೆ. ನಾವು ವಿಷಯತ್ಯಾಗ ಮಾಡಿದಾಗ ದೇವರ ಒಲುಮೆಯಾಗುತ್ತದೆ.

ನಾವು ಮನಸ್ಸಿನಲ್ಲಿ ಸದ್‍ವಿಚಾರ, ಸದ್‍ವರ್ತನೆ ತುಂಬಿಕೊಳ್ಳಬೇಕಾದರೆ ಒಳಗಿರುವ ವಿಷಯಗಳ ತ್ಯಾಗ ಮಾಡಬೇಕಾಗುತ್ತದೆ. ಕಾರಣ: ಕೊಡದಲ್ಲಿ ನೀರು ತುಂಬಬೇಕಾದರೆ, ಕೊಡದಲ್ಲಿ ಮೊದಲೆ ಇರುವ ಗಾಳಿಯನ್ನು ಹೊರಹೋದಾಗ ಮಾತ್ರ ಒಳಗಡೆ ನೀರು ತುಂಬುತ್ತವೆ. ಹಾಗೆಯೇ ನಾವು ನಮ್ಮ ದೇಹದಲ್ಲಿ ಇರುವ ವಿಷಯಗಳ ತ್ಯಾಗ ಮಾಡಿದಾಗ ಪರಮಾತ್ಮನ ಕರುಣೆ ಆಗುತ್ತದೆ.

ವಿಷಯಗಳ ತ್ಯಾಗ ಮಾಡಬೇಕಾದರೆ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರಬೇಕು. ನಾವು ನಮ್ಮ ಬುದ್ಧಿ ಮನಸ್ಸಿನ ಕೈಯಲ್ಲಿ ಕೊಡದೆ ವಿವೇಕದ ಕೈಯಲ್ಲಿ ಕೊಡಬೇಕು. ಮನಸ್ಸು ಅದೋಮುಖವಾಗಿ ಹರಿಯುತ್ತದೆ. ಅದಕ್ಕೆ ಉಧ್ರ್ವಮುಖವಾಗಿ ಹರಿಸಬೇಕಾದರೆ ಶರಣರ ವಚನಗಳ ದರ್ಶನ ಮಾಡಿಸಬೇಕು. ಗುಡ್ಡದ ಮೇಲೆ ಕಲ್ಲು ಒಯ್ಯಲು ಕಷ್ಟ ಆದರೆ ಗುಡ್ಡದ ಮೇಲಿನ ಒಂದು ಕಲ್ಲು ಕೆಳಗೆ ಬಸಾಡಲು ಏನು ಕಷ್ಟ ಪಡಬೇಕಾಗುವುದಿಲ್ಲ.

ನೀರು ಇಳಿಮುಖವಾಗಿ ಹರಯುವುದು ಸಹಜ ಆದರೆ ಅದೇ ನೀರನ್ನು ಮೇಲೆತ್ತಲು ಬಹಳ ಕಷ್ಟಪಡಬೇಕಾಗುತ್ತದೆ. ಹಾಗೇಯೆ ನಮ್ಮ ಮನಸ್ಸು ಉಧ್ರ್ವಮುಖವಾಗಲು ವಿವೇಕಿಯಾಗಲು ಕಷ್ಟಪಡಬೇಕಾಗುತ್ತದೆ. ನಮ್ಮ ಅಕ್ಕ ಪಕ್ಕದವರ ಬೆಳವಣಿಗೆನ್ನು ನೋಡಿ ನಾವು ಹೊಟ್ಟೆ ಕಿಚ್ಚು ಪಡುವುದು ಅದು ಮನಸ್ಸಿನ ಗುಣಧರ್ಮ. ಆದರೆ ನಾವು ವಿವೇಕವಂತರಾದಾಗ ಅವರ ಬೇಳವಣಿಗೆಯಿಂದ ಆನಂದ ಪಡೆಯುತ್ತೇವೆ. ಇದುವೇ ಶರಣರು ತಮ್ಮ ವಚನದಲ್ಲಿ ಹೇಳುತ್ತಾರೆ.

ನಾವು ಬೇರೆಯವರನ್ನ ದ್ವೇಷಿಸುವ ಬದಲಾಗಿ ಪ್ರೀತಿಸಬೇಕು. ಶರಣರಿಗೆ ಎಷ್ಟೇ ಕಷ್ಟ ಬಂದರು ಅವರಿಗೆ ಎಷ್ಟೇ ತೊಂದರೆ ಕೊಟ್ಟವರಿಗು ಅವರು ದ್ವೇಷ ಮಾಡಲಿಲ್ಲ. ಕೊಂಡಿ ಮಂಚಣ್ಣ ಬಸವಣ್ಣನವರಿಗೆ ಕೊನೆಯವರೆಗು ಕಷ್ಟಕೊಟ್ಟರು ಆದರು ಬಸವಣ್ಣನವರು ಅವರನ್ನು ಪ್ರೀತಿಸಿದರು. ಕೌಶಿಕ ರಾಜ ಅಕ್ಕಮಹಾದೇವಿಯ ಮನಸ್ಸಿನ ವಿರುದ್ಧ ನಡೆದುಕೊಂಡು ಕಷ್ಟಕೊಟ್ಟನು. ಆದರು ಅಕ್ಕಮಹಾದೇವಿ ಕೌಶಿಕರಾಜನಿಗೆ ಯಾವುದೇ ಶಾಪ ಕೊಡಲಿಲ್ಲ. ಬದಲಾಗಿ ಅವನಿಗೆ ಕ್ಷಮೇ ಮಾಡಿದಳು. ಶರಣರ ಧರ್ಮ ಶಾಪ ಕೊಡುವುದಲ್ಲ, ಬದಲಾಗಿ ಎಲ್ಲರನ್ನು ಪ್ರೀತಿಸುವ ಮೂಲಕ ಪರಿವರ್ತನೆ ಮಾಡುವುದು ಆಗಿದೆ.

ಅನೇಕ ದೇವರುಗಳು ದುಷ್ಟರ ಸಂಹಾರಕ್ಕಾಗಿ ಅವತಾರವನ್ನು ತಾಳುತ್ತಾರೆ ಎಂದು ನಾವು ಕೇಳುತ್ತೇವೆ ಓದುತ್ತೇವೆ. ಇದನ್ನೆ ಬಸವಣ್ಣನವರು “ಕೊಲುವುನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು” ಎಂದು ಹೇಳುವ ಮೂಲಕ ಶರಣ ಧರ್ಮದ ಉದ್ದೇಶವನ್ನೇ ಸ್ಪಷ್ಟ ಪಡಿಸುತ್ತಾರೆ. ಶರಣರು ದುಷ್ಟರ ಸಂಹಾರ ಮಾಡದೇ ಅವರಲ್ಲಿ ಇರುವ ದುಷ್ಟತನವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ.

ಶರಣರ ವಚನದರ್ಶನದಿಂದ ನಮ್ಮಲ್ಲಿರುವ ದಿರ್ವಿಕಾರ ದುಷ್ಟತನವನ್ನು ನಾಶವಾಗಿ ನಾವು ಶರಣ ಜೀವಿಗಳಾಗುತ್ತೇವೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420