15 ರಂದು ಗ್ರಾಮ ಪಂಚಾಯತಿ ನೌಕರರ ಬೆಂಗಳೂರು ಚಲೊ

ಕಲಬುರಗಿ: ಅಗಸ್ಟ್ 17 ರಂದು ಅನಿರ್ಧಿಷ್ಟ ಹೋರಾಟಕ್ಕೆ ಕರೆ ಕೊಟ್ಟಾಗ ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿಗಳು ಬೇಡಿಕೆಗಳನ್ನು ಈಡೇರಿಸಲು ೩ ದಿನದ ಕಾಲಾವಕಾಶ ಕೇಳಿ ಬೇಡಿಕೆಗಳು ಈಡೇರಿಸದೇ ಇರುವುದರಿಂದ 6 ರಂದು ಬೆಂಗಳೂರಿನಲ್ಲಿ ಹೋರಾಟಕ್ಕೆ ಕರೆ ಕೊಡಲಾಯಿತು. ಹೋರಾಟ  ಮಾಡಲು ಬಿಡಬಾರದು ಎಂದು ಸರಕಾರ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹೋರಾಟಕ್ಕೆ ನೌಕರರು ಆಗಮಿಸಿ ಹೋರಾಟ ಮಾಡಲಾಯಿತು.

ಆದರೆ ಹೋರಾಟದ ದಿನ ಆರ್‌ಡಿಪಿಆರ್ ಇಲಾಖೆಯ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ದೆಹಲಿಗೆ ಹೋಗಿದ್ದ ಪ್ರಯುಕ್ತ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಂಘದ ಮುಖಂಡರ ಜೊತೆಯಲ್ಲಿ ಚರ್ಚೆ ನಡೆದಾಗ ಖಆPಖ ಮಂತ್ರಿಗಳು ಬಂದ ತಕ್ಷಣ ಸಂಘದ ಮುಖಂಡರು ಮತ್ತು ಅಧಿಕಾರಿಗಳ ಜಂಟಿ ಸಭೆ ಕರೆದು ಚರ್ಚಿಸಲು ಒಪ್ಪಿಗೆ ಸೂಚಿಸಿದರು ಮತ್ತು ಅರ್ಹತಾ ಪರೀಕ್ಷೆ ಕೈ ಬಿಡುವ ಭರವಸೆ ನೀಡಿದ್ದರು.

ಆದರೆ ಸರಕಾರ ಏಕ ಪಕ್ಷೀಯವಾಗಿ ಆದೇಶ ಮಾಡಿ ಅರ್ಹತಾ ಪರೀಕೆ ನಡೆಸಲೇಬೇಕೆಂದು ನಿರ್ಧರಿಸಿದೆ ಮತ್ತು ನೌಕರರ ವೇತನಕ್ಕೆ ಬೇಕಾಗುವ ರೂ.೭೦೦/- ಕೋಟಿ ಅನುದಾನದ ಬಗ್ಗೆ ಚಕಾರ ಎತ್ತುತ್ತಿಲ್ಲ.ನೌಕರರ ವಿರೋಧಿ ಧೋರಣೆ ಸರಕಾರ ತೋರುತ್ತಿದೆ.೨ ಸಾರಿ ಸರಕಾರದ ಜೊತೆಯಲ್ಲಿ ಮಾತುಕತೆ ನಡೆಸಿದಾಗ *ಬೇಡಿಕೆ ಈಡೇರಿಸುವ ಭರವಸೆ ಕೊಟ್ಟು ನಂತರ ಸರಕಾರ ಮಾತಿಗೆ ತಪ್ಪಿದೆ.

ಬೇಡಿಕೆಗಳಾದ ೧ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ಮಾಡುವಾಗ ಪಂಚಾಯತ ನಲ್ಲಿರುವ ಎಲ್ಲಾ ವೃಂದದ ಸಿಬ್ಬಂದಿಗಳನ್ನು ಪರಿಗಣಿಸಬೇಕು, ದಿ.೦೫-೦೯-೨೦೨೧ ರ ಆದೇಶದಲ್ಲಿನ ಅರ್ಹತಾ ಪರೀಕ್ಷೆ ಕೈ ಬಿಟ್ಟು ಕಾರ್ಯದರ್ಶಿ ಗ್ರೇಡ್-೨ ಮತ್ತು ಲೆಕ್ಕ ಸಹಾಯಕ ಹುದ್ದೆ ನೇಮಕಾತಿ ಗೆ ಅವಕಾಶ ಕಲ್ಪಿಸಬೇಕು, ೧೫ನೇ ಹಣಕಾಸು ಯೋಜನೆಯಲ್ಲಿ ಗ್ರಾ.ಪಂ.ಸಿಬ್ಬಂದಿಗಳಿಗೆ ನಿಗದಿ ಮಾಡಿರುವ ವೇತನವನ್ನು ಶಾಸನಬದ್ದ ಅನುದಾನ ದಂತೆ ರಾಜ್ಯ ಮಟ್ಟದಲ್ಲೇ ಕಡಿತಗೊಳಿಸಿ ಸಿಬ್ಬಂದಿ ಖಾತೆ ವೇತನಕ್ಕೆ ವರ್ಗಾವಣೆ ಮಾಡಬೇಕು.

ಸರಕಾರ ಈ ಹಿಂದೆ ಘೋಷಣೆ ಮಾಡಿದಂತೆ ವೇತನಕ್ಕಾಗಿ ತಗುಲುವ ೭೦೦/- ಕೋಟಿ ರೂಪಾಯಿ ಹಣಕಾಸನ್ನು ಒದಗಿಸಬೇಕು,  ಕನಿಷ್ಠ ವೇತನ ಪರಿಷ್ಕರಿಣೆ ಮಾಡಬೇಕು, ಎಲ್ಲಾ ಸಿಬ್ಬಂದಿಗಳಿಗೆ ಪಿಂಚಣಿ ಜಾರಿ ಮಾಡಬೇಕು, ಈ ಮೇಲಿನ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುವ ದಿ.೧೫-೦೯-೨೦೨೧ ರ ಅನಿರ್ಧಿಷ್ಟ ಹೋರಾಟಕ್ಕೆ ಬರುವಾಗ ಅನಿರ್ಧಿಷ್ಟ ಧರಣಿ ಗೆ ಅವಶ್ಯಕತೆ ಇರುವ ಆಹಾರ ಮತ್ತು ಹಾಸಿಗೆ ಸಹಿತ ಬರಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾವುವುದೆಂದು ತಿಳಿಸಿದರು.

ಈ ಸಂದಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್ ಹರಸೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ, ರಾಜ್ಯ ಸಹ ಕಾರ್ಯದರ್ಶಿ ಜಂಟಿ ಶಿವಾನಂದ ಕವಲಗಾ ಬಿ ಇವರುಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

46 mins ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

12 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

14 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

14 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

14 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420