ಸರಸಂಬಾ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ನಿ. ಜಿಲ್ಲೆಗೆ ಮಾದರಿ

ಆಳಂದ: ಈ ಭಾಗದಲ್ಲಿ ಸಹಕಾರಿ ಕ್ಷೇತ್ರಗಳ ದಿವಾಳಿಯ ಅಂಚಿನಲ್ಲಿರುವ ಹೊತ್ತಿನಲ್ಲೇ ತಾಲೂಕಿನ ಗ್ರಾಮೀಣ ಭಾಗದ ಸೌಹಾರ್ದ ಸಹಕಾರಿ ನಿಯಮಿತವೊಂದು ಕೋಟ್ಯಂತರ ವಾಹಿವಾಟಿನ ಮೂಲಕ ಆರ್ಥಿಕ ಕ್ರಾಂತಿಯ ಮೂಲಕ ಈಗ ಹಳ್ಳಿಯಿಂದ ಪಟ್ಟಣಕ್ಕೂ ತನ್ನ ಶಾಖೆ ವಿಸ್ತರಿಸುವ ಮೂಲಕ ಜಿಲ್ಲೆಗೆ ಮಾದರಿ ಎನಿಸಿಕೊಂಡಿದೆ.

ತಾಲೂಕಿನ ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರ ನಿಮಿತವೇ ಇಂದು ಮಾದರಿಯಾದ ಸೌಹಾರ್ದ ಎಂಬ ಹೆಗ್ಗಳಿಕೆ ತನ್ನದಾಗಿಸಿದೆ.

ಕಳೆದ ೨೦೦೨ರಲ್ಲಿ ಸುಮಾರು ೪೦೦ ಜನ ಸದಸ್ಯರಿಂದ ೨ಲಕ್ಷ ರೂಪಾಯಿ ಶೇರು ಮೊತ್ತದೊಂದಿಗೆ ಹುಟ್ಟಿಕೊಂಡ ಸರಸಂಬಾದ ಶ್ರೀಧನಲಕ್ಷ್ಮೀ ಸಹಾರ್ದ ಸಹಕಾರವೂ ಇಂದು ೪ ಸಾವಿರ ಸದಸ್ಯರನ್ನು ಹೊಂದಿ ೧.೫ ಕೋಟಿ ರೂಪಾಯಿ ಶೇರು ಮೊತ್ತ ಹಾಗೂ ೮.೫. ಕೋಟಿ ರೂಪಾಯಿ ದುಡಿಯುವ ಬಂಡವಾಳದೊಂದಿಗೆ ಈಗ ಬರೋಬರಿ ೪೦ ಕೋಟಿ ರೂಪಾಯಿ ವಾರ್ಷಿಕ ಬಂಡವಾಳದ ವೈಹಿವಾಟಿಗೆ ತಲುಪಿದ್ದು, ೩೬,೧೪,೦೮೦ ವಾರ್ಷಿಕ ನಿವ್ವಳ ಲಾಭ ಹೊಂದಿಗೆ ಸಹಕಾರಿ ಕ್ಷೇತ್ರದ ನಿಜಾರ್ಥ ಕಲ್ಪಿಸಿಕೊಟ್ಟಿದೆ.

ಈಗಾಗಲೇ ಸರಂಬಾ, ಹಿರೋಳಿ ಮತ್ತು ಪಡಸಾವಳಿ ಈ ಮೂರು ಶಾಖೆಗಳು ವೈಹಿವಾಟಿನೊಂದಿಗೆ ಸೆ. ೨೮ರಂದು ಆಳಂದನಲ್ಲಿ ೪ನೇ ಶಾಖೆ ಉದ್ಘಾಟನೆ ನಡೆಯಲಿದೆ. ಶೀಘ್ರವೇ ಹೋಬಳಿ ಕೇಂದ್ರ ಮಾದನಹಿಪ್ಪರಗಾದಲ್ಲಿ ಅನುಮತಿ ಪಡೆದ ೫ನೇ ಶಾಖೆ ಕಾರ್ಯ ಪ್ರಗತಿಯಲಿದ್ದು, ಒಟ್ಟಾರೆ ಇದರ ಉದ್ದೇಶ ಶ್ರೀಸಾಮಾನ್ಯರಿಗೆ ನೆರವಾಗಿ ಆರ್ಥಿಕ ಕ್ರಾಂತಿಯನ್ನೇ ಕೈಗೊಳ್ಳಲು ಆಡಳಿತ ಮಂಡಳಿ ಹೆಜ್ಜೆಹಾಕಿದು ಗಮರ್ನಾ ಎನಿಸಿದೆ.

ಪ್ರಗತಿಗೆ ಕಾರಣ: ಈ ಸಹಕಾರ ಸಂಘವು ಜಿಲ್ಲೆಯಲ್ಲೇ ಅತಿ ಕಡಿಮೆ ಮತ್ತು ಸರಳ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಿದ್ದೇ ಇಂದು ಹೆಚ್ಚಿನ ವೈಹಿವಾಟಿಕೆ ಕಾರಣವಾಗಿ ಮಾದರಿ ಏನಿಸಿಕೊಂಡಿದೆ. ಇದರ ಶಾಖೆಗಳಲ್ಲಿ ಸದಸ್ಯರಿಗೆ ಹೆಚ್ಚಿನ ಸೇವೆ ಅನುಕೂಲಕ್ಕಾಗಿ ವಾರದ ರಜೆ ರಹಿತ ಕಾರ್ಯನಿರ್ವಹಿಸುವುದು ಮತ್ತೊಂದು ವಿಶೇಷವೇ ಆಗಿದೆ.

ಸೌಲಭ್ಯದಲ್ಲೂ ಎತ್ತಿದ ಕೈ: ಆಕಸ್ಮಾತ ಸದಸ್ಯರು ೨೫ ವರ್ಷ ಮೇಲ್ಟವರು ಮರಣ ಹೊಂದಿದರೆ ೨೫ ಸಾವಿರ ೫೦ವರ್ಷ ಮೇಲ್ಟವರು ಮೃತರಾದರೆ ೫೦ ಸಾವಿರ ಮರಣಾಂತರ ನಿಧಿ ಹೀಗೆ ವರ್ಷಕ್ಕೆ ೫ರಿಂದ ೬ಲಕ್ಷ ರೂಪಾಯಿ ನೀಡುತ್ತಿದೆ. ಅಲ್ಲದೆ, ಸದಸ್ಯರಿಗೆ ಎಲ್‌ಐಸಿ ಪ್ರಾಯೋಜಿತ ಮೈಕ್ರೋ ಇನ್ಸೂರೇನ್ಸ್ ಸೌಲಭ್ಯವಿದೆ. ಇದರಿಂದ ಶಾಖೆಗೂ ೧.೫೦ಲಕ್ಷ ರೂ ವಾರ್ಷಿಕ ಕಮಿಷನ್ ಬರುತ್ತಿದೆ. ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಶಾಖೆಯ ವ್ಯಾಪ್ತಿಯ ಗ್ರಾಮಗಳಲ್ಲಿ ೫ರಿಂದ೧೦ನೇ ತರಗತಿಯ ವರೆಗಿನ ಶಾಲೆಗಳಿಗೆ ಪ್ರತಿ ತರಗತಿಗೆ ೧.೫೦ ಸಾವಿರ ರೂ. ಪ್ರೋತ್ಸಾಧನ ಹಾಗೂ ೧೦ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ೧೦ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗೆ ೫ ಸಾವಿರ ಬಹುಮಾನ ನೀಡುತ್ತಾ ಬಂದಿದೆ.

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ೧೫೦ ಮಂದಿಗೆ ತಲಾ ೨೫ ಸಾವಿರ ರೂ.ಗಳು ಬಡ್ಡಿರಹಿತ ಸಾಲವನ್ನು ನೀಡಿ ಶೌಚಾಲಗಳನ್ನು ನಿರ್ಮಾಣಕ್ಕೆ ಪ್ರೋತ್ಸಾಹಿಸಿದೆ. ಸದಸ್ಯರಿಗೆ ಕಲ್ಯಾಣ ನಿಧಿಯೂ ಸ್ಥಾಪನೆ ಮಾಡಿದೆ.

ಸೆ. ೨೮ರಂದು ಬೆಳಗಿನ ೧೧:೪೫ಕ್ಕೆ ಆಳಂದನಲ್ಲಿ ನೂತನ ಶಾಖೆ ಉದ್ಘಾಟನೆ ಹಾಗೂ ೧೯ನೇ ವಾಷಿರ್ಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ.

ಶ್ರೀಸಾಮನ್ಯನ ಆರ್ಥಿಕ ವೃದ್ಧಿಯೇ ಗುರಿ: ಗ್ರಾಮೀಣ ಜನರಿಗೆ ಆರ್ಥಿಕ ಸ್ವಾವಲಂಭಿಗಳಾಗಿಸಿ ಸರ್ವೋತೋಮುಖ ಅಭಿವೃದ್ಧಿಯ ಕಲ್ಪಿಸುವ ಉದ್ದೇಶದೊಂದಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಟ್ಟಿದ್ದು, ಈ ಬಾರಿ ೯೦ ಲಕ್ಷ ರೂ.ನಿವ್ವಳ ಲಾಭ ಬಂದಿದೆ, ಸದಸ್ಯರಿಗೆ ಲಾಭದ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕಾರ್ಯಗಳಿಗೂ ನಿಧಿ ಖರ್ಚು ಮಾಡಲಾಗುತ್ತಿದೆ. ಸದಸ್ಯರಲ್ಲಿ ಸಹಕಾರಿ ಕ್ಷೇತ್ರದ ಅರಿವಿನಿಂದಾಗಿ ನಾವು ಯಶಸ್ವಿಯತ್ತ ಸಾಗುತ್ತಿದ್ದೇವೆ. – ಮಹಾಂತಪ್ಪ ಆಲೂರೆ ಸರಸಂಬಾ, ಸಂಸ್ಥಾಪಕ ಅಧ್ಯಕ್ಷರು ಶ್ರೀಧನಲಕ್ಷ್ಮೀ ಸೌಹಾರ್ದ ಸಹಕಾರ ನಿ. ಸರಸಂಬಾ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420