ಕಲಬುರಗಿ: ಕಲಾವಿದ ರಚಿಸುವ ಕಲಾಕೃತಿಗಳಲ್ಲಿ ವಿಷಯ ಮತ್ತು ಸಾಮಾಜಿಕ ಸಂದೇಶಗಳಿಗೆ ಹೆಚ್ಚಿನ ಮಹತ್ವಕೊಡಬೇಕೆಂದು ಹಿರಿಯ ಕಲಾವಿದರಾದ ಬಸವರಾಜ ಎಲ್.ಜಾನೆ ಅವರು ಸಲಹೆನೀಡಿದರು.
ಅವರು ನಗರದ ಎಸಾನ್ ಡಿಜೈನ್ ಸ್ಟುಡಿಯೋದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯೋಗದಲ್ಲಿ ಕಲಾವಿದ ಡಾ.ರೆಹಮಾನ್ ಪಟೇಲ್ ಅವರು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಏಕ ವ್ಯಕ್ತಿ ಚಿತ್ರಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾ ಸ್ಥಳೀಯ ಕಲಾವಿದರು ಇಲ್ಲಿನ ಕಲಾ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ರೀತಿಯಲ್ಲಿ ತಮ್ಮ ಕಲಾಕುಂಚದ ಮೂಲಕ ಬೆಳಕಿಗೆ ತಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಕಲಾವಿದರಿಗೆ ಧನಸಹಾಯ ನೀಡುತ್ತಿರುವುದು ಸಂತಸದ ಸಂಗತಿ. ಈ ವ್ಯವಸ್ಥೆ ಬೇರೆ ರಾಜ್ಯದಲ್ಲಿಲ್ಲ ಆದ್ದರಿಂದ ಇದರ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗುಲಬರ್ಗ ವಿಶ್ವ ವಿದ್ಯಾಲಯದದೃಶ್ಯಕಲಾ ವಿಭಾಗದ ಸಂಯೋಜಕರಾದ ಪ್ರೊ. ಅಬ್ದುಲ್ ರಬ್ ಉಸ್ತಾದ್ ಅವರು ಮಾತನಾಡುತ್ತಾ ಕಲೆಯನ್ನು ಸಾಮಾನ್ಯ ಜನ ರಕಣ್ಣಿಗೆ ಮುಟ್ಟುವಂತೆ ಕಾಯಕವನ್ನು ನಮ್ಮಕಲಾವಿದರು ಮಾಡುತ್ತಿರುವುದು ವಿಶೇಷವಾಗಿದೆ. ಇದೇರೀತಿ ಸ್ಥಳೀಯ ಕಲಾ ಸಂಸ್ಕೃತಿಯ ಹೊಂದಿರುವ ಐತಿಹಾಸಿಕ ಹಾಗೂ ಸ್ಮಾರಕಗಳ ಮೇಲೆ ತಮ್ಮ ಕಲಾಕೃತಿಗಳನ್ನು ಕಲಾವಿದರು ರಚಿಸಲಿ ಎಂದು ಸಲಹೆ ನೀಡಿದರು.
ಇನ್ನೋರ್ವ ಹಿರಿಯಕಲಾವಿದರಾದ ಡಾ.ಎಸ್.ಎಮ್.ನೀಲಾ ಅವರು ಮಾತನಾಡುತ್ತಾ ಹಿರಿಯಕಲಾವಿದರ ಪ್ರೇರಣೆಯಿಂದ ಕಿರಿಯಕಲಾವಿದರು ಕಲಾಕೃತಿಗಳನ್ನು ರಚಿಸಬೇಕು. ಕಲಾವಿದರು ಕೇವಲ ಧನಸಹಾಯದ ಹಿಂದೆ ಬೆನ್ನು ಬೀಳದೇ ಸ್ವಂತಿಕೆಯಿಂದ ಕಲಾಕೃತಿಗಳನ್ನು ಪ್ರರ್ದಶಿಸುವ ಪ್ರಯತ್ನ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಲಾವಿದರೆ ಹಮಾನ್ ಪಟೇಲ್ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಲಾಕಡೌನ್, ಮಹಿಳೆಯರ ಮೇಲಿನ ದೌರ್ಜನ್ಯ, ನೋಟ ಬಂದಿ ಮುಂತಾದ ವಿಷಯಗಳ ಮೇಲೆ ಕಲಾಕೃತಿಗಳನ್ನು ರಚಿಸಿರುವೆ ಇದರಿಂದ ಸಾಮಾಜಿಕವಾಗಿ ಜಾಗೃತಿ ಮೂಡಿಸುವಂತಹ ಸಂಯೋಜನೆಯಲ್ಲಿ ತೊಡಗಿಸಿಕೊಂಡಿರುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಬಸವರಾಜ್ ಉಪ್ಪಿನ್, ಮಹಮ್ಮದ ಆಯಾಜೋದ್ಧಿನ್ ಪಟೇಲ್, ಮಂಜುಳಾ ಜಾನೆ, ಲಕ್ಷ್ಮೀ ಪೋದ್ದಾರ್, ನೀಲಾಂಬಿಕಾ, ಅಂಬಿಕಾ, ರೇವಣಸಿದ್ಪಪ್ಪ ಹೊಟ್ಟಿ, ರಾಮಗಿರಿ ಪೋಲಿಸ್ ಪಾಟೀಲ್, ಅಶೋಕ ಚಿತ್ತಕೋಟಿ, ಚಿದಾನಂದರೂಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ.ಶಾಹೀದ್ ಪಾಷಾ ಅವರುಕಾರ್ಯಕ್ರಮವನ್ನು ನಿರೂಪಿಸಿದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…